ಕೊಟ್ಟೂರು :ಹದಿನೇಳು ವರ್ಷಗಳ ನಂತರ ಚಿರಿಬಿ ಮೂಗಬಸವೇಶ್ವರ ಸ್ವಾಮಿಯ ರಥೋತ್ಸವ ನಡೆಯುವುದೋ ಇಲ್ಲವೋ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಜಾತ್ರೆಯ ಪ್ರಯುಕ್ತ ಚಿರಿಬಿ ಗ್ರಾಮಸ್ಥರ ಸಭೆಯನ್ನು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು. ಈ ಸಭೆಯಲ್ಲಿ ಚಿರಿಬಿ ಗ್ರಾಮಸ್ಥರು ಹಾಜರಾಗಿ, ಮೂಗಬಸವೇಶ್ವರ ದೇವಸ್ಥಾನವು ಚಿರಿಬಿ ಗ್ರಾಮಕ್ಕೆ ಸೇರಿದ್ದೆಂದು ಇತಿಹಾಸದ ದಾಖಲೆಗಳನ್ನು ಮತ್ತು ಜರ್ಮಲಿಯ ಪಾಳೆಗಾರರಾದ ಇಮ್ಮಡಿ ಸಿದ್ದಪ್ಪನಾಯಕ ಈ ದೇವಸ್ಥಾನಕ್ಕೆ ಭೂ ದಾನ ನೀಡಿ, ಮೂಗಬಸವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಕಾರಣಕರ್ತರಾಗಿದ್ದಾರೆ. ಆಗ ಕಂದಾಯ ಜಮೀನು ರಾಂಪುರ ಎಂದು ಇದ್ದುದ್ದಕ್ಕೆ ಅದನ್ನು ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ, ರಾಂಪುರ ಎಂದು ಕರೆಯುತ್ತಿರುವುದಕ್ಕೆ ನಮ್ಮ ತಕರಾರಿದೆ. ಅಲ್ಲದೆ ರಥೋತ್ಸವದ ಬ್ಯಾನರ್ಗಳಲ್ಲಿಯೂ ಸಹ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ, ರಾಂಪುರ ಎಂದು ಹಾಕಿರುವುದಕ್ಕಷ್ಟೇ ನಮ್ಮ ತಕರಾರು ಎಂದರು. ಈ ಬಗ್ಗೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ವಿಚಾರಿಸಿದರೆ, ಡಿ.ಸಿ.ಯವರನ್ನು ಕೇಳಿ, ಎ.ಸಿ.ಯವರನ್ನು ಕೇಳಿ ಎಂಬ ಉಡಾಫೆಯ ಮಾತುಗಳನ್ನು ಚಿರಿಬಿ ಗ್ರಾಮದ ಮುಖಂಡರಿಗೆ ಹೇಳಿದ್ದು, ಈ ಸಭೆ ನಡೆಯಲು ಕಾರಣಕರ್ತರಾಗಿದ್ದಾರೆ ಎಂದರು. ಎರಡು ಗ್ರಾಮಗಳ ಈ ಗೊಂದಲಕ್ಕೆ ಧಾರ್ಮಿಕ ದತ್ತಿ ಇಲಾಖೆಯ ಇ.ಒ. ಹನುಮಂತಪ್ಪರವರೇ ಕಾರಣ ಎಂದರು. ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ