ಅಭಿನಂದನ್ ಸಂಸ್ಥೆಯಿಂದ ಕುಗ್ರಾಮ ಹಳ್ಳಿಯ ಶಾಲೆ ಸ್ವಚ್ಛತೆ
ಮಸ್ಕಿ,ತಾಲೂಕಿನ ಕುಗ್ರಾಮ ಹಳ್ಳಿಯಾಗಿರುವ ಬಸ್ಸಿನ ಸೌಲಭ್ಯವನ್ನು ಕಾಣದಿರುವ ವೆಂಕಟಾಪುರ ತಾಂಡದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗೋಡೆಗಳಿಗೆ ಸುಣ್ಣ ಬಣ್ಣವನ್ನು ಹಚ್ಚುವ ಮೂಲಕ ಆವರಣವನ್ನು ಶುಚಿಗೊಳಿಸಿ 114ನೇ ಸೆಂಡೆ ಫಾರ್ ಸೋಷಿಯಲ್ ವರ್ಕ್ ಕಾರ್ಯವನ್ನು ಯಶಸ್ವಿಗೊಳಿಸಲಾಯಿತು.
ಬಸ್ಸಿನ ಸೌಲಭ್ಯವನ್ನು ಕಾಣದಿರುವ ವೆಂಕಟಾಪುರ ತಾಂಡದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗೋಡೆಗಳಿಗೆ ಸುಣ್ಣ ಬಣ್ಣವನ್ನು ಹಚ್ಚುವ ಮೂಲಕ ಆವರಣವನ್ನು ಶುಚಿಗೊಳಿಸಿ 114ನೇ ಸಂಡೇ ಫಾರ್ ಸೋಷಿಯಲ್ ವರ್ಕ್ ಕಾರ್ಯದ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಗುರುಗಳಾದ ಸುರೇಶ್ ಭಾಗಲವಾಡ ನಮ್ಮ ಭಾಗದ ಸರ್ಕಾರಿ ಶಾಲೆಗಳಿಗೆ ಅಭಿನಂದನ್ ಸಂಸ್ಥೆಯು ಪ್ರತಿ ರವಿವಾರ ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತಿದೆ ಇಂತಹ ಸೇವಾ ಸಂಸ್ಥೆಗಳನ್ನು ಭಾರತ ಸರ್ಕಾರ ಗುರುತಿಸಬೇಕೆಂದು ಹೇಳಿದರು.
ಸಂದರ್ಭದಲ್ಲಿ ಅಭಿನಂದನ್ ಸಂಸ್ಥೆಯ ಸಂಸ್ಥಾಪಕ ರಾಮಣ್ಣ ಹಂಪರಗುಂದಿ, ಜಾಫರ್ಮಿಯಾ, ಅಮಿತ್ ಕುಮಾರ್ ಪುಟ್ಟಿ ,ಕಿಶೋರ್, ಅಂಬು ಭೋವಿ,ನವಾಜ್, ಹಲವಾರು ಯುವಕರು ಉಪಸ್ಥಿತರಿದ್ದರು.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ