ಪೋಸ್ಟ್‌ಗಳು

ಜನವರಿ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ನಾಗಭೂಷಣ ಬಾರಿಕೇರ್,ಉಪಾಧ್ಯಕ್ಷರಾಗಿ ನಿರ್ಮಲಾ ಎಸ್ ಸರ್ ಗಣಾಚಾರಿ ಅಧಿಕಾರ ಸ್ವೀಕಾರ

ಇಮೇಜ್
ಮಸ್ಕಿ : ಇಂದು ಅಧಿಕಾರ ಸ್ವೀಕಾರ ಹಿನ್ನೆಲೆ ಬೆಳ್ಳಂ ಬೆಳಿಗ್ಗೆಯಿಂದಲೇ ಮನೆ ದೇವರುಗಳಿಗೆ ಪೂಜಾ ಕಾರ್ಯಕ್ರಮ ಮುಗಿಸಿ 10 ಗಂಟೆಗೆ ಸಕಲ ಸದಸ್ಯರು ಹಾಗೂ ಅಧಿಕಾರಿಗಳು ಹಾಗೂ ಪ್ರಮುಖ ಮುಖಂಡರುಗಳ ಸಮ್ಮುಖದಲ್ಲಿ ವಿಶೇಷ ರೀತಿಯಲ್ಲಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅಧಿಕಾರ ಸ್ವೀಕಾರ ಮಾಡಲಾಯಿತು. ತೀವ್ರ ಕುತೂಹಲ ಕೆರಳಿಸಿದ್ದಇಲ್ಲಿನ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಸಾಲಗಾರರಲ್ಲದ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಾಗಭೂಷಣ ಬಾರಿಕೇರ್ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ  ನಿರ್ಮಲಾ ಎಸ್ ಸರ್ ಗಣಾಚಾರಿ ಗೆಲುವು ಸಾಧಿಸಿದ್ದರಿಂದ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ದೊಡ್ಡಪ್ಪ ಕಡಬೂರು, ಜಗದೀಶ್ ಸ್ವಾಮಿ ಹಾಲಾಪೂರು,ಎರ್ರಿಸ್ವಾಮಿ ಹಾಲಾಪೂರು,ಬಸನಗೌಡ ಪೊಲೀಸ್ ಪಾಟೀಲ್,ಅಂದಾನಪ್ಪ ಗುಂಡಳ್ಳಿ,ಎಂ.ಅಮರೇಶ್,ಮಂಜುನಾಥ ನಂದಿಹಾಳ,ನೀಲಕಂಠಪ್ಪ ಗೋನಾಳ, ಬಿ.ಜಿ ನಾಯಕ,ಮಲ್ಲಪ್ಪ ಬಾರಿಕೇರ,ಮಲ್ಲಯ್ಯ ಮುರಾರಿ, ರವಿ ಮಡಿವಾಳ, ಮಲ್ಲಿಕ್ ಮುರಾರಿ,ಮಲ್ಲಯ್ಯ ನಾಯಕ,ಬಸವರಾಜ ನಾಯಕ ಕಡಬೂರು,ಕೃಷ್ಣ ಚಿಗರಿ,ನಾಗರಾಜ್ ಗುಡಿಸಿಲಿ,ಪಂಪಾಪತಿ ಗಣಾಚಾರಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖಮುಖಂಡರು,ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸೇರಿದಂತ...

ಬಿಗ್ ಬಾಸ್ ವಿಜೇತರಾದ ಹನುಮಂತನಿಗೆ ಶುಭಕೋರಿದ ಮಸ್ಕಿ ಪುಟ್ಟಾಣಿ ಜಾನು

ಇಮೇಜ್
  ಮಸ್ಕಿ : ಖಾಸಗಿ ವಾಹಿನಿಯಲ್ಲಿ ನಡೆದಿರುವ ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 11ರ ಸೀಸನ್ನ ನಲ್ಲಿ ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರುಬಡ್ನಿ ತಾಂಡಾದ ನಿವಾಸಿ. ಕುರಿಗಾಹಿಯಾಗಿದ್ದ ಹನುಮಂತ, ಬಿಗ್ ಬಾಸ್ ನಲ್ಲಿ ವಿನ್ನರ್ ಎಂದು ಕಿಚ್ಚ ಸುದೀಪ್ ಅವರು ಘೋಷಣ ತಕ್ಷಣವೇ ಪುಟ್ಟ ಬಾಲಕಿ ಸಂಭ್ರಮಿಸಿದಳು.  ಆರಂಭದಲ್ಲಿ ಬಿಗ್‌ ಬಾಸ್‌ ಮನೆಗೆ ಹೊಂದಿಕೊಳ್ಳಲು ಕಷ್ಟಪಟ್ಟಿದ್ದ ಹನುಮಂತ ನಂತರ ಅದ್ಭುತ ಆಟವನ್ನಾಡಿದರು. ಪ್ರತಿಯೊಂದು ಕಠಿಣ ಟಾಸ್ಕ್‌ಗಳಲ್ಲಿಯೂ ಉತ್ಸಾಹದಿಂದಲೇ ಭಾಗವಹಿಸುತ್ತಿದ್ದ ಹನುಮಂತ ವಿನ್ನರ್‌ ಆಗಿ ಹೊರಹೊಮ್ಮುತ್ತಿದ್ದರು. ತಮ್ಮ ಭಾಷೆ, ಹಾವಭಾವಗಳಿಂದಲೇ ಜನರಿಗೆ ಹತ್ತಿರವಾದರು. ಹೀಗಾಗಿಯೇ ರಾಜ್ಯದ ಜನರು ಹನುಮಂತನಿಗೆ ಅತಿಹೆಚ್ಚು ವೋಟು ನೀಡಿ ಗೆಲ್ಲಿಸಿದ್ದಾರೆ.

ತಾಯಿ ಮತ್ತು ಅಣ್ಣನ ಆಸರೆಯಿಂದ ಡಾಕ್ಟರೇಟ್ ಪದವಿ ಪಡೆದ ಗ್ರಾಮೀಣ ಪ್ರತಿಭೆ ಹನುಮಯ್ಯ ಗೋನವಾರ

ಇಮೇಜ್
  ಸಿಂಧನೂರು : ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗೋನವಾರ ಗ್ರಾಮದ ಹನುಮಯ್ಯ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಡಾಕ್ಟರೇಟ್(ಪಿ.ಎಚ್.ಡಿ) ಪದವಿಯನ್ನು ಘೋಷಿಸಿದೆ. ಹನುಮಯ್ಯ ಅವರು ಮಹಿಳಾ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಶೈಲಜಾ ಇಂ.ಹಿರೇಮಠ ಅವರ ಮಾರ್ಗದರ್ಶನದಲ್ಲಿ ದೇವದಾಸಿಯರ ಮಕ್ಕಳ ಅಧ್ಯಯನ : ಸಮಾಜ ಮತ್ತು ಸರಕಾರದ ಯೋಜನೆಗಳನ್ನು ಅನುಲಕ್ಷಿಸಿ ಎಂಬ ವಿಷಯದ ಕುರಿತು ಪಿಎಚ್.ಡಿ ಮಹಾಪ್ರಬಂಧವನ್ನು ಸಲ್ಲಿಸಿದ್ದಾರೆ. ಇವರು ಸಿಂಧನೂರು ತಾಲೂಕಿನ ಗೋನವಾರ ಗ್ರಾಮದ ಶ್ರೀಮತಿ ಮರಿಯಮ್ಮ ದೇವದಾಸಿ ಅವರ ಎಂಟು ಜನ ಮಕ್ಕಳಲ್ಲಿ ಹನುಮಯ್ಯ ಒಬ್ಬರಾಗಿದ್ದು,ಗೋನವಾರ ಗ್ರಾಮದ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಪಡೆದು,ಸಿಂಧನೂರಿನ ಸೃಷ್ಠಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಹಾಗೂ ಸರಕಾರಿ ಮಹಾವಿದ್ಯಾಲಯದಲ್ಲಿ ಪದವಿಯನ್ನು ಡಿಸ್ಟಿಂಕ್ಷನಲ್ಲಿ ಮುಗಿಸಿದ್ದಾರೆ.ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದಲ್ಲಿ ಎಂಎ ಸ್ನಾತಕೋತ್ತರ ಪದವಿಯನ್ನು ನಾಲ್ಕನೇ ರಾಂಕ್ ನಲ್ಲಿ ಪಡೆದಿದ್ದಾರೆ. ಇನ್ನೂ ಇವರು ಕಡು ಬಡತನದಲ್ಲಿ ಕೂಲಿ ಕೆಲಸ ಮಾಡಿಕೊಂಡು ಡಾಕ್ಟರೇಟ್ ಪದವಿ ಪಡೆದ ಗ್ರಾಮೀಣ ಪ್ರದೇಶದ ಹನುಮಯ್ಯ ಅವರನ್ನು ಕುಟುಂಬದ ಸದಸ್ಯರು ಮತ್ತು ಗೋನವಾರ ಗ್ರಾಮದ ಜನರು ಅಭಿನಂದಿಸಿದ್ದಾರೆ.

ವಿಶ್ವ ಕುಷ್ಠ ರೋಗದ ದಿನದ ಅಂಗವಾಗಿ ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲಿ ಜನ ಜಾಗೃತಿ

ಇಮೇಜ್
ಬೆಂಗಳೂರು, ಜ. 30: ವಿಶ್ವ ಕುಷ್ಠ ರೋಗದ ದಿನದ ಅಂಗವಾಗಿ ರಾಜಾಜಿನಗರದ ಇಎಸ್ಐ ಮಾದರಿ ಆಸ್ಪತ್ರೆಯಲ್ಲಿ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. “ಒಟ್ಟಾಗಿ, ಕಾರ್ಯನಿರ್ವಹಿಸಿ, ನಿರ್ಮೂಲನೆ ಮಾಡಿ” ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ.  ಡೀನ್ ಡಾ ಸಂಧ್ಯಾ ಆರ್ ಜಾಥಗೆ ಚಾಲನೆ ನೀಡಿದರು. ಪ್ರಭಾರಿ ವೈದ್ಯಕೀಯ ಅಧೀಕ್ಷಕರು ಡಾ ಯೋಗಾನಂದನ್ ಕೆ. ಎಸ್, ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ ಗಿರೀಶ್ ಎಂ ಎಸ್, ಡಾ ಬಿಂದುಶ್ರೀ, ಡಾ ಚೇತನ್, ಡಾ ವಿಜಯಲಕ್ಷ್ಮೀ, ಡಾ ವಿದ್ಯಾಶ್ರೀ, ಡಾ ಮನೋಜ್ ಹಾಗೂ ಸಮುದಾಯದ ವೈದ್ಯಕೀಯ ವಿಭಾಗದ ಮುಖ್ಯಸ್ಥರು ಡಾ ಸುರೇಶ್ ಕುಂಬಾರ್, ಡಾ ಅಮೀನಾ,ಡಾ ನಿಶಾ, ಡಾ ಸ್ವಾತಿ, ಡಾ ಗಾಯತ್ರಿ, ಡಾ ಶ್ರೀ ಲಕ್ಷ್ಮಿ, ಮತ್ತು ಮೈಕ್ರೋ ಬಯಾಲಜಿ ಮುಖ್ಯಸ್ಥರಾದ ಡಾ ರವಿ ಜಿ ಎಸ್ ಪಾಲ್ಗೊಂಡಿದ್ದರು. ವೈದ್ಯಕೀಯ ವಿದ್ಯಾರ್ಥಿಗಳಾದ ಸುಮುಖ್ ಹಾಗೂ ಧನುಷ್ ಹಾಗೂ ತಂಡದವರಿಂದ ಕುಷ್ಟ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಿರು ನಾಟಕ ಪ್ರದರ್ಶನವನ್ನು ಆಸ್ಪತ್ರೆ ಅವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ರೋಗಿಗಳು(ಐ ಪಿ ) ಹಾಗೂ ಆಸ್ಪತ್ರೆ ಸಿಬ್ಬಂದಿಯವರು ಹಾಜರಿದ್ದರು.

ಧರ್ಮಸ್ಥಳ ಸಂಸ್ಥೆ ಆಂಜನೇಯ ದೇವಸ್ಥಾನಕ್ಕೆ ಒಂದು ಲಕ್ಷ ಮೊತ್ತದ ಡಿಡಿ ವಿತರಣೆ

ಇಮೇಜ್
  ಮಸ್ಕಿ : ತಾಲೂಕಿನ ಮೆದಕಿನಾಳ ವಲಯದ ಹಂಪನಾಳ ಗ್ರಾಮದ ಕಂಬಗಲ್ ಶ್ರೀ ಆಂಜನೇಯ ದೇವಸ್ಥಾನಕ್ಕೆ ಶ್ರೀ ಕ್ಷೇತ್ರದಿಂದ ಪೂಜ್ಯರು ಮಂಜೂರು ಮಾಡಿರುವ ₹1,00,000 ಲಕ್ಷ ಮೊತ್ತದ ಡಿಡಿ ವಿತರಣೆ ಮಾಡಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಮಸ್ಕಿ ವತಿಯಿಂದ ಡಿಡಿ ವಿತರಣೆ ಕಾರ್ಯಕ್ರಮದಲ್ಲಿ ತಾಲ್ಲೂಕು ಯೋಜನಾಧಿಕಾರಿಗಳಾದ ಶ್ರೀಮತಿ ಶಾಲಿನಿ ಮೇಡಂ ಅವರು ಸಂಸ್ಥೆಯ ಕಾರ್ಯಕ್ರಮಗಳ ಕುರಿತಾಗಿ ಸಮುದಾಯ ಅಭಿವೃದ್ಧಿ ಕಾರ್ಯಕ್ರಮ, ಸಾಮಾಜಿಕ ಕಾರ್ಯಕ್ರಮ ಯೋಜನೆಯ ಹಲವು ಕಾರ್ಯಕ್ರಮಗಳ ಕುರಿತಾಗಿ ಗ್ರಾಮದ ಸಜ್ಜನರಿಗೆ ಮಾಹಿತಿ ನೀಡಿದರು ಮತ್ತು ಜನಜಾಗೃತಿ ಸದಸ್ಯರಾದ ರಾಜಣ್ಣ ಪರಡ್ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು ಮತ್ತು ಶ್ರೀ ಆಂಜನೇಯ ದೇವಸ್ಥಾನದ ಟ್ರಸ್ಟ್ ನ ಅಧ್ಯಕ್ಷರು ಪಂಪಣ್ಣ , ಕಾರ್ಯದರ್ಶಿ ಸುಗರಯ್ಯ ಸ್ವಾಮಿ , ಕಮಿಟಿಯ ಸರ್ವ ಸದಸ್ಯರು,ಹಾಗೂ ಜನಜಾಗೃತಿ ಸದಸ್ಯರಾದ ರಾಜಣ್ಣ ಪರಡ್ಡಿ , ವಲಯದ ಮೇಲ್ವಿಚಾರಕರಾದ ಪ್ರಸನ್ನ ಸರ್ ಹಾಗೂ ಸ್ವಸಹಾಯ ಸಂಘದ ಸರ್ವ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು,ಎಷ್ಟೋ ಗ್ರಾಮ ಮಟ್ಟದಲ್ಲಿ ದೇವಸ್ಥಾನ ಜೀರ್ಣೋದ್ದಾರಕ್ಕೆ ಕೈ ಜೋಡಿಸುತ್ತಿರುವ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು ಮತ್ತು ಋಣಿಯಾಗಿರುತ್ತೇವೆ ಎಂದು ತಿಳಿಸಿದರು, ಕ್ಷೇತ್ರದಿಂದ ಪೂಜ್ಯರು ಮಂಜೂರು ಮಾಡಿರುವ 100000/-ಮೊತ್ತವನ್ನು ವಿತರಿಸಲಾಯಿತು.

ಗಚ್ಚಿನಮಠವನ್ನು ಕೂಡಲೆ ಧಾರ್ಮಿಕ ದತ್ತಿ ಇಲಾಖೆ ಸೇರಿಸಿ: ಕೆ ಕೊಟ್ರೇಶ್

ಇಮೇಜ್
  ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವದ ಪೂರ್ವ ಬಾವಿ ಸಭೆ ಕೊಟ್ಟೂರು ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವದ ಪ್ರಯುಕ್ತ ಬುದುವಾರ ಶ್ರೀ ಸ್ವಾಮಿಯ ಹಿರೇಮಠದ ಮುಂಬಾಗದಲ್ಲಿ ಹಾಕಲಾಗಿದ್ದ ವೇಧಿಕೆಯಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಥೋತ್ಸವದ ಪೂರ್ವ ಬಾವಿ ಸಭೆಯನ್ನು ಉದ್ದೇಶಿಸಿ ಹಗರಿಬೊಮ್ಮನಹಳ್ಳಿ ಶಾಸಕ ಕೆ.ನೇಮಿರಾಜ ನಾಯ್ಕ ಅವರು ಮಾತನಾಡಿದರು. ಭವ್ಯ ಕೊಟ್ಟೂರೇಶ್ವರ ರಥೋತ್ಸವದ ಯಶಸ್ವಿಗೆ ಸಹಕರಿಸಿ ಜನಾಕರ್ಷಣೆಯ ರಥೋತ್ಸವ ಎಂದೇ ಬಿಂಬಿತಗೊಂಡಿರುವ ಪ್ರಸಿದ್ಧ ಕೊಟ್ಟೂರು ಕೊಟ್ರೂರೇಶ್ವರ ಸ್ವಾಮಿಯ ವಾರ್ಷಿಕ ಮಹಾ ರಥೋತ್ಸವ ಫೆಬ್ರವರಿ ೨೨ ರಂದು ನಡೆಯಲಿದ್ದು ಪಟ್ಟಣವನ್ನು ಸಂಪರ್ಕಿಸುವ ೬ ರಸ್ತೆಗಳನ್ನು ದುರಸ್ತಿ ಗೊಳಿಸುವ ಕಾರ್ಯವನ್ನ ಈಗಾಗಲೇ ಪ್ರಾರಂಭ ಮಾಡಿದ್ದೇವೆ. ಜಾತ್ರೆ ಒಳಗಡೆ ಮುಗಿಸುತ್ತೇವೆ. ಪಾದಯಾತ್ರೆಯಲ್ಲಿ ಬರುವ ಭಕ್ತಾಧಿಗಳಿಗೆ ತೊಂದರೆ ಯಾಗಬಾರದು ಎಂದು ಶಾಸಕ ಕೆ.ನೇಮರಾಜನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು. ಬುಧುವಾರ ಶ್ರೀಸ್ವಾಮಿಯ ಹಿರೇಮಠದ ಮುಂಬಾಗದಲ್ಲಿ ಹಾಕಲಾಗಿದ್ದ ವೇಧಿಕೆಯಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಥೋತ್ಸವದ ಪೂರ್ವ ಬಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕುಡಿಯುವ ನೀರಿನ ತೊಂದರೆ ಭಾದಿಸದಂತೆ ಹೆಚ್ಚುವರಿಯಾಗಿ ಟ್ಯಾಂಕರ್‌ಗಳನ್ನು ತರಿಸಿಕೊಂಡು ಪಟ್ಟಣದ ಜನತೆ ಮತ್ತು ಜಾತ್ರೆಗೆ ಆಗಮಿಸುವ ಭಕ್ತರಿಗೆ ನೀರು ಪೂರೈಸಬೇಕು ಈ ...

ರಾಜಸ್ಥಾನಿ ಮಿತ್ರ ಮಂಡಲದಿಂದ ರಾಜಸ್ಥಾನಿ ಜೈನ ಸಹೋದರರಿಗಾಗಿ 10 ನೇ ಆವೃತ್ತಿಯ ಆರೋ.ಎಂ.ಎಂ ಕಪ್ 2025 ವಾಲಿಬಾಲ್‌ ಪಂದ್ಯಾವಳಿಗೆ ಚಾಲನೆ

ಇಮೇಜ್
  ಬೆಂಗಳೂರು, ಜ, 29; ರಾಜಸ್ಥಾನಿ ಮಿತ್ರ ಮಂಡಲದಿಂದ ಬೆಂಗಳೂರಿನ ರಾಜಾಜಿನಗರದಲ್ಲಿ ಇಂದಿನಿಂದ ರಾಜಸ್ಥಾನಿ ಜೈನ ಸಹೋದರರಿಗಾಗಿ ಶಾಂತಿಲಾಲ್‌ ಜಿ ಬೋರನ ಸ್ಮರಣಾರ್ಥ 10 ನೇ ಆರೋ.ಎಂ.ಎಂ ಕಪ್ 2025 ವಾಲಿಬಾಲ್‌ ಪಂದ್ಯಾವಳಿ ಆರಂಭವಾಗಿದೆ. ಫೆಬ್ರವರಿ 2 ರ ವರೆಗೆ ಐದು ದಿನಗಳ ಕಾಲ12 ತಂಡಗಳ ಕ್ರೀಡಾಕೂಟ ನಡೆಯಲಿದೆ.  ಬಿಡಬ್ಲ್ಯೂಎಸ್ಎಸ್ಬಿ ಕೆಎಎಸ್ ಕಾರ್ಯದರ್ಶಿ ಮತ್ತು ಸಿಎಒ ಸಿ. ಮದನ್ ಮೋಹನ್, ಬೋರಾನಾ ಕುಟುಂಬ ಮದನ್ ಕೈಲಾಸ್ ಬೋರೋನಾ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಜೈನ ಸಮುದಾಯದ ಮದನಲಾಲ್‌ ಜಿ, ಕೈಲಾಶ್‌, ರಮೇಶ್ ರೋಶನ್‌ , ಪ್ರವೀಂಜಿ, ಗೌತಮ್‌, ಅನ್ರಾಜಿ, ರಿಷಭ್‌ ಮತ್ತು ಬರಾರ್‌, ಕುಟುಂಬದಿಂದ ಕ್ರೀಡಾ ಕೂಟ ಏರ್ಪಡಿಸಲಾಗಿದೆ. ರಾಜಾಜಿನಗರದ ಪೋಷಕರ ಸಂಘದ ಶಾಲೆ ಬಳಿ ಇರುವ ಪಾಲಕರ ಮೈದಾನದಲ್ಲಿ ಪಂದ್ಯಾವಳಿ ನಡೆಯುತ್ತಿದ್ದು, ರಾಜಸ್ಥಾನಿ ಮಿತ್ರ ಮಂಡಲ ಅಧ್ಯಕ್ಷರಾದ ಮಹೇಂದ್ರ ತೇಬ, ಉಪಾಧ್ಯಕ್ಷರಾದ ರಾಜೇಶ್ ಚಾವತ್, ಕಾರ್ಯದರ್ಶಿ, ಕೈಲಾಶ್ ಬೋರ,ಮತ್ತಿತರರು ಉಪಸ್ಥಿತರಿದ್ದರು. 60 ವಯಸ್ಸಿನ ಚಿರ ಯುವಕರು ಹಾಗೂ ‌ 18 ವಯಸ್ಸಿನ ಹುಡುಗರು ಸಹ ಈ ಪಂದ್ಯದಲ್ಲಿ ಭಾಗವಹಿಸಿದ್ದರು ಫೆಬ್ರವರಿ 2 ರ ರಾತ್ರಿ 7 ಗಂಟೆಗೆ ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಪರಿಶಿಷ್ಟ ಜಾತಿ ಅಲೆಮಾರಿ, ವಿಮುಕ್ತ ಬುಡಕಟ್ಟು ಗುಂಪುಗಳಿಗೆ ಓಳಮೀಸಲಾತಿಯಲ್ಲಿ ಕನಿಷ್ಟ ಶೇ 4 ರಷ್ಟು ಮೀಸಲಾತಿ ಕಲ್ಪಿಸುವಂತೆ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಮನವಿ

ಇಮೇಜ್
  ಬೆಂಗಳೂರು, ಜ, ೨೯; ಪರಿಶಿಷ್ಟ ಜಾತಿ ಅಲೆಮಾರಿ, ವಿಮುಕ್ತ ಬುಡಕಟ್ಟು ಗುಂಪುಗಳಿಗೆ ಓಳಮೀಸಲಾತಿಯಲ್ಲಿ ಕನಿಷ್ಟ ಶೇ 4 ರಷ್ಟು ಮೀಸಲಾತಿ ಕಲ್ಪಿಸುವಂತೆ ಮತ್ತು ವಿವಿಧ 12 ಬೇಡಿಕೆಗಳನ್ನು ಒಳಗೊಂಡ ಮತ್ತು ಪರಿಶೀಲನಾರ್ಹ ವೈಜ್ಞಾನಿಕ ದತ್ತಾಂಶಗಳನ್ನು ಕ್ರೋಡೀಕರಿಸಿ ಮೀಸಲಾತಿ ಕುರಿತು ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗಕ್ಕೆ ಕರ್ನಾಟಕ ಪ.ಜಾ ಮತ್ತು ಪ.ವ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಜಿ ಇಂದು ವಿಸ್ತೃತ ಮನವಿ ಸಲ್ಲಿಸಿದರು.  ನಗರದಲ್ಲಿಂದು ಜಸ್ಟೀಸ್‌ ನಾಗಮೋಹನ್‌ ದಾಸ್‌ ಅವರನ್ನು ಭೇಟಿ ಮಾಡಿ ಒಳ ಮೀಸಲಾತಿ ಕುರಿತು ವಿಸ್ತೃತ ಸಮಾಲೋಚನೆ ನಡೆಸಿತು.  ಸಾರ್ವಜನಿಕ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿಗಳಲ್ಲಿ ವಿವಿಧ ಸಮುದಾಯಗಳ ಪ್ರಾತಿನಿಧ್ಯದ ಕುರಿತು ಪರಿಶೀಲನಾರ್ಹ ದಾಖಲೆಗಳು ಹಾಗೂ ದತ್ತಾಂಶಗಳನ್ನು ಸಂಗ್ರಹಿಸಿ, ಒಟ್ಟುಗೂಡಿಸಿ ಆಂತರಿಕ ಮೀಸಲಾತಿ ಅನುಷ್ಠಾನ ಕುರಿತು ನಡೆಸುತ್ತಿರುವ ಪರಿಶೀಲನೆಯಲ್ಲಿ ವಾಸ್ತಾವಂಶಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಶೋಷಿತರಾಗಿಯೇ ಬದುಕುತ್ತಿರುವ ಅಲೆಮಾರಿಗಳು, ಸಾಮಾಜಿಕ ಕಳಂಕಕ್ಕೆ ಒಳಗಾಗಿರುವ ವಿಮುಕ್ತ ಬುಡಕಟ್ಟುಗಳು (ಡಿಎನ್‌ಟಿ) ಮತ್ತು ಸೂಕ್ಷ್ಮ ಸಮುದಾಯಗಳು ಮೀಸಲಾತಿ ರುಚಿಯನ್ನೇ ಸವಿಯದ ಜಾತಿಗಳಾಗಿವೆ. ಅಲ್ಪಸಂಖ್ಯಾತ, ಅಸಂಘಟಿತ, ಸಮುದಾಯಗಳಿಗೆ ಭೂಮಿ, ವಸತಿ, ಮೂಲಭೂತ...

ಹೈಟೆಕ್ ತರಬೇತಿ ಕೇಂದ್ರದಲ್ಲಿ ಗ್ರಾಜುಯೇಷನ್ ಡೇ ಕಾರ್ಯಕ್ರಮ

ಇಮೇಜ್
ಮಸ್ಕಿ: ಪಟ್ಟಣದ ಗಚ್ಚಿನ ಮಠ ಹತ್ತಿರದ ಹೈಟೆಕ್ ಕಂಪ್ಯೂಟರ್ ಶಿಕ್ಷಣ ತರಬೇತಿ ಕೇಂದ್ರದಲ್ಲಿ ಗ್ರಾಜುಯೇಷನ್ ಡೇ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜರುಗಿತು. ಹೆಡ್ ಹೇಲ್ಡ್ ಹೈ ಫೌಂಡೇಶನ್ ಮತ್ತು ಲ್ಯಾಂಡ್ ಮಾರ್ಕ್ ಗ್ರೂಪ್ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ 60 ದಿನಗಳ ಕಾಲ ಉಚಿತ ರಿಟೇಲ್ ಡೊಮೈನ್ ಸ್ಕಿಲ್ ಮತ್ತು ಕಂಪ್ಯೂಟರ್ ಹಾಗೂ ಸ್ಪೋಕನ್ ಇಂಗ್ಲಿಷ್ ಮತ್ತು ಇತರ ಕೌಶಲ್ಯ ತರಬೇತಿ ನೀಡಲಾಯಿತು. ಎಂದು ಸಂಸ್ಥೆಯ ವ್ಯವಸ್ಥಾಪಕರಾದ ಯಮನೂರ ಕನ್ನಾರಿ ಹೇಳಿದರು. ಇದರ ಜೊತೆಗೆ ಲ್ಯಾಂಡ್ ಮಾರ್ಕ್ ಗ್ರೂಪ್ ಮತ್ತು ಹೆಚ್. ಹೆಚ್. ಹೆಚ್. ಫೌಂಡೇಶನ್ ಮಸ್ಕಿ ವತಿಯಿಂದ ಕಲಿಕಾರ್ಥಿಗಳಿಗೆ ಪ್ರಮಾಣ ಪತ್ರ ಜೊತೆಗೆ 4000 ಸಾವಿರ ರೂಪಾಯಿ ಪ್ರೋತ್ಸಾಹ ಧನ ಮತ್ತು ಡ್ರೆಸ್ ಹಾಗೂ ಶೂ ಅನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಮಲ್ಲಣ್ಣ ಅಂಬಾಡಿ,ಪಟ್ಟಣದ ಹಿರಿಯರಾದ ನೂರು ಮಹಮ್ಮದ್,ಡಾ. ಸಂತೋಷ್ ಪತ್ತಾರ್, ತರಬೇತುದಾರರಾದ ಪ್ರತಾಪ್ ಲೋಕ್ರೆ ಮಸ್ಕಿ, ಚಂದ್ರಶೇಖರ ಬೋವಿ ಮತ್ತು ಕಲಿಕಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅರ್ಚಕರಿಗೆ ತಸ್ತೀಕ್ ಭತ್ಯೆ ಪಾವತಿಸುವ ಸಂಬಂಧ ಆನ್-ಲೈನ್ ಅರ್ಜಿ ಸಲ್ಲಿಸುವ ಮಾಹಿತಿ ಸಭೆ

ಇಮೇಜ್
  ಮಸ್ಕಿ : ಪಟ್ಟಣದ ತಹಶೀಲ್ದಾರರ ಕಾರ್ಯಾಲಯದಲ್ಲಿ ಅರ್ಚಕರಿಗೆ ಡಿ.ಬಿ.ಟಿ. ಮೂಲಕ ತಸ್ತೀಕ್ ಭತ್ಯೆ ಪಾವತಿಸುವ ಸಂಬಂಧ ಆನ್-ಲೈನ್ ಅರ್ಜಿ ಸಲ್ಲಿಸುವ ಕುರಿತು ಮಾಹಿತಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರೇಡ್ ೨ ತಹಶೀಲ್ದಾರರಾದ ಅಶೋಕ ಪವಾರ್ ರವರು ಮಾತನಾಡಿ, ಮಾನ್ಯ ಆಯುಕ್ತರು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಬೆಂಗಳೂರು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರ ರವರ ಆದೇಶದನ್ವಯ ಅರ್ಚಕರಿಗೆ ಡಿ.ಬಿ.ಟಿ. ಮೂಲಕ ತಸ್ತಿಕ್ ಭತ್ಯೆ ಪಾವತಿಸಲು ತಾಲೂಕಿನ ಎಲ್ಲಾ ಆರ್ಚಕರು ತಮ್ಮ ಅರ್ಜಿಗಳನ್ನು ಸೇವಾ ಸಿಂಧೂ ವೆಬ್ ಪೋರ್ಟಲ್ ಮೂಲಕ ಆನ್-ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕಾಗಿರುತ್ತದೆ. ಅದುದರಿಂದ ಸಂಬಂದಪಟ್ಟ ಆರ್ಚಕರು ತಮ್ಮ ಅರ್ಜಿಗಳನ್ನು ಸೇವಾ ಸಿಂಧೂ ವೆಬ್ ಪೋರ್ಟಲ್ ಮೂಲಕ ಆನ್-ಲೈನ್ ಅರ್ಜಿ ಸಲ್ಲಿಸಲು ಮಸ್ಕಿ ತಾಲೂಕಿನ ತಸ್ತಿಕ್ ಭತ್ಯೆ ಪಡೆಯುತ್ತಿರುವ ಎಲ್ಲಾ ಅರ್ಚಕರಿಗೆ ಅವರವರ ಕೆ.ವೈ.ಸಿ. ದಾಖಲೆ ಆಧಾರ ಕಾರ್ಡ,ಮತ್ತು ಬ್ಯಾಂಕ ಪಾಸ ಬುಕ್ ಇನಾಂ ಪ್ರತಿ ಹಾಗೂ ದೇವಸ್ಥಾನದೊಂದಿಗೆ ಅರ್ಚಕರಿರುವ ಛಾಯಚಿತ್ರದೊಂದಿಗೆ ) ಸಂಬಂಧಿಸಿದ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ಮೂಲಕ ತಹಶೀಲ್ದಾರರಿಂದ ಆರ್ಚಕರ ಪ್ರಮಾಣ ಪತ್ರ ನೀಡಿ (ತಹಶೀಲ್ದಾರರಿಂದ ಅರ್ಚಕರ ಪ್ರಮಾಣ ಪತ್ರದ ಧೃಢೀಕರಣ ಪ್ರಮಾಣ ಪಡೆದು ಕೊಂಡು ಸೇವಾ ಸಿಂಧೂ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು ಮುಂದೆ ಅರ್ಚಕರ ಕುಂದುಕೊರತೆಗಳ ಸಭೆ ಕರೆದು ಅರ್...

ಬೀದಿನಾಯಿಗಳ ಹಾವಳಿಗೆ ಕಡಿವಾಣದ ಕ್ರಮ : ಮುಖ್ಯಾಧಿಕಾರಿ ನಸ್ರುಲ್ಲಾ

ಇಮೇಜ್
  ಕೊಟ್ಟೂರು ಪಟ್ಟಣದಲ್ಲಿ ಇತ್ತೀಚೆಗೆ ನಾಯಿಗಳ ಹಾವಳಿ ಮಿತಿಮೀರಿದ್ದು, ವಯೋವೃದ್ಧರ, ಮಕ್ಕಳ ಓಡಾಟಕ್ಕೆ ನಾಯಿಗಳು ವಿಪರೀತ ತೊಂದರೆ ಕೊಡುತ್ತಿದ್ದ ಹಿನ್ನೆಲೆಯಲ್ಲಿ, ಪತ್ರಿಕಾ ವರದಿಗಳಿಂದ ಎಚ್ಚೆತ್ತ ಪಟ್ಟಣ ಪಂಚಾಯಿತಿ ಪಟ್ಟಣದ ಸಾರ್ವಜನಿಕರ ಹಾಗೂ ಸಮಾಜದ ಮುಖಂಡರ ಮನವಿ ಮೇರೆಗೆ ಮುಖ್ಯಾಧಿಕಾರಿ ನಸ್ರುಲ್ಲಾ ರವರು ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ.  ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಬೀದಿನಾಯಿಗಳಿಗೆ ಈಗಾಗಲೇ ಲಸಿಕೆ ಹಾಕಲಾಗಿದ್ದು, ಅವು ಕಡಿದರೂ ಯಾವುದೇ ಮಾರಣಾಂತಿಕ ಹಾನಿಯಾಗುವುದಿಲ್ಲವೆಂದು ಅಲ್ಲದೇ, ಬೀದಿ ನಾಯಿಗಳನ್ನು ನಿಯಂತ್ರಣಸಲು ಹದಿನೈದು ದಿನಗಳೊಳಗಾಗಿ ಬೀದಿನಾಯಿಗಳ ಹಾವಳಿ ತಡೆಯಲು ಕ್ರಮ ವಹಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ನಸ್ರುಲ್ಲಾ ತಿಳಿಸಿದರು

ಆನ್ವರಿ ಸರಕಾರಿ ಪ್ರೌಢ ಶಾಲೆಯಲ್ಲಿ ಅದ್ದೂರಿಯಾಗಿ ಜರುಗಿದ 76ನೇ ಗಣರಾಜ್ಯೋತ್ಸವ.

ಇಮೇಜ್
  ಹಟ್ಟಿ ಚಿನ್ನದ ಗಣಿ;ಜ-26ಆನ್ವರಿ ಸರಕಾರಿ ಪ್ರೌಢಶಾಲೆಯಲ್ಲಿ ಇಂದು 76ನೇ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಧ್ವಜಾರೋಹಣವನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ಶಂಕ್ರಮ್ಮ | ತಿರುಪತಿಯವರು ನೇರವೇರಿಸಿದರು.ನಂತರ ಮಹಾತ್ಮ ಗಾಂಧೀಜಿ ಹಾಗೂ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.ನಂತರ ಪ್ರೌಢಶಾಲೆಯ ಮುಖ್ಯೋಪಾಧ್ಯಾರಾದ ಶ್ರೀ ಶಂಕ್ರಪ್ಪ ಸಕ್ರಿ 76ನೇ ಗಣರಾಜ್ಯೋತ್ಸವದ ಕುರಿತು ಮಾತನಾಡಿದರು. 2024-25 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ಕೇಂದ್ರ ಅನ್ವರಿಯಾಗಿದ್ದು.ಐದು ಶಾಲೆಯ ವಿದ್ಯಾರ್ಥಿಗಳು ಒಟ್ಟು 240 ಪರೀಕ್ಷಾರ್ಥಿಗಳು ಇಲ್ಲಿ ಪರೀಕ್ಷೆ ಬರೆಯುತ್ತಾರೆ. ಡಬ್ಲ್ಯೂ ಈ ಬಿ ಕ್ಯಾಮರಾ ಅಳವಡಿಸಿದ್ದು ಯಾವುದೇ ಅವ್ಯವ್ಯವಹಾರಕ್ಕೆ ಆಸ್ಪದವಿಲ್ಲ. ಆದುದರಿಂದ ವಿದ್ಯಾರ್ಥಿಗಳು ಮನೆಯಲ್ಲಿ ಚೆನ್ನಾಗಿ ಓದಿಕೊಂಡು ಪರೀಕ್ಷೆಯನ್ನು ಬರೆಯಿರಿ ಎಂದು ಹೇಳಿದರು. ಸರ್ಕಾರಿ ಪ್ರೌಢಶಾಲೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಸದಸ್ಯರು ಶಾಲೆಯ ಸಹ ಶಿಕ್ಷಕರು ಹಾಗೂ ಮುದ್ದು ವಿದ್ಯಾರ್ಥಿಗಳು. ಭಾಗವಹಿಸಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಸಹ ಶಿಕ್ಷಕರಾದ ಆರೋಗ್ಯಪ್ಪ ಶಿಕ್ಷಕರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

ಗುರುಗುಂಟ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವ ಆಚರಣೆ.

ಇಮೇಜ್
  ಗುರುಗುಂಟ;ಜ-26 ಗುಡುಗುಂಟ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೭೬ನೇ ಗಣರಾಜ್ಯೋತ್ಸವವನ್ನು ಗುರುಗುಂಟದ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೭೬ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಇದರ ನಿಮಿತವಾಗಿ.ಶಾಲೆಯ ಮಂತ್ರಿಮಂಡಲ ಹೌಸ್ ವೈಸ್ ವಿದ್ಯಾರ್ಥಿಗಳಿಂದ ದೈಹಿಕ ಶಿಕ್ಷಕರಾದ ಅಂತೋನಿರಾಯ್ ಇವರ ಮಾರ್ಗದರ್ಶನದಿಂದ ಮಾರ್ಚ್ ಫಾಸ್ಟ್ ಪೆರೇಡ್ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ||ಮರಿಸ್ವಾಮಿ ಹಿರಿಯ ವಕೀಲರು ಸಿಂಧನೂರು ಇವರು ೭೬ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿದರು.ನಂತರ ಮಹಾತ್ಮ ಗಾಂಧೀಜಿ ಹಾಗೂ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ಫೋಟೋಗಳಿಗೆ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥರು ಹಾಗೂ ಮುಖ್ಯ ಉಪಾಧ್ಯಾಯರಾದ ಫಾದರ್ ರಾಬರ್ಟ್ ಫಾಲ್ ಪುಸಮಿ.ಹಾಗೂ ಬೋಧಕರು ಮತ್ತು ಶಾಲೆಯ ಸಿಬ್ಬಂದಿ ವರ್ಗದವರು ಸಹಕರಿಸಿದ್ದರು.  ನಂತರ ಕಾರ್ಯಕ್ರಮದ ಕುರಿತು 9ನೇ ತರಗತಿ ವಿದ್ಯಾರ್ಥಿಗಳಾದ ಶಾಂಭವಿ.ಸುಪ್ರೀತ. ಆಂಗ್ಲ ಭಾಷೆಯಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಕನ್ನಡ ಭಾಷೆಯಲ್ಲಿ ವೆಂಕಟೇಶ್ 7ನೇ ತರಗತಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಶಿಕ್ಷಕರಾದ ಪೆಡಿಲಿಸ್(ಪುಷ್ಪರಾಜ್) ದೇಶದ ಹಿರಿಮೆಯನ್ನು ತಮ್ಮ ಅನಿಸಿಕೆಯಲ್ಲಿ ವ್ಯಕ್ತಪಡಿಸಿದರು. ತದನಂತರ ಮುಖ್...

ಅನಧಿಕೃತ ರಾಪಿಡೋ, ಓಲಾ, ಉಬರ್, ಗೂಡ್ಸ್ ಪೋರ್ಟಲ್ ಗಳ ವಿರುದ್ಧ ಚಾಲಕ ಸಂಘಟನೆಗಳ ಆಕ್ರೋಶ : ಖಾಲಿ ತಪ್ಪಲೆ, ತಟ್ಟೆಗಳನ್ನು ಹಿಡಿದು ವಿನೂತನ ಪ್ರತಿಭಟನೆ

ಇಮೇಜ್
  ಬೆಂಗಳೂರು, ಜ, 25; ಅನಧಿಕೃತವಾಗಿ ನಡೆಯುತ್ತಿರುವ ರಾಪಿಡೋ, , ಓಲಾ, ಉಬರ್, ಹಾಗೂ ಗೂಡ್ಸ್ ಪೋರ್ಟರ್ ನಂತಹ ಆನ್ಲೈನ್ ಸಂಸ್ಥೆಗಳು ವಿರುದ್ಧ ಹಾಗೂ ಇಂತಹ ಕಾನೂನುಬಾಹಿರ ಸಂಸ್ಥೆಗಳನ್ನು ಪೋಷಿಸುತ್ತಿರುವ ಸಾರಿಗೆ ಅಧಿಕಾರಿಗಳ ಧೋರಣೆ ಪ್ರತಿಭಟಿಸಿ ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಹಾಗೂ ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ನ ಪ್ರತಿನಿಧಿಗಳು ಫ್ರೀಡಂ ಪಾರ್ಕ್ ನ ಭಗತ್ ಸಿಂಗ್ ಪ್ರತಿಮೆ ಎದುರು ಖಾಲಿ ತಪ್ಪಲೆ, ತಟ್ಟೆಗಳನ್ನು ಹಿಡಿದು ವಿನೂತನ ಪ್ರತಿಭಟನೆ ನಡೆಸಿದರು.  ಚಾಲಕರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಚಾಲಕರು ಖಾಲಿ ಪಾತ್ರೆ ಸಾಮಾನುಗಳನ್ನು ಬಡಿದು, ಕಪ್ಪು ಪಟ್ಟಿ ಧರಿಸಿ ಘೋಷಣೆ ಕೂಗಿದರು. ಕಾನೂನು ಬಾಹಿರ ಸಾಗಾಣೆ ವಾಹನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಇವು ಸರ್ಕಾರದಿಂದ ನಿಯಮಾನುಸಾರ ಅನುಮತಿ ಪಡೆದಿಲ್ಲ. ಇದರಿಂದ ಖಾಸಗಿ ವಾಹನ ಚಾಲಕರ ದುಡಿಮೆಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಮಾತನಾಡಿ, ಸಮಸ್ಯೆ ಬಗೆಹರಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಪದೇ ಪದೇ ಮಾಡಿದ ಮನವಿಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಸಾರಿಗೆ ಅಧಿಕಾರಿಗಳೇ ಇಂತಹ ಕಾನೂನು ಬಾಹಿರ ಸಂಸ್ಥೆಗಳ ಪೋಷಕರಾಗಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮನವಿ ಮಾಡಿದ್ದೇವ...

ಆರೋಪಿಗಳನ್ನು ಬಂಧಿಸಲು ಕೋರವ ಸಮಾಜ ಒತ್ತಾಯ

ಇಮೇಜ್
  ಲಿಂಗಸಗೂರು -ಬಸವನಬಾಗೇವಾಡಿ ತಾಲೂಕಿನ ತೆಲಗಿ ಗ್ರಾಮದಲ್ಲಿ ಲಿಂಗರಾಜ ಹಾಗೂ ಅವರ ತಂದೆ ತಾಯಿ ಕೂಡಲೇ ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಬೇಕು ಎಂದು ಕೊರವ ಸಮಾಜದ ಮುಖಂಡರಾದ ರಾಜೇಶ್ ಮಾಣಿಕ್ ಹಾಗೂ ಹುಚ್ಚೇಶ್ವರ ಭಜಂತ್ರಿ ಬಾವಲತ್ತಿ ಒತ್ತಾಯಿಸಿದರು ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇದೇ ತಿಂಗಳು 13ರಂದು ನಡೆದ ವಿಜಾಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ತೆಲಗಿ ಗ್ರಾಮದ ಲಿಂಗರಾಜ್ ತನ್ನಪತ್ನಿ ಭಾಗ್ಯ ಹಾಗೂ ಅವರ ನಾಲ್ಕು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಇಬ್ಬರು ಅವಳಿ ಜವಳಿ ಗಂಡು ಮಕ್ಕಳು ನಿಡಗುಂದಿ ಬಳಿ ಬೇನಾಳ ಗ್ರಾಮದ ಹತ್ತಿರದ ಕಾ ಲುವೆಗೆ ನಾಲ್ಕು ಮಕ್ಕಳನ್ನು ಎಸೆದಿರುವ ಘಟನೆ ನಡೆದಿತ್ತು ಈ ಘಟನೆಯಲ್ಲಿ ತನು ರಕ್ಷಾ ಹಾಗೂ ಅವಳಿ ಮಕ್ಕಳದ ಹಸ್ಸನ್ ಹುಸೇನ್ ಸಾವನ್ನಪ್ಪಿದದ್ದಾರೆ ಇಡೀ ಪ್ರಕರಣದಲ್ಲಿ ನಾಲ್ವರ ಮಕ್ಕಳ ತಂದೆಯಾದ ಲಿಂಗರಾಜ್ ಹಾಗೂ ಆತನ ಮನೆಯವರು ಕಾರಣರಾಗಿದ್ದಾರೆ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಲಿಂಗರಾಜ್ ಪತ್ನಿ ಅಂದರೆ ಸಾವನ್ನಪ್ಪಿದ ನಾಲ್ಕು ಮಕ್ಕಳ ತಾಯಿ ಭಾಗ್ಯ ಕಾರಣವೆಂದು ಬಿಂಬಿಸಲಾಗುತ್ತದೆ ಇದು ಅತ್ಯಂತ ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಭಾಗ್ಯ ಇವರ ಪತ್ನಿ ಲಿಂಗರಾಜ್ ಹಾಗು ಆತನ ಮನೆಯವರು ಸಂಪೂರ್ಣವಾಗಿ ಕಾರಣರಾಗಿದ್ದಾರೆ. ಭಾಗ್ಯ ಇವರ ತವರು ಮನೆ ಲಿಂಗ್ಸುರ್ ತಾಲೂಕಿನ ಕಸಬಾ ಲಿಂಗಸೂರ್ ಗ್ರಾಮದ ವಾಗಿದ್ದು ಇವರನ್ನು ತೆಲಗಿ ಗ್ರಾಮದ ಲಿಂಗರಾಜನಿಗೆ ಸಾಕಷ್ಟು ಬಂಗಾರ ವರದಕ್...

ಸರ್ಕಾರಿ ನೌಕರರ ಹಿತ ಕಾಯಲು ಸಂಘದ ಕೊಡುಗೆ ಅನನ್ಯ - ಷಡಾಕ್ಷರಿ

ಇಮೇಜ್
  ಕೊಟ್ಟೂರು: ನೌಕರರ ಹಿತ ಕಾಯಲು ಸರ್ಕಾರಿ ನೌಕರರ ಸಂಘ ಹಗಲಿರುಳು ಶ್ರಮಿಸುತ್ತಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು. ಪಟ್ಟಣದ ಶ್ರೀ ಮರುಳಸಿದ್ದೇಶ್ವರ ಸಭಾಂಗಣದಲ್ಲಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ವತಿಯಿಂದ ಗುರುವಾರ ಏರ್ಪಡಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ರಾಜ್ಯ ಘಟಕದ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಎಲ್ಲಾ ಇಲಾಖೆಗಳಿಂದ ಶೇ 40 ರಷ್ಟು ಹುದ್ದೆಗಳು ಖಾಲಿ ಇದ್ದು ಇರುವ ನೌಕರರ ಮೇಲೆ ಕಾರ್ಯಭಾರ ಹೆಚ್ಚಳವಾಗಿ ನೌಕರರು ಮಾನಸಿಕವಾಗಿ ಕುಗ್ಗಿ ಹೋಗಿದ್ದರೂ ಸರ್ಕಾರ ನೇಮಕಾತಿಗೆ ಮುಂದಾಗುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿ ಕಂದಾಯ ವಸೂಲಿ ಹಾಗೂ ನೌಕರರ ಕಾರ್ಯವೈಖ್ಯರಿ ನಮ್ಮ ರಾಜ್ಯ ದೇಶದಲ್ಲಿ ಪ್ರಥಮ ಸ್ಥಾನದಲ್ಲಿರುವುದು ನೌಕರರ ದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು. ನೌಕರರ ಸಂಘದಿಂದ ಕೋವಿಡ್ ಸಮಯದಲ್ಲಿ ಹಾಗೂ ಸಾಹಿತ್ಯ ಸಮ್ಮೇಳನ ಮುಂತಾದ ಕಾರ್ಯಕ್ರಮಗಳಿಗೆ ನೌಕರರು ವೇತನ ನೀಡುವ ಮೂಲಕ ಧನ್ಯತಾ ಭಾವ ಮೆರೆದಿದ್ದಾರೆ ಎಂದರಲ್ಲದೇ ಮಹಿಳಾ ನೌಕರರಿಗೆ ಭದ್ರತೆ ಹಾಗೂ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವುದು ಸೇರಿದಂತೆ ದುಡಿಯುವ ವರ್ಗಕ್ಕೆ ಗ್ಯಾರಂಟಿ ಯೋಜನೆಗಳ ಮಧ್ಯಯೂ ಸರ್ಕಾರದಿಂದ ನ್ಯಾಯ ದೊರಕಿಸಿಕೊಡಲು ಸಂಘದ ಕೊಡುಗೆ ಅಪಾರವಾಗಿದೆ ಎಂದರು. ರಾಜ್ಯದ 57 ತಾಲ್ಲೂಕುಗಳು ಪೂರ್ಣ ಪ್ರಮಾಣದ ಕಚೇರಿಗಳನ್ನು ತೆರೆಯದ...

ಪಟ್ಟಣದಲ್ಲಿ ಎಲ್ಲೆಡೆ ನಾಯಿಗಳ ಹಾವಳಿ ,ಅಧಿಕಾರಿಗಳು ಜಾಣ ಕುರುಡು ಪ್ರದರ್ಶನ

ಇಮೇಜ್
  "ವಯೋ ವೃದ್ಧರು ರಸ್ತೆಗಳಲ್ಲಿ ಓಡಾಡುವಾಗ ಜೀವ ಕೈಯಲ್ಲಿ ಹಿಡಿದು ಓಡಾಡುವಂತಹ ಸ್ಥಿತಿ ನಿರ್ಮಾಣ" ಕೊಟ್ಟೂರು ಪಟ್ಟಣದ ವಿಚಾರಕ್ಕೆ ಬಂದರೆ ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ  ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ ಆದರೆ ಪಟ್ಟಣ ಪಂಚಾಯಿತಿ ಯಿಂದ ಜಾಣ ಕುರುಡು ಪ್ರದರ್ಶನ ಮುಂದುವರಿದಿದೆ.  ಮುಖ್ಯವಾಗಿ ಪುಟ್ಟರಾಜು ಬಡಾವಣೆ, ಲಾಲ್ ಬಹದ್ದೂರ್ ಶಾಸ್ತ್ರಿ ಬಡಾವಣೆ, ಬಸವೇಶ್ವರ ಬಡಾವಣೆ, ಮುದುಕನ ಕಟ್ಟೆ, ಕೆಳಗೇರಿ ರಾಜೀವ ನಗರ ನಾಯಿ ಗಳ ಹಾವಳಿ ಬಹಳವಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಪಟ್ಟಣದ ಎಲ್ಲಾ ಬಡಾವಣೆಗಳಲ್ಲಿ ಎಲ್ಲೆಂದರಲ್ಲಿ ನಾಯಿಗಳು ಹಿಂಡು ಹಿಂಡಾಗಿ ಓಡಾಡುತ್ತಿದ್ದು ಸಣ್ಣ ಮಕ್ಕಳು ರಸ್ತೆಯಲ್ಲಿ ಆಟ ಆಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಿರಿಯ ನಾಗರಿಕರು ವಯೋ ವೃದ್ಧರು ರಸ್ತೆಗಳಲ್ಲಿ ಓಡಾಡುವಾಗ ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವಂತಹ ಸ್ಥಿತಿ ಬಂದೊದಗಿದೆ. ನಾಯಿಗಳ ಹಾವಳಿಯ ಬಗ್ಗೆ ಸಾರ್ವಜನಿಕರು ಹಲವಾರು ಸಂಘ ಸಂಸ್ಥೆಗಳು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಾದ ವಾಟ್ಸಪ್‌ಗಳ ಮೂಲಕ ಅಲ್ಲಲ್ಲಿ ನಾಯಿಗಳು ಆಟವಾಡುತ್ತಿರುವ ಮಕ್ಕಳ ಮೇಲೆ. ಬೆಳಗ್ಗೆ ವಾಯು ವಿಹಾರಕ್ಕೆಂದು ತೆರಳುವ ಮಹಿಳೆಯರು, ಹಿರಿಯ ನಾಗರಿಕರಿಗೆ ತೊಂದರೆ ಕೊಡುತ್ತಾ ಹಲ್ಲೆ ಆಗಿರುವ ಘಟನೆಗಳು ಈ ಹಿಂದೆ ನಡೆದಿವೆ ಮುಂದಿನ ದಿನಗಳಲ್ಲಿ ನಡೆದಂತೆ ಕ್ರಮವಹಿಸುವಂತ...

ಕೊಟ್ಟೂರು-ಗಜಾಪುರ ಸಂಪರ್ಕಿಸುವ ರಸ್ತೆ ನವೀಕರಣಕ್ಕೆ ಶಾಸಕ ಕೆ.ನೇಮಿರಾಜ್ ನಾಯ್ಕ ಅವರಿಂದ ಭೂಮಿ ಪೂಜೆ ಚಾಲನೆ

ಇಮೇಜ್
  ಕೊಟ್ಟೂರು: ಕೊಟ್ಟೂರುನಿಂದ ಕೂಡ್ಲಿಗಿಗೆ ಸಂಪರ್ಕ ನೀಡುವ ಹೆದ್ದಾರಿ ತಗ್ಗು ಗುಂಡಿಗಳಾಗಿ ರಸ್ತೆಗಳಾಗಿದ್ದ ಹಿನ್ನೆಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರು ಪರದಾಡುವಂತಾಗಿತ್ತು. ಇದನ್ನು ಮನಗಂಡು ಸಾರ್ವಜನಿಕರ ಮನವಿಯ ಮೇರೆಗೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಹಗರಿಬೊಮ್ಮನಹಳ್ಳಿ ಶಾಸಕರಾದ ಕೆ.ನೇಮಿರಾಜ್ ನಾಯ್ಕ ರವರ ಇಚ್ಛಾಶಕ್ತಿ ಮತ್ತು ಕ್ರಿಯಾಶೀಲತೆಯ ಪರಿಣಾಮವಾಗಿ ಕೊಟ್ಟೂರು-ಕೂಡ್ಲಿಗಿ ಸಂಪರ್ಕಿಸುವ ರಸ್ತೆಯನ್ನು ಪಟ್ಟಣದ ಅಗ್ನಿಶಾಮಕ ಕಛೇರಿಯ ಮುಂಭಾಗದಲ್ಲಿ ಭೂಮಿಪೂಜೆಯನ್ನು  ಲೋಕೋಪಯೋಗಿ ಇಲಾಖೆಯಿಂದ ೨೦೨೩-೨೪ನೇ ಸಾಲಿನ ಸಿ.ಆರ್.ಎಫ್-ಕೆ.ಎನ್.ಸಿ. ಯೋಜನೆ ಅಡಿಯಲ್ಲಿ ಬುಧವಾರದಂದು ಭೂಮಿ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.  ಭೂಮಿಪೂಜೆ ನೆರವೇರಿಸಿ ಮಾತನಾಡಿದ ಹಗರಿಬೊಮ್ಮನಹಳ್ಳಿ ಶಾಸಕರು ಕೊಟ್ಟೂರು-ಗಜಾಪುರ ಸಂಪರ್ಕಿಸುವ ರಸ್ತೆ ನವೀಕರಣವನ್ನು ಸುಮಾರು ೪.೮೫ ಕೋಟಿ ವೆಚ್ಚದಲ್ಲಿ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಹಾಗೆ ಕೊಟ್ಟೂರು ತಾಲೂಕಿನ ಸಂಪರ್ಕಿಸುವ ವಿವಿಧ ರಸ್ತೆಗಳನ್ನು ಈಗಾಗಲೇ ಇಟಗಿ ರಸ್ತೆಯು ೧೦ ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆದಿದ್ದು ಹಾಗೆಯೇ ಹರಾಳು ಕ್ರಾಸ್‌ನಿಂದ ಕೊಟ್ಟೂರಿನವರೆಗೂ ೫.೦೦ ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಎಪಿಎಂಸಿ ರಸ್ತೆಯಿಂದ ಕೊಟ್ಟೂರು ಗಡಿಭಾಗವಾದ ಹಗರಿ ಗಜಾಪುರವರಿಗೂ ಮೂರು ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲು ಸೂಚಿಸಲಾಗಿದೆ ಎಂದರು....

ನಾಳೆ ಶಾ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ : ಮಲ್ಲಪ್ಪ ಎಸ್ ಗೋನಾಳ

ಇಮೇಜ್
ಮಸ್ಕಿ : ಡಾ.ಬಾಬಾ ಸಾಹೇಬರ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾ ಗೊಳಿಸಬೇಕು. ಅಂಬೇಡ್ಕರ್ ಪ್ರತಿಮೆ ಮುಂಭಾಗ ಕ್ಷಮೆ ಕೇಳಲೇಬೇಕು ಮತ್ತು ಸ್ವಾಭಿ ಮಾನಿ ದಲಿತ ಯುವ ನಾಯಕ ಪ್ರಿಯಾಂಕ್ ಖರ್ಗೆ ವಿರುದ್ದದ ಬಿಜೆಪಿಯ ಪಿತೂರಿ ರಾಜ ಕಾರಣ ಹಿಮ್ಮೆಟ್ಟಿಸಲು ಜ.23 ರಂದು ಬೆಂಗಳೂರಿನ ಪ್ರೀಡಂಪಾರ್ಕ್‌ನಲ್ಲಿ  ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡಿದ್ದು ಜಿಲ್ಲೆಯ ಹಾಗೂ  ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ಸಂಯೋಜಕ ಬಣದ ಜಿಲ್ಲಾ ಅಧ್ಯಕ್ಷ ಮಲ್ಲಪ್ಪ ಎಸ್ ಗೋನಾಳ ರವರು ಕರೆ ನೀಡಿದರು. ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು,  ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಮಲ್ಲಿಕಾರ್ಜುನ ಖರ್ಗೆಯವರನ್ನು ಎದುರಿಸಲಾಗದೇ ಏಡಿಗಳಂತೆ ಅವರ ಮಗ ಪ್ರಿಯಾಂಕ್ ಖರ್ಗೆ ವಿರುದ್ಧ ಸುಳ್ಳ ಆರೋಪ ಹೊರಿಸಿ ಸ್ವಾಭಿಮಾನಿ ದಲಿತ ಯುವ ನಾಯಕರ ಬಾಯಿ ಮುಚ್ಚಿಸಲು ಮುಂದಾಗಿದೆ. ಆದ್ದರಿಂದ ದಲಿತ ಬಂಧುಗಳೇ ಬನ್ನಿ ಭಾಗವಹಿಸಿ ಪ್ರತಿಭಟನೆ ಯಶಸ್ವಿಗೊಳಿಸಲು ಕೈ ಜೋಡಿಸಿ ನಾವು ಎಲ್ಲರೂ ಬೆಂಗಳೂರು ನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ತಾಲೂಕಿನಿಂದ ಎರಡೂ ಸಾವಿರ ಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಅಂದಿನ ಪ್ರತಿಭಟನೆಯಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿ ಎಂದು ಮನವ...

ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ್ ಅನ್ವರಿ ಇವರಿಂದ. ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆ.

ಇಮೇಜ್
  ಹಟ್ಟಿ ಚಿನ್ನದ ಗಣಿ ಗ್ರಾಮೀಣ ಪ್ರದೇಶಗಳಲ್ಲಿ ಕ್ರಿಕೆಟ್ ಅಂದರೆ. ಈಗಿನ ಯುವ ಪೀಳಿಗೆಗೆ ಅಚ್ಚುಮೆಚ್ಚು ಅಂತದರಲ್ಲಿ.ಹಟ್ಟಿ ಚಿನ್ನದ ಗಣಿ ಸಮೀಪದ ಆನ್ವರಿ ಗ್ರಾಮದಲ್ಲಿ ಇಂದಿನಿಂದ ಆನ್ವರಿ ಕ್ರಿಕೆಟ್ ಕ್ಲಬ್ ವತಿಯಿಂದ ಶ್ರೀ ಹುಚ್ಚ ಬುಡ್ಡೆಶ್ವರ ಕ್ರೀಡಾಂಗಣದಲ್ಲಿ 36 ತಂಡಗಳು.34 ಪಂದ್ಯಗಳು.20 ದಿನ ನಡೆಯುವಂತ ಕ್ರಿಕೆಟ್ ಪಂದ್ಯ.ಪ್ರಥಮ ಬಹುಮಾನ 50,000 ರೂ ಒಂದು ಕಪ್.ದ್ವಿತೀಯ ಬಹುಮಾನ 25000 ರೂ ಒಂದು ಕಪ್.ಉತ್ತಮ ಬ್ಯಾಟ್ಸ್ ಮ್ಯಾನ್.ಉತ್ತಮ ಬಾಲರ್.ಉತ್ತಮ ಫಿಲ್ಟರ್.ತಲಾ 2100ರೂ ಹಾಗೂ ಒಂದು ಕಪ್ಪು ಕಪ್. ಓಪನ್ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆಯನ್ನು ಪೂಜ್ಯರಾದ ಮಲ್ಲಣ್ಣ ತಾತ ಹಾಗೂ ಉದ್ಘಾಟಕರಾಗಿ ಮಾಜಿ ಕೇಂದ್ರ ಸಚಿವರಾದಂತ ಬಸವರಾಜ ಪಟೇಲ್ ಅನ್ವರಿ.ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಸವರಾಜ ಜಿರಾಳ. ಮುಖ್ಯ ಅತಿಥಿಗಳಾಗಿ ಶಿವಶರಣಪ್ಪ ಗೌಡ ಮಾಜಿ ತಾ.ಪಂ. ಸದಸ್ಯರು. ಮೌಲಾಸಾಬ್ ಗ್ರಾ.ಪಂ. ಮಾಜಿ ಅಧ್ಯಕ್ಷರು.ಬಸವರಾಜ ಸಾಹುಕಾರ.ಅಯ್ಯನಗೌಡ.ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯಾಕೋಬ. ಅತಿಥಿಗಳಾದ ಅಮರೇಗೌಡ ಮಾಲಿ ಪಾಟೀಲ್.ಮುದಿಯಪ್ಪ ಕ್ವಾಟಿ.ಗಂಗಪ್ಪ ಅನಂದಗಲ್.ಗಂಗಪ್ಪ ಕಾವಲಿ.ಕಾಸಿಂಅಲಿ. ಹುಚುರಡ್ಡಿ.ತಿಪ್ಪಣ್ಣ ಹಾದಿಮನಿ.ಗಂಗಪ್ಪ ಬಡಿಗೇರ್.ಶರಣಪ್ಪ ನಿಲೋಗಲ್.ಸಂಗಪ್ಪ ಗೂಗೆಬಾಳ.ಹಾಗೂ ವೇದಿಕೆ ಮೇಲಿರುವಂತ ಗಣ್ಯ ಮಹನೀಯರಿಂದ ದೀಪ ಬೆಳಗಿಸುವುದರ ಮುಖಾಂತರ ಕಾರ್ಯಕ್ರಮಕ್ಕೆ ಚ...

ಸಮಾನತೆಯ ತತ್ವವನ್ನು ಜಗತ್ತಿಗೆ ಸಾರಿದವರು ಅಂಬಿಗರ ಚೌಡಯ್ಯ : ಆರ್ ಸಿದ್ದನಗೌಡ ತುರುವಿಹಾಳ

ಇಮೇಜ್
  ಮಸ್ಕಿ : ಪಟ್ಟಣದ ಗಚ್ಚಿನ ಮಠದ ಹತ್ತಿರದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಜರುಗಿತು. ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಗಚ್ಚಿನ ಹಿರೇಮಠದ ಶ್ರೀ ವರ ರುದ್ರಮುನಿ ಸ್ವಾಮಿಗಳು ಪುಷ್ಪ ನಮನ ಸಲ್ಲಿಸಿದರು.  ಶರಣರ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿಗೆ ಗೌರವ ಸಲ್ಲಿಸಿದಂತಾಗುತ್ತದೆ. 800 ವರ್ಷಗಳ ಹಿಂದೆ, 12ನೇ ಶತಮಾನದಲ್ಲಿ ಸಮಾನತೆಯ ತತ್ವವನ್ನು ಜಗತ್ತಿಗೆ ಸಾರಿದವರು ಅಂಬಿಗರ ಚೌಡಯ್ಯನವರು ಎಂದು ಕೆಪಿಸಿಸಿ ರಾಜ್ಯ ಪ್ರಧಾನದರ್ಶಿ ಎಸ್.ಟಿ ಘಟಕ ಆರ್.ಸಿದ್ದನಗೌಡ ತುರುವಿಹಾಳ ರವರು ಹೇಳಿದರು. ನಂತರ ತಹಶೀಲ್ದಾರರಾದ ಡಾ.ಮಲ್ಲಪ್ಪ.ಕೆ.ಯರಗೋಳ ರವರು ಮಾತನಾಡಿ, ಹಿಂದಿನ ಕಾಲದಲ್ಲಿ ನದಿಯ ದಡವನ್ನು ದಾಟಲು ಯಾವುದೇ ಸೌಕರ್ಯಗಳಿರಲಿಲ್ಲ. ಅಂತಹ ಸಂದರ್ಭದಲ್ಲಿ ನದಿಯ ದಡವನ್ನು ಸೇರಿಸುತ್ತಿದ್ದರು. ಅಂಬಿಗರನ್ನು ನಂಬಿದವರ ಕೈಬಿಡುವುದಿಲ್ಲ ಎಂದು ಕಾರ್ಯಕ್ರಮದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಈ ವೇಳೆ ಗ್ರೇಡ್ ೨ ತಹಶೀಲ್ದಾರರಾದ ಅಶೋಕ್ ಪವರ್, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ,ಪುರಸಭೆ ಉಪಾಧ್ಯಕ್ಷೆ ಗೀತಾ ಶಿವರಾಜ್ ಬುಕ್ಜಣ್ಣ, ಗಂಗಾಮತಸ್ಥ ಸಮಾಜದ ತಾಲೂಕು ಅಧ್ಯಕ್ಷ ನಾಗಭೂಷಣ ಬಾರಿಕೇರ,ಮಲ್ಲಯ್ಯ,ಗಂಗಾಮಸ್ಥ ಸಮಾಜದ ಹಿರಿಯ ಮುಖಂಡ ರಾಜನಾಯ್ಕ,ಮಲ್ಲಯ್ಯಬಳ್ಳಾ,ಮಲ್ಲಯ್ಯ ಮುರಾರಿ, ರವಿ ಮಡಿವಾಳ, ಅಶೋಕ ನಾಯ್ಕ,ಮಹಿಬೂಬು ಹಣಿಗಿ,ಸಿದ್ದು ಮುರಾರಿ, ವೆಂಕಪ್ಪ ನಾಯಕ,ಮಲ್ಲಣ್ಣ, ಮಲ್ಲಪ್ಪ ಬಾರಿಕ...

ಮಾರ್ಚ್ 4 ರಿಂದ 9 ರವರೆಗೆ 45 ನೇ ನ್ಯಾಷನಲ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಸ್ ಶಿಪ್ ಕ್ರೀಡೆ

ಇಮೇಜ್
  ಬೆಂಗಳೂರು: ಮಾರ್ಚ್ 4 ರಿಂದ 9 ತನಕ 45 ನೇ ನ್ಯಾಷನಲ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಸ್ ಶಿಪ್ ಕ್ರೀಡಾ ಕೂಟ  ಮಾಸ್ಟರ್ಸ್ ಅಥ್ಲೆಟಿಕ್ ಫೇಡರೇಷನ್ ‌ಆಫ್ ಇಂಡಿಯಾ ಸಂಸ್ಥೆಯು 2025 ರ ಮಾರ್ಚ್ ತಿಂಗಳ 4 ರಿಂದ 9 ರ ತನಕ 45 ನೇ ನ್ಯಾಷನಲ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಸ್ ಶಿಪ್ ಕ್ರೀಡಾ ಕೂಟ ಬೆಂಗಳೂರಿನಲ್ಲಿ ಆಯೋಜಿಸಿದೆ. ಮಹಿಳಾ‌ ಮತ್ತು‌‌ಪುರುಷರ ವಿಭಾಗದಲ್ಲಿ 35 ವರ್ಷದ ದಿಂದ 100 ವರ್ಷ ವಯೋಮಿತಿಯ ‌ಕ್ರೀಡಾಪಟುಗಳು‌ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಈ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳು ಇಂಡೋನೇಷ್ಯಾದಲ್ಲಿ ಈ ವರ್ಷ ನಡೆಯುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸುವ‌ ಅರ್ಹತೆ ಪಡೆಯತ್ತಾರೆ ಎಂದು ಕ್ರೀಡಾ ಕೂಟದ ಕಾರ್ಯಕಾರಿ ಸಮಿತಿಯ ಸಂಘಟನಾ ಕಾರ್ಯದರ್ಶಿ ಸಂತೋಷ್.ಎಲ್.ಕೃಷ್ಣ ತಿಳಿಸಿದ್ದಾರೆ. ‌ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (SAI) ಕ್ರೀಡಾಂಗಣದಲ್ಲಿ ನಡೆಯುವ ಈ ಕ್ರೀಡಾ ಕೂಟದಲ್ಲಿ ದೇಶದ ಎಲ್ಲಾ ರಾಜ್ಯಗಳ ಕ್ರೀಡಾ ಪಟುಗಳು ಭಾಗವಹಿಸಲಿದ್ದಾರೆ ಎಂದು ಮಾಸ್ಟರ್ಸ್ ಅಥ್ಲೆಟಿಕ್ಸ್ ಫೇಡರೇಷನ್ ಆಫ್‌ ಇಂಡಿಯಾ ಈ ಕ್ರೀಡಾಕೂಟದ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ನಡೆಯುವ ಈ ಕ್ರೀಡಾಕೂಟದಲ್ಲಿ ಹೆಚ್ಚಿನ ಸಂಖ್ಯೆಯ ಕ್ರೀಡಾಪಟುಗಳು ಭಾಗವಹಿಸಿ ತಮ್ಮ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಬೇಕು ಎಂದು‌‌ ಕೆ.ಲಕ್ಷ್ಮೀನಾರಾಯಣ ಮನ...

ವ್ಯಕ್ತಿ ಕಾಣೆ: ಪತ್ತೆಗೆ ಮನವಿ

ಇಮೇಜ್
  ಕೊಟ್ಟೂರು:- ತಾಲೂಕಿನ ತಿಪ್ಪೇಸ್ವಾಮಿ ಡಿ.ಎನ್. ಎಂಬವವರ ಮಗನಾದ ಮೂಗಪ್ಪ ಡಿ.ಎನ್. ದಿನಾಂಕ 22.12.2024 ರ ಬೆಳಗ್ಗೆ 3.00 ಗಂಟೆಗೆ ಮನೆಯಿಂದ ಹೋದವನು ಪತ್ತೆಯಾಗಿಲ್ಲ. ನೆಂಟರಿಷ್ಟರ ಮನೆ ಹಾಗೂ ಸ್ನೇಹಿತರ ಮನೆಯಲ್ಲಿ ಆತನಿಗಾಗಿ ಹುಡುಕಾಟ ನಡೆಸುವುದರ ಜತೆಗೆ ಉಳಿದ ಕಡೆ ಹುಡುಕಾಟ ನಡೆಸಿದರೂ ಪ್ರಯೋಜನವಾಗದೆ, ಕಾಣೆಯಾಗಿರುವ ಬಗ್ಗೆ ಆತನ ತಂದೆ ತಿಪ್ಪೇಸ್ವಾಮಿ ಡಿ ಎನ್ ಅವರು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಮೇಲೆನ ವ್ಯಕ್ತಿಯ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಕೊಟ್ಟೂರು ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿಲಾಗಿದೆ.

APS ನನ್ನ ಗರ್ವ ಮತ್ತು ಹೆಮ್ಮೆಸೂಪರ್ ಸ್ಟಾರ್.ರಜನಿ ಕಾಂತ್

ಇಮೇಜ್
ಬೆಂಗಳೂರು : APS ಕಾಲೇಜಿನ “MEGA ALUMNI MEET “ ಅನ್ನು ಇದೆ 26 ಜನವರಿ 2025 ರಂದು ನಿಗದಿಪಡಿಸಲಾಗಿದೆ ಎಂದು ಕೇಳಿ ಬಹಳ ಸಂತೋಷವಾಯಿತು. ನಾನು ಚಲನಚಿತ್ರದ ಚಿತ್ರೀಕರಣಕ್ಕಾಗಿ ಬ್ಯಾಂಕಾಕ್‌ನಲ್ಲಿದ್ದೇನೆ, ನಾನು APS ನಲ್ಲಿ ಕಳೆದ ನನ್ನ ಬಾಲ್ಯದ ಸುವರ್ಣ ದಿನಗಳನ್ನು ಜ್ಞಾಪಿಸಿಕೊಳ್ಳಲು ಬಯಸುತ್ತೇನೆ. ನಾನು ಮೊದಲು ಎಪಿಎಸ್ ಹೈಸ್ಕೂಲ್‌ಗೆ ಸೇರಿದಾಗ, ನಾನು ಈ ಹಿಂದೆ ಕನ್ನಡ ಮಾಧ್ಯಮದಲ್ಲಿ ಓದಿದ್ದೆ ಮತ್ತು ನಂತರ ಇಂಗ್ಲಿಷ್ ಮಾಧ್ಯಮಕ್ಕೆ ಸೇರಿದಾಗ ತುಂಬಾ ಸವಾಲಿನ ಸಂಗತಿಯಾಗಿತ್ತು. ಆದಾಗ್ಯೂ ಇಲ್ಲಿನ ನನ್ನ ಶಿಕ್ಷಕರು ನಂಬಲಾಗದಷ್ಟು ಬೆಂಬಲ ಹಾಗೂ ಪ್ರೋತ್ಸಾಹವನ್ನು ನೀಡಿದರು. ನಿರ್ದಿಷ್ಟವಾಗಿ ಹೇಳುವುದಾದರೆ, ನಾನು 10 ನೇ ತರಗತಿಯಲ್ಲಿ ರಸಾಯನಶಾಸ್ತ್ರ ವಿಷಯವು ತುಂಬಾ ಕಷ್ಟವಾಗಿತ್ತು., ಆದರೆ ನನ್ನ ರಸಾಯನಶಾಸ್ತ್ರದ ಶಿಕ್ಷಕರು ನನಗೆ ಹೆಚ್ಚುವರಿ ತರಗತಿಗಳನ್ನು ತೆಗೆದುಕೊಂಡು ಬೋಧನೆಯನ್ನು ಉಚಿತವಾಗಿ ನೀಡಿದರು. ಅವರ ಸಹಾಯದಿಂದ ನಾನು ನನ್ನ 10ನೇ ತರಗತಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣನಾದೆ. ನಂತರ APS ಕಾಲೇಜಿಗೆ ಸೇರಿಕೊಂಡೆ. ನನ್ನ ಶಾಲಾ ದಿನಗಳಲ್ಲಿ ನನಗೆ ಹಾಡುಗಾರಿಕೆ, ನಾಟಕ ಮತ್ತು ಇತರ ಕಲೆಗಳ ಬಗ್ಗೆ ಹೆಚ್ಚು ಒಲವು ಇತ್ತು. ನಾನು ನನ್ನ ಸ್ನೇಹಿತರೊಂದಿಗೆ ಹಾಡುವುದು,ಮಿಮಿಕ್ರಿ ಮಾಡುತ್ತಿದ್ದೆ,ಅದು ನನಗೆ ಬಹಳ ಸಂತೋಷದ ವಿಷಯವಾಗಿರುತ್ತಿತ್ತು.ಜೊತೆಗೆ ನನ್ನ ಶಿಕ್ಷಕರು ನನ್ನ ಕಲೆಯನ್ನು ...

ಪ ಪೂ.ಮುರುಘೆoದ್ರ ಶಿವಯೋಗಿ ಯಾರಡೋಣ ಶ್ರೀಗಳಿಂದ.ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ.

ಇಮೇಜ್
ಲಿಂಗಸಗೂರು-ಶರಣು ಶ್ರೀ ಸೌಹಾರ್ದ ಪತ್ತಿನ ಸಹಕಾರಿ ಸಂಘದ 3ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಭ್ರಮರಾಂಬ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಮಸ್ಕಿ.ಹಾಗೂ ಕಾಮರೆಡ್ಡಿ ಮಕ್ಕಳ ಆಸ್ಪತ್ರೆ ಮತ್ತು ಶ್ರೀ ಅದ್ವಿಕಾ ಸ್ಕೂಲ್ ಆಫ್ ನರ್ಸಿಂಗ್ ಇವರ ಸಹಯೋಗದಲ್ಲಿ ಮತ್ತು ಪ ಪೂ॥ ಶ್ರೀ ಶ್ರೀ ಮುರುಘೆoದ್ರ ಶಿವಯೋಗಿಗಳು ಗುರುಮಠ ಯರಡೋಣಾ ಇವರು ದಿವ್ಯ ಸಾನಿದ್ಯ ವಹಿಸಿ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ನಂತರ ಮಾತನಾಡಿದ ಅವರು  ಶರಣು ಶ್ರೀ ಸೌಹಾರ್ದ ಪತ್ತಿನ ಸಹಕಾರಿ ಸಂಘ 11 ಲಕ್ಷ ಠೇವಣಿ ಹಣದಿಂದ ಪ್ರಾರಂಭವಾಗಿದ್ದು ಈಗಿನ ಲೇವಾದೇವಿ 18 ಕೋಟಿ ಯಷ್ಟು ಲೇವಾದೇವಿ ನೆಡೆಯುತ್ತಿದೆ.ಎಲ್ಲಾ ಸಹಕಾರಿ ಬ್ಯಾಂಕಿನವರು ಪ್ರತಿಭಾ ಪುರಸ್ಕಾರ ಹಾಗೂ ಬೇರೆ ಬೇರೆ ರೀತಿಯ ಕಾರ್ಯಕ್ರಮ ಕ್ಕೆ ತೊಡಗಿಸಿ ಕೊಳ್ಳುತ್ತಾರೆ.ಜೊತೆಗೆ ಹಣ ಯಾವರೀತಿ ಮಾಡುವುದು ಎಂದು ಕಾರ್ಯಕ್ರಮ ರೂಪಿಸುತ್ತಾರೆ.ಆದರೆ ಶರಣು ಶ್ರೀ ಸಹಕಾರಿ ಸಂಘದವರು ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿ ತಾಲೂಕಿನ ಎಲ್ಲಾ ಬಡಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಕಾರ್ಯಕ್ರಮ ಮಾಡಿದ್ದು ಸ್ಲಾಘನೀಯ ವಾಗಿದೆ ಇದೇ ರೀತಿ ಮುಂದೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ಇಂತಹ ಕಾರ್ಯಕ್ರಮಗಳು ನಡೆಸಲಿ ಬಡಜನರ ಪಾಲಿಗೆ ಈ ಸಹಕಾರಿ ಬ್ಯಾಂಕ್ ಉತ್ತಮ ಕೆಲಸ ಮಾಡುವುದನ್ನ ಮುಂದುವರೆಸಲಿ ಈ ಬ್ಯಾಂಕ್ ಬಡಜನರ ಭುಜಬಲವಾಗಿ ಹೊರ ಹೊಮ್ಮೇಲಿ.ಉತ್ತಮ ನಾಗು. ಉಪಕಾರಿಯಾಗು ಎನ್ನುವಂತೆ.ಈ ಸಹಕಾರಿ ಪತ್ತಿನ ಸಂಘ ಉತ್ತಮ ಸೇವ...