ಪೋಸ್ಟ್‌ಗಳು

ಕಲ್ಯಾಣ ಎಂಬ ಪದ ಇಡೀ ಕರ್ನಾಟಕದ ಅಸ್ಮಿತೆ!

ಇಮೇಜ್
ಕಲ್ಯಾಣ ಎಂಬ ಪದ ಇಡೀ ಕರ್ನಾಟಕದ ಅಸ್ಮಿತೆ! ಕರುನಾಡಿನಲ್ಲಿ ನಡೆದ ದೊಡ್ಡ ಕ್ರಾಂತಿ, ಪ್ರಪಂಚಕ್ಕೆ ಮಾದರಿ ಎಂಬAತೆ ಸೃಷ್ಟಿಯಾದ ಹೊಸ ಇತಿಹಾಸ ಎಂದಿಗೂ ಅಜರಾಮರ. ಮನುಷ್ಯ ಮನುಷ್ಯರ ನಡುವೆ ಇದ್ದ ಕಂದಕವನ್ನು ದೂರ ಮಾಡಿ, ಎಲ್ಲರೂ ಸಮಾನರು ಎಂಬುದನ್ನು ಪ್ರತಿಪಾದನೆ ಮಾಡಿದ ಕಲ್ಯಾಣ ಕರ್ನಾಟಕ ಕ್ರಾಂತಿ ನಿಜಕ್ಕೂ ಇಡೀ ಜಗತ್ತಿನ ಇತಿಹಾಸದ ಭಾಗವಾಗಬೇಕಿತ್ತು. ಹೊರ ಜಗತ್ತಿನ ನಂಟು ಜನಸಾಮಾನ್ಯರ ಜೊತೆಗೆ ಇರದೇ ಹೋದದ್ದು ಒಂದು ಕಡೆಯಾದರೆ ಹೊರ ಜಗತ್ತಿನೊಂದಿಗೆ ನಂಟು ಹೊಂದಿದ್ದ ನಮ್ಮವರೇ ಇದನ್ನು ಬರೋಬ್ಬರಿ 4 ಶತಮಾನಗಳ ಕಾಲ ಕತ್ತಲಲ್ಲಿ ಇಟ್ಟಿದ್ದಕ್ಕೆ ಇದು ಕೇವಲ ಕರುನಾಡಿಗೆ ಸೀಮಿತವಾದ ಇತಿಹಾಸ ಆಗಬೇಕಾಯಿತು. 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ರೂಪಿತವಾದ ಅನುಭವ ಮಂಟಪ ಮನುಷ್ಯರ ನಡುವೆ ಇದ್ದ ಬೇಧ, ಭಾವ ತಡೆಯುವಲ್ಲಿ ತಕ್ಕಮಟ್ಟಿನ ಯಶ ಕಂಡಿತು. ತೀರಾ ತಳಪಾಯದಲ್ಲಿ ಇದ್ದ ಅದೆಷ್ಟೋ ಸಮುದಾಯಗಳು ಅಕ್ಷರ ಜ್ಞಾನ ಕಂಡುಕೊAಡವು. ತಾವೂ ಇತರರಂತೆ ಮನುಷ್ಯರೇ ಎಂಬುದನ್ನು ಮೊಟ್ಟ ಮೊದಲ ಬಾರಿಗೆ ಮನಗಂಡರು. ಇಂತಹ ದೊಡ್ಡ ಕ್ರಾಂತಿಗೆ ನೆಲೆಯಾದ ‘ಬಸವ ಕಲ್ಯಾಣ’ ಇರುವುದು ನಮ್ಮ ಹಿಂದಿನ ಹೈದರಾಬಾದ್ ಕರ್ನಾಟಕ ಎಂದು ಗುರುತಿಸಿಕೊಂಡಿದ್ದ ಬೀದರ್ ಜಿಲ್ಲೆಯಲ್ಲಿ! ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ, ವಿಜಯನಗರ ಜಿಲ್ಲೆಗಳನ್ನೊಳಗೊಂಡ ಈ ಭಾಗ ಬಹುತೇಕ ನಿಜಾಮರ ಆಳ್ವಿಕೆಯಲ್ಲಿ ಇತ್ತು. ಭಾರತಕ್ಕ...

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ಇಮೇಜ್
  ಕೊಟ್ಟೂರು : ರಾಜ್ಯದಲ್ಲಿ ಪಡಿತರದಿಂದಲೇ ತಮ್ಮ ನಿತ್ಯ ಜೀವನ ನಡೆಸುವ ಹಲವಾರು ಕುಟುಂಬಗಳಿವೆ. ಪ್ರತಿ ತಿಂಗಳು ಪಡಿತರ ತಂದು ಮನೆಯಲ್ಲಿ ಊಟ ಮಾಡುವ ಎಷ್ಟೋ ಕುಟುಂಬಗಳು ಇದನ್ನೇ ನಂಬಿಕೊಂಡಿವೆ. ಆದರೆ ಈ ತಿಂಗಳ ಪಡಿತರ ವಿತರಣೆಯಲ್ಲಿ ಆನ್‌ಲೈನ್ ಸರ್ವರ್ ದೋಷ ಬಂದಿರುವುದರಿಂದ ಪಡಿತರ ವಿತರಣೆಗೆ ಅಡಚಣೆ ಉಂಟಾಗಿದೆ. ಕೊಟ್ಟೂರಿನ ಅಕ್ಕಿ ವಿತರಣಾ ಹಲವು ಕೇಂದ್ರದಲ್ಲಿ ಬೆಳಗಿನಿಂದಲೂ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಪಡಿತರ ವಿತರಣಾ ಕೇಂದ್ರಗಳ ಬಳಿ ಬಂದು ಕಾದು ಕಾದು ಸುಸ್ತಾಗಿದ್ದಾರೆ.  ಆಹಾರ ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡಿದೆ. ಮೇಲಾಧಿಕಾರಿಗಳು ಇತ್ತ ಗಮನ ಹರಿಸಿ, ಶೀಘ್ರವೇ ಸರ್ವರ್ ದೋಷಗಳನ್ನು ಪರಿಹರಿಸಲು ಮುಂದಾಗಬೇಕಿದೆ.   ಆಹಾರ ಇಲಾಖೆಯ ಉಪನಿರ್ದೇಶಕರಿಗೆ ಕರೆ ಮಾಡಿದರೆ, ಫೋನ್ ಸ್ವೀಕರಿಸುತ್ತಿಲ್ಲ, ನಮ್ಮ ಕಷ್ಟ ಕೇಳುವವರು ಯಾರು ಎಂದು ಪತ್ರಿಕಾ ಮೂಲಕ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು   ಸರ್ವರ್ ದೋಷವಿರುವುದನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ, ಸರಿಪಡಿಸಲು ಕ್ರಮ ವಹಿಸುವೆ. ವಿಜಯನಗರ ಜಿಲ್ಲಾಧಿಕಾರಿಗಳು ನಮ್ಮ ಲಾಗಿನ್ ಮತ್ತು ಪಬ್ಲಿಕ್ ಲಾಗಿನ್ ಇರುವುದಿಲ್ಲ ಆದರೂ ಕೂಡ ಸರ್ವರ್ ಡೌನ್ ಆಗಿದ್ದು, ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಮಾಡಲಾಗಿದೆ. ಶೀಘ್ರವೇ ಇರುವ ದೋಷವನ್ನು ಸರಿಪಡಿಸಿ ಶೀಘ್ರ ಪಡಿತರ ವಿತರಣೆಗೆ ಕ್ರಮ ವಹ...

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*

ಇಮೇಜ್
ಕೊಟ್ಟೂರು ಪಟ್ಟಣ ಪಂಚಾಯಿತಿಗೆ 2018ರಲ್ಲಿ ಚುನಾವಣೆ ನಡೆದು, ಆಯ್ಕೆಯಾದ ಸದಸ್ಯರುಗಳು ಆರಂಭದಲ್ಲೇ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಸಂಬಂಧ ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ ಹೋಗಿದ್ದರು. ನಂತರ ಘನ ನ್ಯಾಯಾಲಯವು ಅಧ್ಯಕ್ಷ ಉಪಾಧ್ಯಕ್ಷರ ಹಸಿರು ನಿಶಾನೆ ತೋರಿಸಿದ ಹಿನ್ನೆಲೆಯಲ್ಲಿ ದಿನಾಂಕ 06-11-2020 ರಂದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗಿತ್ತು. ಅಧ್ಯಕ್ಷರಾಗಿ ಭಾರತೀ ಸುಧಾಕರ್ ಪಾಟೀಲ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಶಫೀ ಆಯ್ಕೆಯಾಗಿದ್ದರು. ಎರಡೂವರೆ ವರ್ಷಗಳ ನಂತರ ದಿನಾಂಕ 18-05-2023 ರಿಂದ 30-08-2024 ರವರೆಗೆ ಮಧ್ಯದ ಅವಧಿಯಲ್ಲಿ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿ ಆದೇಶ ಹೊರಡಿಸಿತ್ತು. ದಿನಾಂಕ 30-08-2024 ರಿಂದ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗಿತ್ತು. ಪಕ್ಷೇತರರಾಗಿ ಗೆದ್ದುಬಂದ ಬಿ.ರೇಖಾ ಅಧ್ಯಕ್ಷರಾಗಿ, ಸಿದ್ದಯ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ದಿನಾಂಕ 06-11-2025ಕ್ಕೆ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಮುಗಿದು, ಅಲ್ಲಿಂದ ಮತ್ತೇ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಘನ ನ್ಯಾಯಾಲಯವು ಈ ಪ್ರಕರಣವನ್ನು ಸುದೀರ್ಘವಾಗಿ ಆಲಿಸಿ, ದಿನಾಂಕ 12-12-2025 ರಂದು ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಿದ್ದರಿಂದ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿದೆ. ಆಡಳಿತಾಧಿಕಾರಿಗಳಾಗಿ ಕೊಟ್ಟೂರು ತಹಶೀಲ್ದಾರರು ಹಾಗೂ ತಾಲ್ಲೂಕು ದಂಡಾಧಿಕಾರಿಗಳಾದ ಜಿ.ಕೆ. ಅಮರೇಶ್, ಕೊಟ್ಟೂರು ಪಟ್ಟಣ ಪಂಚಾಯಿತಿ ಆಡಳ...

ಆಧಾರದ ಎಲ್ಲಾ ಸೌಲಭ್ಯಗಳು ಅಂಚೆ ಕಛೇರಿಯಲ್ಲಿ ಲಭ್ಯ

ಇಮೇಜ್
  ಕೊಟ್ಟೂರು: ಅಂಚೆ ಕಛೇರಿಯು ಗ್ರಾಹಕರಿಗೆ ನೂರಕ್ಕೂ ಹೆಚ್ಚು ಸೌಲಭ್ಯಗಳನ್ನು ಕೊಡುತ್ತಿದೆ, ಕಳೆದ ಒಂದು ದಶಕದಿಂದಲೂ ಆಧಾರದ ಎಲ್ಲಾ ಸೌಲಭ್ಯಗಳನ್ನು ಅಂಚೆ ಕಛೇರಿಯಲ್ಲಿ ಕೊಡಲಾಗುತ್ತದೆ, ಈ ನಿಟ್ಟಿನಲ್ಲಿ ಕೊಟ್ಟೂರಿನ ನೂತನ ಅಂಚೆ ಕಛೇರಿಯು ಕೊಟ್ಟೂರು ಹಾಗೂ ಸುತ್ತಮುತ್ತಲಿನ ಎಲ್ಲಾ ನಾಗರಿಕರಿಗೆ ಹೊಸ ಆಧಾರ್ ಕಾರ್ಡ್ ಮಾಡಿಸುವುದು, ಆಧಾರ್ ಕಾರ್ಡ್ ನಲ್ಲಿ ಫೋನ್ ನಂಬರ್ ತಿದ್ದುಪಡಿ ಮಾಡುವುದು, ಹೆಸರು ಮತ್ತು ವಿಳಾಸಗಳನ್ನು ತಿದ್ದುಪಡಿ ಮಾಡುವುದು, ಆಧಾರ್ ಬಯೋಮೆಟ್ರಿಕ್ ಮಾಡುವುದು, ಆಧಾರ್ ಕಾರ್ಡ್ ಪ್ರಿಂಟ್ ತೆಗೆಯುವುದು ಈ ಎಲ್ಲಾ ಸೌಲಭ್ಯಗಳು ಕೊಟ್ಟೂರಿನ ನೂತನ ಅಂಚೆ ಕಛೇರಿಯಲ್ಲಿ ಲಭ್ಯವಿವೆ, ಆಧಾರ್ ಕಾರ್ಡ್ ನಾಗರೀಕರ ಹಲವಾರು ಕೆಲಸ ಕಾರ್ಯಗಳಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ, ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದೆ, ಈ ನಿಟ್ಟಿನಲ್ಲಿ ನಾಗರಿಕರಿಗೆ ಆಧಾರ್ ಕಾರ್ಡ್ ತಿದ್ದುಪಡಿ ಅವಶ್ಯಕತೆ ತುಂಬಾ ಇದೆ, ಈ ಸೌಲಭ್ಯಗಳನ್ನು ನಾಗರಿಕರು ಬಳಸಿಕೊಳ್ಳಬೇಕೆಂದು ಅಂಚೆ ಅಧೀಕ್ಷಕರಾದ ಪಿ ಚಿದಾನಂದ ಅವರು ಪತ್ರಿಕೆಗೆ ತಿಳಿಸಿದರು, ( ಬಾಕ್ಸ ಐಟಂ ) ಅಂಚೆ ಕಛೇರಿಯ ಹಳೆ ಕಟ್ಟಡದಲ್ಲಿ ನಾಗರಿಕರು ಬಂದು ನಿಲ್ಲುವ ಜಾಗದ ಅನಾನುಕೂಲ ಬಾಳ ಆಗಿದ್ದರಿಂದ ಆಧಾರ್ ಮಾಡಲು ತೊಂದರೆಯಾಗುತ್ತಿತ್ತು, ನೂತನ ಅಂಚೆ ಕಚೇರಿಯಲ್ಲಿ ಆಧಾರಿಗೋಸ್ಕರ ಬೇರೆ ವಿಭಾಗವನ್ನೇ ಮಾಡಿದ್ದಾರೆ ಕೊಟ್ಟೂರು ತಾಲೂಕಿನ ಎಲ್ಲಾ ನಾಗರಿಕರಿಗೂ ಈ ಸೌಲಭ್ಯ ಸ...

*ಡಾ || ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಹದಿನಾರನೇ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮ*

ಇಮೇಜ್
ಕೊಟ್ಟೂರು : ಇಂದು ಕಾಲೇಜ್ ಕೊಟ್ಟೂರಿನಲ್ಲಿ ಗವಾಯಿಗಳವರ ಹದಿನಾರನೇ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಾ || ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರು ಉಭಯ ಗಾನ ವಿಶಾರದರು, ತ್ರಿಭಾಷಾ ಕವಿವರ್ಯ, ಸಕಲ ವಾದ್ಯ ಕಂಠೀರವ ನಾಡೋಜ ಹಾಗೂ ಕಾಳಿದಾಸ ಪ್ರಶಸ್ತಿ ವಿಜೇತರು ಪರಮಪೂಜ್ಯ ಡಾ || ಪಂಡಿತ್ ಪುಟ್ಟರಾಜ ಗವಾಯಿಗಳವರ ಹದಿನೈದನೇ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ದಿನಾಂಕ 12-12-2024 ರ ಶುಕ್ರವಾರದಂದು ಸಂಜೆ 6 :00 ಕ್ಕೆ ಸರಿಯಾಗಿ ಕೊಟ್ಟೂರಿನ ಇಂದು ಕಾಲೇಜ್ ನಲ್ಲಿ ಆಯೋಜನೆ ಮಾಡಲಾಗಿದೆ. ಅಂದು ಸಂಜೆ *ಸೋನಿ ಹಿಂದಿ ವಾಹಿನಿಯ Indion Idol ಕಾರ್ಯಕ್ರಮ ಖ್ಯಾತಿಯ ಹಾಗೂ Zee ಕನ್ನಡ ಸರಿಗಮಪ ಕಾರ್ಯಕ್ರಮ ಖ್ಯಾತಿಯ ಗಾಯಕಿ ಸರಿಗಮಪ ಸೀಸನ್ 21 ರ ವಿನ್ನರ್ ಶಿವಾನಿ ಶಿವದಾಸ್ ತಂಡದವರಿಂದ* ಸಂಗೀತ ಕಾರ್ಯಕ್ರಮವಿರುತ್ತದೆ ಆತ್ಮೀಯ ಕಲಾಭಿಮಾನಿಗಳು ಕಲಾ ಪ್ರೋತ್ಸಾಹಕರು ತಾವೆಲ್ಲರೂ ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಕೇಳಿಕೊಳ್ಳುತ್ತೇವೆ. ಮತ್ತು ಸುಧಾಕರ ಪಾಟೀಲ್ ಅಧ್ಯಕ್ಷರು ಡಾ || ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಸೇವಾ ಸಮಿತಿ ಕೊಟ್ಟೂರು ವತಿಯಿಂದ ಸರ್ವರಿಗೂ ಪ್ರೀತಿಪೂರ್ವಕ ಸುಸ್ವಾಗತ ಪತ್ರಿಕೆ ಮೂಲಕ ತಿಳಿಸಲಾಯಿತು.

" ಶ್ರೀ ಗುರು ಕೊಟ್ಟೂರೇಶ್ವರ ಕಾರ್ತಿಕೋತ್ಸವದಲ್ಲಿ ಜಿಲ್ಲಾಧಿಕಾರಿಗಳು ಭಕ್ತಿ ಸಮರ್ಪಣೆ "

ಇಮೇಜ್
 *ವಿಜೃಂಭಣೆಯಿಂದ ಜರುಗಿದ ಶ್ರೀ ಗುರುವಿನ ಕಾರ್ತಿಕೋತ್ಸವ* ಕೊಟ್ಟೂರು :ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ ಸೋಮವಾರ ವಿಜೃಂಭಣೆಯಿಂದ ಜರುಗಿತು. ದೇವಸ್ಥಾನದ ಮುಂಭಾಗದ ಆವರಣದಲ್ಲಿ ಸಾಲಾಗಿ ಜೋಡಿಸಿದ್ದ ಮಣ್ಣಿನ ಪ್ರಣತಿಯಲ್ಲಿ ಸಂಜೆ ೬ ಗಂಟೆ ಹೊತ್ತಿಗೆ ಸ್ವಾಮೀಜಿಗಳು, ಅಧಿಕಾರಿಗಳು, ಪ್ರಮುಖರು ದೀಪ ಹಚ್ಚುವ ಮೂಲಕ ಚಾಲನೆ ನೀಡಿದರು. ನಂತರದಲ್ಲಿ ಸ್ವಾಮಿಯ ಭಕ್ತರು ಪ್ರಣತಿಯಲ್ಲಿ ಎಣ್ಣೆ, ಬತ್ತಿ ಹಾಕಿ ಭಕ್ತಿ ಸಮರ್ಪಿಸಿದರು. ಹರಕೆ ರೂಪದಲ್ಲಿ ಭಕ್ತರು ಕೊಬ್ಬರಿ ಸುಟ್ಟರು. ಕಾರ್ತಿಕೋತ್ಸವಕ್ಕೆ ಕ್ರಿಯಾಮೂರ್ತಿಗಳಾದ  ಶ್ರೀ ಶಿವಪ್ರಕಾಶ ಕೊಟ್ಟೂರು ದೇವರು, ಸೋಮಶಂಕರ ಸ್ವಾಮಿಗಳು, ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ,ಪಿ.ಎಚ್.ದೊಡ್ಡರಾಮಣ್ಣ, ಬಿ.ಡಿ.ಸಿ.ಸಿ.ಬ್ಯಾಂಕ್ ಐ ದಾರುಕೇಶ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಡಿಕೆ ಮಂಜುನಾಥ್, ಧರ್ಮಕರ್ತ ಎ.ಕೆ ಶೇಖರಯ್ಯ, ಧಾರ್ಮಿಕ ಇಲಾಖೆ ಎಸಿ ಪ್ರಕಾಶರಾವ್, ದೇವಸ್ಥಾನ ಇಒ ಮಲ್ಲಪ್ಪ, ಹಾಗೂ ಮುಖಂಡರು, ದೇವಸ್ಥಾನದ ಸಿಬ್ಬಂದಿಯವರು ಇದ್ದರು. ಕಾರ್ತಿಕೋತ್ಸವ ಪ್ರಯುಕ್ತ ಬೆಳಗಿನಿಂದಲೇ ಸ್ಥಳೀಯ ಹಾಗೂ ನಾನಾ ಕಡೆಗಳಿಂದ ಆಗಮಿಸಿದ್ದ ಭಕ್ತರು ಸ್ವಾಮಿ ದರ್ಶನ ಪಡೆದರು. ದೂರದ ಊರುಗಳಿಂದ ಅನೇಕ ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸಿದ್ದರು. ಸ್ವಾಮಿಯ ತೊಟ್ಟಿಲುಮಠ, ಗಚ್ಚಿನಮಠಗಳಲ್ಲಿಯೂ ಭಕ್ತರು ಸ್ವಾಮಿ ಆರ್ಶೀವಾದ ಪಡೆದುಕೊಂಡರು.

*ಹಸಿರು ಹೊನಲು ತಂಡದಿಂದ ಪರಿಸರ ಜಾಗೃತಿ*

ಇಮೇಜ್
ಕೊಟ್ಟೂರು: ಪಟ್ಟಣದ ಆರಾಧ ದೖವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಡಿಸೆಂಬರ್ 8 ಸೋಮವಾರ ರಂದು ಜರುಗುವ ಹಿನ್ನೆಲೆ, ದೇವಸ್ಥಾನ ಮುಂಭಾಗ ದಲ್ಲಿನ ಅಗ್ನಿ ಕುಂಡಕ್ಕೆ ಕೊಬ್ಬರಿ ಸುಟ್ಟು ನಮಿಸುವುದು ಸಂಸ್ಕೃತಿ ಇದೆ ಅದರಂತೆ ಅಂಗಡಿ ಮಾಲೀಕರು ಬರುವ ಭಕ್ತಾದಿಗಳಿಗೆ ಕೊಬ್ಬರಿಯನ್ನು ಪ್ಲಾಸ್ಟಿಕ್ ಚೀಲದಲ್ಲಿ ಮಾರಾಟ ಮಾಡದಂತೆ ಪೇಪರ್ ಚೀಲದಲ್ಲಿ ಕೊಬ್ಬರಿ ಮಾರಾಟ ಮಾಡಿ ಎಂದು ಅಂಗಡಿ ಮಾಲಿಕರಿಗೆ ಉಚಿತವಾಗಿ 20 ಸಾವಿರ ಪೇಪ‌ರ್ ಬ್ಯಾಗನ್ನು ಹಸಿರು ಹೊನಲು ತಂಡದ ಸದಸ್ಯರು ವಿತರಿಸಿ ಪರಿಸರ ಜಾಗೃತಿ ಮೂಡಿಸಿದರು. "ಅಂಗಡಿ ಮಾಲೀಕರು ಭಕ್ತರಿಗೆ ಪ್ಲಾಸ್ಟಿಕ್ ಸಹಿತ ಒಣ ಕೊಬ್ಬರಿ ಮಾರಾಟ ಮಾಡಿದಾಗ ಅದನ್ನು ಅಗ್ನಿ ಕುಂಡಕ್ಕೆ ಎಸೆಯುವುದರಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತೆ ಜತೆಗೆ ಅದೇ ಭಸ್ಮವನ್ನ ಮರುದಿನ ಭಕ್ತರು ಹಣೆಗೆ ಹಚ್ಚಿಕೊಳ್ಳುವುದರಿಂದ ಚರ್ಮದ ಕಾಯಿಲೆ ಉದ್ಭವವಾಗುತ್ತದೆ. ಅಂಗಡಿಯ ಮಾಲೀಕರಿಗೆ ಮತ್ತು ವ್ಯಾಪಾರಸ್ಥರಿಗೆ ಪ್ಲಾಸ್ಟಿಕ್ ಬಿಟ್ಟು ಪೇಪರ್ ಬ್ಯಾಗ್ ಬಳಸುವಂತೆ ಬಂಜಾರ್ ನಾಗರಾಜ್ ಮನವಿ ಮಾಡಿದರು." ಈ ಸಂದರ್ಭದಲ್ಲಿ ಹಸಿರು ಹೊನಲು ಸೇವಾ ಸಂಸ್ಥೆ ಗೌರವಾಧ್ಯಕ್ಷ ಸಿ.ಬಸವರಾಜ, ಅಧ್ಯಕ್ಷ ಗುರುಬಸವರಾಜ್, ಬಿ ಆರ್ ವಿಕ್ರಮ್, ಗಿರೀಶ್, ಕೊಟ್ರೇಶ್, ನಾಗಣ್ಣ, ಪತ್ತಿಕೊಂಡ ಶ್ರೀಕಾಂತ ಇತರರು ಇದ್ದರು.