ಪೋಸ್ಟ್‌ಗಳು

ಆಗಸ್ಟ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

ಇಮೇಜ್
ಕೊಟ್ಟೂರು : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೂರಾರು ಬಡ ರೋಗಿಗಳು ತಮ್ಮ ಆರೋಗ್ಯವನ್ನು ತೋರಿಸಿಕೊಳ್ಳಲು ಪ್ರತಿನಿತ್ಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ. ಆಸ್ಪತ್ರೆಯಲ್ಲಿ ಇರುವ ಸಿಬ್ಬಂದಿ ಕಿರಣ್ ಕುಮಾರ್ ರೋಗಿಗಳ ಮೇಲೆ ಗದರಿಸುವುದು ಬೈಯುವುದು ಮತ್ತು ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಬಂದರೆ ಯಾವುದೇ ರೀತಿ ಸ್ಪಂದಿಸುವುದಿಲ್ಲ ಎಂದು ಸಾರ್ವಜನಿಕರು ಆತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಭಾನುವಾರದಂದು ಒಬ್ಬ ರೋಗಿಯು ತಮ್ಮ ಆರೋಗ್ಯ ತೋರಿಸಿಕೊಳ್ಳಲು ಆಸ್ಪತ್ರೆಗೆ ಬರುತ್ತಾರೆ ವೈದ್ಯರು ಬಿಪಿಯನ್ನು ಚೆಕ್ ಮಾಡಿಸುವಂತೆ ಹೇಳುತ್ತಾರೆ ಡಿಪಿ ಚೆಕ್ ಮಾಡಿಸಿಕೊಳ್ಳಲು ಸಿಬ್ಬಂದಿ ಕಿರಣ್ ಕುಮಾರ್ ಬಳಿ ಬಂದರೆ ನಾನು ಬಿಪಿ ಚೆಕ್ ಮಾಡುವುದಿಲ್ಲ ಯಾರಿಗೆ ಬೇಕಾದರೂ ಹೇಳಿ ನಾನು ಬಿಪಿ ಚೆಕ್ ಮಾಡುವುದಿಲ್ಲ ಎಂದು ಅಸಡ್ಯ ಉತ್ತರವನ್ನು ನೀಡುವುದಲ್ಲದೆ ಯಾವ ಅಧಿಕಾರಿಗಳಿಗಾದರೂ ಫೋನ್ ಮಾಡಿ ನಾನು ಮಾಡುವುದಿಲ್ಲ ಎಂದು ಹೇಳುತ್ತಾರೆ. ಸಿಬ್ಬಂದಿ ಕಿರಣ್ ಕುಮಾರ್ ಅವರ ವರ್ತನೆ ನೋಡಿ ನೋಡಿ ಸಾರ್ವಜನಿಕರು ಹಾಗೂ ರೋಗಿಗಳು ಅರೆ ಹುಚ್ಚನಂತೆ ಮಾತನಾಡುತ್ತಿದ್ದಾರೆ ಎಂದು ಕೂಡಲೇ ಮೇಲಾಧಿಕಾರಿಗಳು ಈತನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಮತ್ತು ಡಿಎಸ್ಎಸ್ ಸಂಘಟನೆಗಳು ಆಗ್ರಿಸಿದರು. ಕೋಟ್ -1  ಕಿರಣ್ ಕುಮಾರ್ ರವರು ಅನಾರೋಗ್ಯ ರೋಗಿಗಳ ಮೇಲೆ ಗದರಿ...

ವಯೋ ನಿವೃತ್ತಿ ಪಡೆದ ಮುಖ್ಯ ಶಿಕ್ಷಕಿ ಗಿರಿಜಾ ಬಾಯಿ ಮಾಲಿಮಠ ಅವರಿಗೆ ಸನ್ಮಾನ ಸಮಾರಂಭ

ಇಮೇಜ್
  ಮಸ್ಕಿ : ತಾಲೂಕಿನ ಮೆದಿಕಿನಾಳ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ (ಕರೇಗುಡ್ಡ) ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಗಿರಿಜಾ ಬಾಯಿ ಮಾಲಿಮಠ ಅವರು ತಮ್ಮ 31 ವರ್ಷದ ಶಿಕ್ಷಕ ವೃತ್ತಿ ಜೀವನಕ್ಕೆ ನಿವೃತ್ತಿ ಹೊಂದಿದ್ದು ಸನ್ಮಾನಿಸಿ ಗೌರವಿಸಲಾಯಿತು. ಈಗಾಗಲೇ ಬೇರೆಡೆ 24 ವರ್ಷಗಳ ಕಾಲ ಸುದೀರ್ಘ ಶಿಕ್ಷಕಿ ವೃತ್ತಿ ನಿರ್ವಹಿಸಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕರೇಗುಡ್ಡ ದಲ್ಲಿ 7 ವರ್ಷಗಳ ಕಾಲ ತಮ್ಮ ಶಿಕ್ಷಕ ವೃತ್ತಿಯನ್ನು ತುಂಬಾ ಅಚ್ಚುಕಟ್ಟಾಗಿ ಜವಾಬ್ದಾರಿಯಿಂದ ನಿರ್ವಹಿಸಿ ಗ್ರಾಮದ ಜನತೆಯ ಮೆಚ್ಚುಗೆಗೆ ಪಾತ್ರರಾದ ಮುಖ್ಯ ಗುರುಗಳಾದ ಶ್ರೀಮತಿ ಗಿರಿಜಾ ಬಾಯಿ ಮಾಲಿಮಠ ಅವರನ್ನು ಅಭಿಮಾನದಿಂದ ಸಹಾಯಕ ಶಿಕ್ಷಕರು ಹಾಗೂ ಅಥಿತಿ ಶಿಕ್ಷಕರು ಮತ್ತು ಎಸ್ ಡಿ ಎಂ ಸಿ ಸಮಿತಿ ಹಾಗೆಯೇ ಗ್ರಾಮದ ಯುವ ಮುಖಂಡ ಮೌನೇಶ್ ಮೆದಿಕಿನಾಳ ಇವರು ಮೇಡಂ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಸನ್ಮಾನಿಸಿ ಅಭಿನಂದಿಸಿದ್ದಾರೆ. ಹಾಗೂ 7 ವರ್ಷದ ವೃತ್ತಿ ಜೀವನ ಒಂದೆಡೆ ಎಂಬಂತೆ ಒಂದು ಫೋಟೋ ಫ್ರೇಮ್ ಅನ್ನು ಉಡುಗೊರೆಯಾಗಿ ಅತೀ ಪ್ರೀತಿ ಅಕ್ಕರೆಯಿಂದ ನೀಡಿದ್ದು ವಿಶೇಷವಾಗಿ ಕಂಡು ಬಂದಿದೆ. ಇದೇ ಸಂದರ್ಭದಲ್ಲಿ ವೆದಿಕೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷರಾದ ಮಲ್ಲಯ್ಯ,ಮುಖ್ಯ ಅಥಿತಿಗಳಾಗಿ ಮಂಗಳ ಮು.ಗು ಸರಕಾರಿ ಪ್ರೌಢ ಶಾಲೆ ಮೆದಿಕಿನಾಳ, ದೇವಪ್ಪ ಮು.ಗು ಸ. ಮಾ. ಹಿ. ಪ್ರಾ. ಶಾಲೆ ಮೆದಿಕಿನಾಳ, ಗುಂಡೂರಾವ್ ದೇಸಾಯಿ ಸಾಹಿತಿ,ಶಿವಪ್ಪ ರಾಥೋಡ್ ಸೇರಿದಂತೆ ಸಹ...

*🪔ನಿಧನ ವಾರ್ತೆ : ಪೂಜಾರಿ ಸಾಂತಪ್ಪರ ದುರುಗಮ್ಮ -ನಿಧನ 🪔*

ಇಮೇಜ್
ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ ನಗರ 14ನೇ ವಾರ್ಡಿನಲ್ಲಿ ಪೂಜಾರಿ ಸಾಂತಪ್ಪರ ದುರುಗಮ್ಮ ಇವರು ವಾಸವಿದ್ದು (80), ಇಂದು (ಆಗಸ್ಟ್ 30) ಬೆಳಿಗಿನ ಜಾವಾ 6.15ಗಂಟೆಗೆ ವಯೋಸಜ ಹೊಂದಿರುವ ಇವರು ಸುಮಾರು ದಿನಗಳಿಂದ ಅನಾರೋಗ್ಯ ದಿಂದಲೂ ಸಹ ಬಳಲುತ್ತಿದ್ದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ, ಮೃತರು ಇವರ ಕುಟುಂಬದಲ್ಲಿ ಒಬ್ಬ ಗಂಡು ಮಗ ಹಾಗೂ 2 ಜನ ಹೆಣ್ಣುಮಕ್ಕಳು ಇದ್ದು ಮೃತ ಶಾಂತಪ್ಪರ ದುರುಗಮ್ಮನಿಗೆ ಇದ್ದು ಹಾಗೂ ಹತ್ತಾರು ಮೊಮ್ಮಕ್ಕಳಿದ್ದು ತುಂಬು ಅಪಾರ ಕುಟುಂಬವನ್ನು , ಹೊಂದಿದವರಾಗಿದ್ದರು. *ಅಂತ್ಯಕ್ರಿಯೆ*-ಆಗಸ್ಟ್ 30 ಈ ದಿನ ಮದ್ಯಾಹ್ನ 1.30 ಗಂಟೆಗೆ , ಪಟ್ಟಣದ 16 ನೇ ವಾರ್ಡಿನ ರಾಜೀವ್ ಗಾಂಧಿ ನಗರ ಪಕ್ಕದಲ್ಲಿ ಬರುವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. *ಸಂತಾಪ*- ಮಕ್ಕಳು ಹಾಗೂ ಕುಟುಂಬದ ಅನೇಕ ಬಂಧುಗಳು ಹಾಗೂ ಅಪಾರ ಕುಟುಂಬ ಬಂಧು ಬಳಗದವರು ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ನಗರದ ಹಿರಿಯರು ಅಗಲಿಕೆಯಿಂದಾಗಿ , ಅವರ ಕುಟುಂಬದಲ್ಲಿ ದುಖಃ ಮಡುವುಗಟ್ಟಿದೆ ಸೂಚಕದ ಛಾಯೆ ಆವರಿಸಿದೆ. ಸಮಸ್ತ ಬಂಧುಗಳು , ದುಖಃತಪ್ತರಾಗಿದ್ದಾರೆ. ಮಾದಿಗ ಸಮುದಾಯದವರು ಸೇರಿದಂತೆ. ವಿವಿದ ಸಮುದಾಯದವರು. ಕೂಡ್ಲಿಗಿ ಅಂಬೇಡ್ಕರ ನಗರ ಸಮಸ್ತ ಗ್ರಾಮಸ್ಥರು. ಕ್ಷೇತ್ರದ ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು. ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರು ಸರ್ವ ಸದಸ್ಯರು , ...

ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಆದ್ಯತೆ ನೀಡಿ: ಶಾಸಕ ಕೆ ನೇಮಿರಾಜ್ ನಾಯ್ಕ್

ಇಮೇಜ್
  ಕೊಟ್ಟೂರು : ತಾಲೂಕಿನ ಹ್ಯಾಳ್ಯ ಗ್ರಾಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಕ್ಲಸ್ಟರ್ ಮಟ್ಟಡದ  ಪ್ರೌಢಶಾಲೆಯ ಕ್ರೀಡಾಕೂಟವನ್ನು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಕೆ  ನೇಮಿರಾಜ್ ನಾಯ್ಕ್  ಅವರು ಗುರುವಾರ ಕ್ರೀಡಾ ಜ್ಯೋತಿ ಬೆಳಗಿಸುವ ಮುಖಾಂತರ ಉದ್ಘಾಟನೆ ಮಾಡಲಾಯಿತು. ಶಾಸಕರು,ಹ್ಯಾಳ್ಯ ಗ್ರಾಮ ಪಂಚಾಯತಿ ಅಧ್ಯಕ್ಷೆ ಡಿ ಹಾಲಮ್ಮ ನಿಜೇಶ್ ಕುಮಾರ್ ಹಾಗೂ ಹ್ಯಾಳ್ಯ ಗ್ರಾಮದ ಪ್ರೌಢಶಾಲೆಯ ನೂತನ ಅಡಿಗೆ ಕೊಠಡಿಯನ್ನು  ರಿಬ್ಬನ್ ಕಟ್ ಮಾಡುವ ಮೂಲಕ  ಉದ್ಘಾಟಿಸಿದರು  ನಂತರ ಶಾಸಕರು ಮಾತನಾಡಿ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಅವಶ್ಯ’‘ಮಕ್ಕಳ ಆಸಕ್ತಿ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು. ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡಬೇಕು. ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳು ಉತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಮಿಂಚಲಿ’ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಂ. ಎಂ. ಜೆ.ಹರ್ಷವರ್ಧನ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ದೊಡ್ಡರಾಮಣ್ಣನವರು ಬೂದಿ ಶಿವಕುಮಾರ್,ಗ್ರಾಮ ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಊರಿನ ಮುಖಂಡರು ಕಾರ್ಯಕರ್ತರು ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಅಲೆಮಾರಿ ಬುಡಕಟ್ಟು ಜನಾಂಗಕ್ಕೆ 1% ಮೀಸಲಾತಿಗಾಗಿ ಬೃಹತ್ ಹೋರಾಟ

ಇಮೇಜ್
ಮಸ್ಕಿ : ಪಟ್ಟಣದ ಹಳೇ ಬಸ್ ನಿಲ್ದಾಣದ ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದ ಬಳಿ ಅಲೆಮಾರಿ ಜನಾಂಗದ ಬುಡಕಟ್ಟು ಜನತೆಯು ನೆರೆದು ವೇಷ ಭೂಷಣ ಧರಿಸಿ ತಮ್ಮ ಮೀಸಲಾತಿಯ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಸಂಘಟನೆ ರಾಯಚೂರು ಜಿಲ್ಲಾ ಸಮಿತಿ ವತಿಯಿಂದ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಉಲ್ಲೇಖ (2)ರನ್ವಯ ಆದರೆ ರಾಜ್ಯ ಸರಕಾರವು ವಿಶೇಷ ಕ್ಯಾಬಿನೆಟ್ ನಿರ್ಣಯದ ಮೂಲಕ ಮಾನ್ಯ ಮುಖ್ಯಮಂತ್ರಿಗಳು ಅಸ್ಪೃಶ್ಯ ಸಂಬಂಧಿಸಿದಂತ ಅಲೆಮಾರಿಗಳ ಜಾತಿಗಳಿಗೆ ನೀಡಿದ ಶೇ. 1% ಮೀಸಲಾತಿಯನ್ನು ಬಲಾಡ್ಯ ಸ್ಪೃಶ್ಯ ಸಮುದಾಯಗಳಾದ ಲಮಾಣಿ, ಭೋವಿ, ಕೊರಮ, ಕೊರಚ ಸಮುದಾಯಗಳೊಂದಿಗೆ ಸೇರಿಸಿ ಆಲೆಮಾರಿಗಳಿಗೆ ಮರಣ ಶಾಸನವಾಗಿ ರೂಪಿಸಿ ಸರ್ಕಾರ ಆದೇಶ ಹೊರಡಿಸಿದೆ. ಸಮುದಾಯಗಳೊಂದಿಗೆ ಸೇರಿಸಿ ಅಲೆಮಾರಿಗಳಿಗೆ ಮರಣ ಶಾಸನವಾಗಿ ರೂಪಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಶಾಸನದಿಂದ ಮೂಲ 59 ಅಸ್ಪಶ್ಯ ಅಲೆಮಾರಿ ಸಮುದಾಯಗಳು ಧ್ವನಿ ಇಲ್ಲದ ಯಾವುದೇ ರಾಜಕೀಯ ಪ್ರಾತಿನಿಧ್ಯ ಉನ್ನತ ಮಟ್ಟದ ಉದ್ಯೋಗ ಸಾಮಾಜಿಕವಾಗಿ ಅತ್ಯಂತ ಕೆಳಸ್ತರ ಇರುವ 49+10=59 ಅಸ್ಪೃಶ್ಯ ಸಮುದಾಯಗಳನ್ನು ನಿಖರವಾಗಿ ಗುರುತಿಸಿ ಆಯೋಗದ ಮೂಲಕ ಸುಮಾರು 8 ತಿಂಗಳಗಳ ಕಾಲ ವರದಿ ತಯಾರಿಸಿ ಮಾನ್ಯ ನಿವೃತ್ತ ನ್ಯಾಯಮೂರ್ತಿ ಡಾ.ಹೆಚ್.ಎನ್.ನಾಗಮೋಹನ್‌ದಾಸ ಸರಕಾರಕ್ಕೆ ಸಲ್ಲಿಸಿದ್ದು ಕೇವಲ ಒಳಮೀಸಲಾತಿ ಜನಸಂಖ್ಯೆಗೆ ಅನುಗುಣವಾಗಿ ಅಲ್ಲದೇ ಸಾಮಾಜಿಕವಾಗ...

ಮಳೆ ಬಾರದಕ್ಕೂ, ಹೆಳವರು ಬಂದದ್ದಕ್ಕೂ ಎತ್ತಣಿಂದೆತ್ತಾ ಸಂಬಂಧವಯ್ಯಾ?

ಇಮೇಜ್
  ಕೊಟ್ಟೂರು:- ತಾಲ್ಲೂಕಿನ ಕೆ. ಅಯ್ಯನಹಳ್ಳಿ ಗ್ರಾಮದ ಆಂಜನೇಯ ದೇವಸ್ಥಾನದ ಬಯಲು ಪ್ರದೇಶದಲ್ಲಿ ಬಿಡಾರ ಹೂಡಿದ್ದ ಹೆಳವರನ್ನು ಗ್ರಾಮಸ್ಥರು ಊರಿನಿಂದ ಹೊರ ಹಾಕಿದ ಅಪರೂಪದ, ಅಮಾನವೀಯ ಘಟನೆ ಇದೀಗ ಬೆಳಕಿಗೆ ಬಂದಿದೆ.  ಪ್ರತಿ ವರ್ಷದಂತೆ ತಮ್ಮ ವೃತ್ತಿಗೆ ಅನುಕೂಲವಾಗುವ ಸ್ಥಳದಲ್ಲಿ ಹೆಳವರು ಬಿಡಾರ ಹಾಕುವುದು ಸರ್ವೇಸಾಮಾನ್ಯವಾಗಿದೆ. ಆದರೆ ಇವರ ಆಗಮನದಿಂದ ಊರಿಗೆ ಮಳೆ ಹೋಯಿತೆಂಬ ಕೆಲವು ಹಿರಿಯರು ಹಾಗೂ ಕಿಡಿಗೇಡಿಗಳ ಊಹಾಪೋಹ ಮಾತಿಗೆ ಕಿವಿಗೊಟ್ಟು ಊರನ್ನು ಬಿಡಿಸಿದ್ದಾರೆ. ಜನರ ನಂಬಿಕೆಗೆ ಬೆಲೆಕೊಟ್ಟು, ಬೇಸರದಿಂದ ಅವರೂ ಹೊರ ನಡೆದು ಈಗ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ನೆಲೆಸಿದ್ದಾರೆಂಬ ಮಾಹಿತಿ ತಿಳಿದು ಬಂದಿದೆ.  ಹೆಳವ ಇದೊಂದು ಅಲೆಮಾರಿ ಜನಾಂಗವಾಗಿದ್ದು, ಅಂದರೆ ಅವರು ಮನೆಮನೆಗೆ ಹೋಗಿ ಜನರ ವಂಶಾವಳಿಗಳನ್ನು ದಾಖಲಿಸುತ್ತಾರೆ ಮತ್ತು ಹೇಳುತ್ತಾರೆ. ಇದರಿಂದಾಗಿ ಬರುವ ನಗದು, ದವಸ ಧಾನ್ಯಗಳು, ಹಳೆಯ ಕಂಚು, ತಾಮ್ರದ ಪಾತ್ರೆಗಳು, ದನ ಕರುಗಳು, ಕುರಿಮರಿಗಳನ್ನು ದಾನವಾಗಿ ಪಡೆದು ಬದುಕು ಸಾಗಿಸುತ್ತಾರೆ. ಈ ಆಧುನಿಕ ಕಾಲದಲ್ಲೂ ಜನರು ಮೌಢ್ಯದಿಂದ ಹೊರ ಬರಲಾಗಿಲ್ಲ ಎಂಬುದೇ ನಾಚಿಕೆಗೇಡಿನ ವಿಷಯವಾಗಿದೆ. ಇನ್ನಾದರೂ ಪ್ರಜ್ಞಾವಂತ ನಾಗರೀಕರು ಹಾಗೂ ಯುವಜನತೆ ಎಚ್ಚೆತ್ತುಕೊಂಡು ಜನರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕಿದೆ.

*ಅಂತೂ ಇಂತೂ ಬೆಳಕು ಬಂತು...*💡

ಇಮೇಜ್
ವರದಿ ಫಲಶೃತಿ  ಕೊಟ್ಟೂರು:- ತಾಲ್ಲೂಕಿನ ಹರಾಳು ಗ್ರಾಮದಲ್ಲಿ ಸರಕಾರಿ ಶಾಲೆ ಹತ್ತಿರ ಮಾನ್ಯ ಶಾಸಕರ ಅನುದಾನದಲ್ಲಿ ಕಳೆದ 2024 ರ ಮಾರ್ಚ್ ತಿಂಗಳಿನಲ್ಲಿ ನಿರ್ಮಿಸಲಾಗಿದ್ದ ಖಾಲಿ ಹೈ ಮಾಸ್ ಲೈಟ್ ಕಂಬಗಳಲ್ಲಿ ದೀಪ ಜೋಡಿಸಿ ಹಾಗೇ ಬಿಟ್ಟಿದ್ದರು. ಪತ್ರಿಕೆಗಳ ವರದಿಯಿಂದಾಗಿ ಎಚ್ಚೆತ್ತುಕೊಂಡ ಕೆ. ಅಯ್ಯನಹಳ್ಳಿ ಗ್ರಾಮ ಪಂಚಾಯಿತಿ ಸಿಬ್ಬಂದಿಯವರು ಇಂದು ವಿದ್ಯುತ್ ಸಂಪರ್ಕ ನೀಡುವುದರ ಮೂಲಕ ಲೋಕಾರ್ಪಣೆಗೊಳಿಸಿದರು. ಈ ಕಾರ್ಯವನ್ನು ಗ್ರಾಮಸ್ಥರು ಸಂಭ್ರಮದಿಂದ ಸ್ವಾಗತಿಸಿದರು. ಶಾಸಕರು, ಅಧಿಕಾರಿಗಳು, ಪ್ರತಿನಿಧಿಗಳು ಹಾಗೂ ಪತ್ರಿಕಾ ವರದಿಗಾರರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ‌.

"ಕೊಟ್ಟೂರಿನಲ್ಲಿ ಗಣೇಶ ಚತುರ್ಥಿ ಅದ್ದೂರಿ ಮೆರವಣಿಗೆಯಿಂದ ವಿಸರ್ಜನೆ"

ಇಮೇಜ್
ಕೊಟ್ಟೂರು : ಭಾದ್ರಪದ  ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಗಣೇಶ ಚತುರ್ಥಿ ಹಬ್ಬವನ್ನು ಆಚರಿಸುವ ಸಂಪ್ರದಾಯವಿದೆ. 2025ರ ಆಗಸ್ಟ್‌ 27ರಂದು ಬುಧವಾರ ಗಣೇಶ ಚತುರ್ಥಿ ಹಬ್ಬವನ್ನು ಕೊಟ್ಟೂರಿನ ಪ್ರಮುಖ ರಸ್ತೆ ಹಾಗೂ  ಬೀದಿಗಳಲ್ಲಿ ಮೆರವಣಿಗೆ ಮೂಲಕ  ಸಡಗರದಿಂದ  ಆಚರಿಸಲಾಯಿತು. ಈ ದಿನದಂದು ಕೊಟ್ಟೂರಿನ ಪ್ರಮುಖ ಕಚೇರಿಗಳಲ್ಲಿ ಒಂದಾದ ಜೆಸ್ಕಾಂ ಸಿಬ್ಬಂದಿಯವರು ಡೋಳು ಕುಣಿತದೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮೂಲಕ ಕರೆತಂದು ತಮ್ಮ ಕಚೇರಿಯಲ್ಲಿ ವಿಸರ್ಜನೆ ಮಾಡಲಾಯಿತು.  ಈ ಸಡಗರದ ಮೆರವಣಿಗೆಯನ್ನು ರಸ್ತೆ ಬದಿಯಲ್ಲಿ ನಿಂತು ಜನರು ಕಣ್ಣು ತುಂಬಿಕೊಂಡ ಸನ್ನಿವೇಶ ಕಂಡು ಬಂದಿತ್ತು. ತಮ್ಮ  ಹಿಂದೂ ಸಂಪ್ರದಾಯಿಕವಾಗಿ ನಡೆದು ಬಂದ  ಗಣೇಶ ಹಬ್ಬದ ವಿವರಣೆ : ಹಿಂದೂ ಧರ್ಮದಲ್ಲಿ ಜನರು ಅತಿ ಹೆಚ್ಚು ಪೂಜಿಸಲಾಗುವ ದೇವರು ಮತ್ತು ದೇವತೆಗಳಲ್ಲಿ ಗಣೇಶನೂ ಒಬ್ಬನಾಗಿದ್ದಾನೆ.  ಗಣೇಶನನ್ನು ಪ್ರತಿನಿತ್ಯವೂ ಪೂಜಿಸಲಾಗುತ್ತದೆಯಾದರೂ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಗಣೇಶನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಯಾಕೆಂದರೆ, ಈ ದಿನವು ಗಣೇಶ ಚತುರ್ಥಿ ಹಬ್ಬದ ದಿನವಾಗಿದೆ. ಈ ದಿನದಂದು ಗಣೇಶನು ಜನಿಸಿದನು ಎಂಬುದು ಧಾರ್ಮಿಕ ನಂಬಿಕೆಯಾಗಿದೆ.ಆಚರಿಸುವುದರಿಂದ ನಾವು ಸಂತೋಷವನ್ನು ಪಡೆದುಕೊಳ್ಳಬಹುದಾಗಿದೆ.ಈ ಶುಭ ದಿನದಂದು ಮನೆಗಳಲ್ಲಿ, ಕಛೇರಿಗಳಲ್ಲಿ, ದೇವಸ್ಥಾನಗಳಲ್ಲಿ ಹಾಗೂ ಪೆಂಡಲ್‌ಗಳಲ...

ಖಚಿತ ಮಾಹಿತಿ ಮೇರೆಗೆ ಮಾರಲದಿನ್ನಿ ತಾಂಡಾದಲ್ಲಿ ದಾಳಿ 10 ಲೀಟರ್ ಬೆಲ್ಲದ ಕೊಳೆ ಹಾಗೂ 2 ಲೀಟರ್ ಕಳ್ಳಭಟ್ಟಿ ಸರಾಯಿ ವಶ

ಇಮೇಜ್
  ಮಸ್ಕಿ : ತಾಲೂಕಿನ ಮಾರಲದಿನ್ನಿ ತಾಂಡಾದ ಜ್ಯೋತಿ ಗಂಡ ಕುಮಾರ ಎಂಬಾಕೆಯು ತನ್ನ ವಾಸದ ಮನೆಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿಯನ್ನು ಸಂಗ್ರಹಿಸಿ ಇಟ್ಟಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಕಳ್ಳಭಟ್ಟಿ ಸರಾಯಿ ಮತ್ತು ಬೆಲ್ಲದ ಕೊಳೆಯನ್ನು ಅಬಕಾರಿ ಇಲಾಖೆ ಲಿಂಗಸ್ಗೂರು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮಾನ್ಯ ಅಬಕಾರಿ ಅಪರ ಆಯುಕ್ತರು (ಜಾರಿ ಮತ್ತು ಅಪರಾಧ) ಕೇಂದ್ರ ಸ್ಥಾನ ಬೆಳಗಾವಿ ರವರ ಆದೇಶದ ಪ್ರಕಾರ,  ಮಾನ್ಯ ಅಬಕಾರಿ ಜಂಟಿ ಆಯುಕ್ತರು ಕಲ್ಬುರ್ಗಿ ವಿಭಾಗ ರವರ, ಮಾನ್ಯ ಅಬಕಾರಿ ಉಪ ಆಯುಕ್ತರು ರಾಯಚೂರು ಜಿಲ್ಲೆ ರವರ ಹಾಗೂ ಮಾನ್ಯ ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ರಾಯಚೂರು ರವರ ಮಾರ್ಗದರ್ಶನದಲ್ಲಿ,  ಆಗಸ್ಟ್ 26 ಮಂಗಳವಾರ ರಂದು ಮೂಡಲದಿನ್ನಿ ಕ್ರಾಸ್ ನಲ್ಲಿ ಕಚೇರಿಯ ಸಿಬ್ಬಂದಿ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಯೊಂದಿಗೆ ಕೂಡಿಕೊಂಡು ಗಸ್ತು ಮಾಡುತ್ತಿರುವ ಸಮಯದಲ್ಲಿ ಮಸ್ಕಿ ತಾಲೂಕಿನ ಮಾರಲದಿನ್ನಿ ತಾಂಡಾದ ಜ್ಯೋತಿ ಗಂಡ ಕುಮಾರ ಎಂಬಾಕೆಯು ತನ್ನ ವಾಸದ ಮನೆಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿಯನ್ನು ಸಂಗ್ರಹಿಸಿ ಇಟ್ಟಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚರನ್ನು ನೇಮಕ ಮಾಡಿಕೊಂಡು ಜ್ಯೋತಿ ಗಂಡ ಕುಮಾರ ಈಕೆಯ ವಾಸದ ಮನೆಯ ಮೇಲೆ ಅಬಕಾರಿ ದಾಳಿ ಮಾಡಿದಾಗ 02 ಲೀಟರ್ ಕಳ್ಳಭಟ್ಟಿ ಸರಾಯಿ ಹಾಗೂ 10 ಲೀಟರ್ ಬೆಲ್ಲದ ಕೊಳೆ ಪತ್ತೆಯಾಗಿದ್ದು, ಸದರಿ ಆರೋಪಿತಳು ದಾಳಿ ಸಮಯದಲ್ಲ...

ದೇವದಾಸಿ ಮಹಿಳೆರಿಗೆ ಆರೋಗ್ಯ ತಪಾಸಣಾ ಶಿಬಿರ

ಇಮೇಜ್
  ಕೊಟ್ಟೂರು :ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ದೇವದಾಸಿ ಪುನರ್ವಸತಿ ಯೋಜನೆಯ ವಿಜಯನಗರ ಜಿಲ್ಲೆ ಮಾಜಿ ದೇವದಾಸಿ ಮಹಿಳೆಯರಿಗೆ ತಾಲೂಕು ಮಟ್ಟದ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಲಾಯಿತು.  ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾಕ್ಟರ್ ಸುಲೋಚನಾ ಮಾಜಿ ದೇವದಾಸಿ ಮಹಿಳೆಯರು ಆರ್ಥಿಕವಾಗಿ ಹಿಂದುಳಿದವರಾಗಿದ್ದು ಅವರ ಆರೋಗ್ಯದ ಕಾಳಜಿಯಿಂದ ಸರ್ಕಾರ ಈ ಒಂದು ಉಚಿತ ಶಿಬಿರವನ್ನು ಹಮ್ಮಿಕೊಂಡಿದ್ದು ಇದೊಂದು ಅತ್ಯುತ್ತಮ ಕಾರ್ಯಕ್ರಮ ಎಂದು ಹೇಳಿದರು. ಈ ಸಂದರ್ಭದಲ್ಲಿ ದೇವದಾಸಿ ಪುನರ್ವಸತಿ ಯೋಜನೆಯ ತಾಲೂಕು ಅನುಷ್ಠಾನಾಧಿಕಾರಿಗಳು ಹನುಮಂತ ಮಾತನಾಡಿ ನಿಗಮದಿಂದ ನೀಡಲ್ಪಡುವ ಮಾಶಾಸನ ಮತ್ತು ಇತರೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು ಹಾಗೆ ಮುಂದುವರೆದು ಸಂದ ಮೂರನೇ ಸಮೀಕ್ಷೆಯ ಕುರಿತು ಮಾಹಿತಿಯನ್ನು ನೀಡಿ ಕ್ಷಮಿಸಿ ನೈಜ ದೇವದಾಸಿ ಮಹಿಳೆಯರು ಭಾಗವಹಿಸಬೇಕೆಂದು ತಿಳಿಸಿದರು.  ಈ ಸಂದರ್ಭದಲ್ಲಿ ಡಾಕ್ಟರ್ ಸುಲೋಚನಾ, ಐಸಿಟಿಸಿ ಕೌನ್ಸೆಲರ್ (ಅouಟಿseಟoಡಿ)ಮಹಾಂತೇಶ್ ಜಿ ಎಮ್, ಲ್ಯಾಬ್ ಟೆಕ್ನಿಷಿಯನ್ ಬಸವರಾಜ, ಎನ್ ಸಿಡಿ ಕೌನ್ಸೆಲರ್ (ಅouಟಿseಟoಡಿ)ಚೆನ್ನಯ್ಯ, ದೇವದಾಸಿ ಕ್ಷೇಮಾಭಿವೃದ್ಧಿ ಒಕ್ಕೂಟ ರಾಜ್ಯ ಕಾರ್ಯದರ್ಶಿ ರೇಣುಕಮ್ಮ, ತಾಲೂಕ್ ಅನುಷ್ಠಾನಾಧಿಕ...

ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ

ಇಮೇಜ್
  ಮಸ್ಕಿ : ತಾಲೂಕಿನ ಡಿ. ದೇವರಾಜು ಅರಸು ಮೆಟ್ರಿಕ್ ಪೂರ್ವ ಬಿಸಿಎಂ ವಸತಿ ನಿಲಯ ಮೆದಿಕಿನಾಳದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೆದಿಕಿನಾಳ ಇವರ ನೇತೃತ್ವದಲ್ಲಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನು ಮಾಡಲಾಯಿತು. ನಂತರ ಮಾತನಾಡಿದ ವಿದ್ಯಾರ್ಥಿಗಳಿಗೆ ಮಲೇರಿಯಾ, ಡೆಂಗ್ಯೂ ಲೆಪ್ರೋಸಿ, ಕ್ಷಯ ರೋಗ ಹಾಗೂ ಎಲ್ಲಾ ರಾಷ್ಟ್ರೀಯ ಕಾರ್ಯಕ್ರಮಗಳ ಮಾಹಿತಿ ನೀಡಿ ಡೆಂಗ್ಯೂ ಸೊಳ್ಳೆ ಪರಿಸರ ಸ್ವಚ್ಛತೆ ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಸೊಳ್ಳೆ ಕಡಿತದಿಂದ ರಕ್ಷಣಾ ವಿಧಾನ ಅನುಸರಣೆ ಮಳೆಗಾಲ ಆರಂಭವಾಗಿರುವುದರಿಂದ ಹಾಸ್ಟೆಲ್ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ ಸೊಳ್ಳೆ ಉತ್ಪತ್ತಿ ತಾಣವನ್ನು ನಿರ್ಮೂಲನೆ ಮಾಡಿ ಎಂದು ಡಾಕ್ಟರ್ ಮಹೇಂದ್ರ ಗೌಡ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಉದಯ್ ಕುಮಾರ ನಿಲಯಪಾಲಕರು ಬಿಸಿಎಂ ಹಾಸ್ಟೆಲ್ ಮೆದಿಕಿನಾಳ,ಬಸವರಾಜ ಅರೋಗ್ಯ ನಿರೀಕ್ಷಣಾ ಅಧಿಕಾರಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ವಾಲಿಬಾಲ್ : ತುಂಗ ಭದ್ರಾ ಪದವಿ ಪೂರ್ವ ಕಾಲೇಜು ಜಿಲ್ಲಾಮಟ್ಟಕ್ಕೆ ಆಯ್ಕೆ

ಇಮೇಜ್
  ಮಸ್ಕಿ : ಪಟ್ಟಣದ ಕೇಂದ್ರ ಶಾಲೆ ಆವರಣದಲ್ಲಿ ರಾಯಚೂರು ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಮಸ್ಕಿ ತಾಲೂಕು ಖಾಸಗಿ ಕಾಲೇಜುಗಳ ಪ್ರಾಚಾರ್ಯರ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ತುಂಗಭದ್ರಾ ಪದವಿ ಪೂರ್ವ ಕಾಲೇಜು ಮುದ್ದಾಪುರ ಕ್ರಾಸ್ ನ ವಿದ್ಯಾರ್ಥಿನಿಯರು ವಾಲಿಬಾಲ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ ಎಂದು ಕಾಲೇಜು ಪ್ರಾಚಾರ್ಯ ಲಕ್ಷ್ಮಣ ಕರ್ಲಿ ಅವರು ಪತ್ರಿಕೆಗೆ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಮಹದೇವಪ್ಪಗೌಡ ಪೋಲೀಸ್ ಪಾಟೀಲ್,ಕಾರ್ಯದರ್ಶಿ ರಾಮಣ್ಣ ನಾಯಕ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.

ನಮ್ಮ ಪ್ರಜಾ ಸಾಕ್ಷಿ ಇ ಪತ್ರಿಕೆಯ ವರದಿಗೆ ಎಚ್ಚೆತ್ತ ಸರ್ವೇ ಇಲಾಖೆ ಅಧಿಕಾರಿಗಳು

ಇಮೇಜ್
  ನಮ್ಮ ಪ್ರಜಾ ಸಾಕ್ಷಿ ಇ ಪತ್ರಿಕೆಯ ವರದಿ ಫಲಶೃತಿ ಧ್ವಜಾರೋಹಣ ಮಾಡದೇ ಅಪಮಾನ ಮಾಡಿದ ಸರ್ವೇ ಇಲಾಖೆ ಅಧಿಕಾರಿಗೆ ಡಿಡಿ ಎಲ್ ಆರ್ ನೋಟಿಸ್ ವರದಿ : ಗ್ಯಾನಪ್ಪ ದೊಡ್ಡಮನಿ  ಮಸ್ಕಿ : ದೇಶದಾದ್ಯಂತ 79ನೇ ಸ್ವಾತಂತ್ರೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದರೆ ಪಟ್ಟಣದ ಕೆಲವು ಕಚೇರಿ ಹಾಗೂ ಸಹಕಾರಿ ಬ್ಯಾಂಕ್‌'ಗಳಲ್ಲಿ ಧ್ವಜಾರೋಹಣ ಮಾಡದೇ ನಿರ್ಲಕ್ಷ್ಯ ಮೆರೆದಿದ್ದು, ಸಾರ್ವಜನಿಕ ವಲಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪಟ್ಟಣದಲ್ಲಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಯಲ್ಲಿರಾಷ್ಟ್ರ ಧ್ವಜಾರೋಹಣ ಮಾಡದೇ ಅಗೌರವ ತೋರಿ ಅಪಮಾನ ಮಾಡಿದ್ದಾರೆ. ಯಾವುದೇ ರೀತಿ ಕಟ್ಟಡ ಜಾಗದ ವ್ಯವಸ್ಥೆ ಇಲ್ಲದೆ ಸ್ವಯಂ ಪ್ರೇರಿತರಾಗಿ ಆಟೋ ಮತ್ತು ಹಮಾಲರ ಸಂಘಗಳು ಹಬ್ಬದಂತೆ ಸ್ವಾತಂತ್ರೋತ್ಸವನ್ನು ಆಚರಣೆ ಮಾಡಿರುವುದಕ್ಕೆ ಸಾರ್ವಜನಿಕರು ಪ್ರಶಂಸೆ ವಕ್ತಪಡಿಸಿದ್ದಾರೆ. ಇವರೊಟ್ಟಿಗೆ ರೈತರಿಗೆ ಇರುವಂತಹ ಪರಿಕಲ್ಪನೆಗಳು ಈ ವಿದ್ಯಾವಂತರಿಗೆ ಇಲ್ಲದಿರುವುದು ಒಂದು ನೋವಿನ ಸಂಗತಿ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ಸಂಪರ್ಕಿಸಿದ್ದು ಯಾವುದೇ ರೀತಿಯ ಸ್ಪಂದನೆ ನೀಡಿರುವುದಿಲ್ಲ.ಬಹುತೇಕ ಸಾರ್ವಜನಿಕರ ಮೊಬೈಲ್ ಸಂಖ್ಯೆಯನ್ನು ಕಪ್ಪು ಪಟ್ಟಿಗೆ ಸೇರಿಸಿದ್ದಾರೆ 79 ನೇ ಸ್ವಾತಂತ್ರೋತ್ಸವದ ದಿನ ಇಂತಹ ದೇಶಕ್ಕೆ ಅಗೌರವ ತರುವ ರೀತಿಯಲ್ಲಿ ನಿರ್ಲಕ್ಷ್ಯ ವಹಿಸಿರುವ ಸಂಸ್ಥೆಗಳ ವಿರುದ್ಧ ಸಂಭಂದಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವರೇ ಕಾ...

ಲೋಕಾಅದಾಲತ್ ದುಡ್ಡು ಇಲ್ಲದೆಯೂ ನ್ಯಾಯ ಒದಗಿಸುವುದು : ನ್ಯಾಯಾಧೀಶೆ ರೂಪಾ ಶ್ರೀ ವಗ್ಗಾ

ಇಮೇಜ್
  ಮಸ್ಕಿ : ಪಟ್ಟಣದ ಬ್ರಮರಾಂಬ ಮಲ್ಲಿಕಾರ್ಜುನ ಭವನದಲ್ಲಿ ತಾಲೂಕ ನ್ಯಾಯವಾದಿಗಳ ಸಂಘ ಮಸ್ಕಿ ವತಿಯಿಂದ ನ್ಯಾಯಾಧೀಶರಾದ ಶ್ರೀಮತಿ ರೂಪಾ ಶ್ರೀ ವಗ್ಗಾ ರವರ ನೇತೃತ್ವದಲ್ಲಿ ಜರುಗಿದ ಕಾನೂನು ಅರಿವು - ನೆರವು ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ಜರುಗಿತು. ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಮೂಲಭೂತ ಕರ್ತವ್ಯ ಮತ್ತು ಶಾಶ್ವತ ಲೋಕ ಅದಾಲತ್ ಯಾವ ರೀತಿ ಕಾರ್ಯ ನಿರ್ವಹಿಸುತ್ತೆ..? ರಾಷ್ಟ್ರ ಗೀತೆ ಹಾಡುವಾಗ ಎಲ್ಲರೂ ಹೇಗೆ ಗೌರವ ಕೊಡುತ್ತೇವೆಯೋ ಹಾಗೆಯೇ ಕಾನೂನು ನಿಯಮವನ್ನು ಪಾಲಿಸಬೇಕು.  ರಿಟ್ ಅರ್ಜಿಯನ್ನು  ಸುಪ್ರಿಂಕೋರ್ಟ್ ಅಲ್ಲಿ ಆರ್ಟಿಕಲ್ 32 ಪ್ರಕಾರ ಮತ್ತು ಹೈ ಕೋರ್ಟ್ ಅಲ್ಲಿ ಆರ್ಟಿಕಲ್ 226 ಪ್ರಕಾರ ರಿಟ್ ಅರ್ಜಿ ಹಾಕಬಹುದು. ಎಲ್ಲಾ ನಾಯಾಲಯದಲ್ಲಿ ಯೂ ಒಂದೇ ರೀತಿಯ ನ್ಯಾಯ ಒದಗಿಸಲಾಗುವುದು. ನಾನೊಬ್ಬ ಬಡವ ಕಟ್ಟ ಕಡೆಯ ನಾಗರಿಕರಿಗೂ (ಡಿ.ಎಲ್.ಎಸ್.ಎ) ಪ್ರಕಾರ ಸರಕಾರಿ ವಕೀಲರನ್ನು ನೇಮಕ ಮಾಡಲಾಗಿರುತ್ತೇ ದುಡ್ಡು ಇಲ್ಲಾ ಅಂದ್ರು ನ್ಯಾಯ ಒದಗಿಸುವುದು ಇವರ ಕಾರ್ಯ. ಕೇಸು ದಾಖಲು ಮಾಡಲು ಅನಾರೋಗ್ಯ ಕಾರಣ ಇದ್ದಲ್ಲಿ ಕುಟುಂಬ ಸದಸ್ಯರ ಒಬ್ಬರ ಹೆಸರಲ್ಲಿ ಕೇಸ್ ಹಾಕಬಹುದು. ಒಬ್ಬ ಮಹಿಳೆ ಯಶಸ್ಸಿನ ಹಿಂದೆ ತಮ್ಮ ಕಾಲ ಮೇಲೆ ಮುಂದೆ ಬರಲು ಒಬ್ಬ ಪುರುಷನ ಸಹಾಯದಿಂದ ಅದು ತಂದೆಯ,ಗೆಳೆಯನ,ಗಂಡನ ರೂಪದಲ್ಲಿ ಆಗಿರಬಹುದು.ಲೋಕ ಅದಾಲತ್ ಅಲ್ಲಿ ಸಿವಿಲ್ ಕೇಸುಗಳಾದ ಗಂಡ ಹೆಂಡತಿ ಜಗಳ , ಆಸ್ತಿ ...

* ಗಣೇಶ ಹಬ್ಬ, ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪೊಲೀಸ್ ಇಲಾಖೆಯಿಂದ ಶಾಂತಿ ಸಭೆ*

ಇಮೇಜ್
"ಈದ್ ಮಿಲಾದ್, ಗಣೇಶ ಚತುರ್ಥಿ ಎರಡು ಹಬ್ಬಗಳು ಒಟ್ಟಿಗೆ ಇರುವುದರಿಂದ ಸೌಹಾರ್ದಯುತವಾಗಿ ಹಬ್ಬಗಳನ್ನು ಆಚರಿಸಬೇಕೆಂದು ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಹೇಳಿದರು." ಕೊಟ್ಟೂರು  : ಪಟ್ಟಣ ಪೊಲೀಸ್ ಠಾಣೆ ಆವರಣದಲ್ಲಿ ಪೊಲೀಸ್ ಇಲಾಖೆಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಹಿಂದೂ-ಮುಸ್ಲಿಂ ಮುಖಂಡರ ಶಾಂತಿ ಸಭೆಯಲ್ಲಿ ಮಾತನಾಡಿದ ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಅವರು, ಯಾರು ಕೂಡ ಪಿಓಪಿ ಗಣೇಶ್ ಮೂರ್ತಿ ಬಳಸದೇ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬೇಕು. ಯಾವುದೇ ಪ್ಲೆಕ್ಸ್, ಬಟಿಂಗ್ಸ್ ಹಾಕಬೇಕಾದರೆ ಅನುಮತಿ ಪಡೆಯಬೇಕು. ಒಂದು ಧರ್ಮಕ್ಕೆ ತೊಂದರೆ ಕೊಡದಂತೆ ಹಬ್ಬ ಆಚರಿಸಬೇಕು ಎಚ್ಚರಿಕೆ ನೀಡಿದರು. ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿ ಸೌಹಾರ್ದತೆಯೊಂದಿಗೆ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗದಂತೆ ಆಚರಿಸಿ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಿ,ಗಣೇಶ ಮೂರ್ತಿ ಪ್ರತಿಷ್ಠಾಪನೆ ಹತ್ತಿರ ಇಸ್ಪೇಟ್ ಆಡದಂತೆ ಎಚ್ಚರಿಕೆ ವಹಿಸಬೇಕೆಂದು ಕೊಟ್ಟೂರು ಸಿಪಿಐ ದುರುಗಪ್ಪ ಹೇಳಿದರು. ಪಿಎಸ್ಐ ಗೀತಾಂಜಲಿ  ಶಿಂಧೆ,ರೈತ ಸಂಘದ ರಾಜ್ಯ ಉಪಾಧ್ಯಕ್ಷ  ಎನ್ ಬರ್ಮಣ್ಣ, ಡಿಎಸ್ಎಸ್ ಜಿಲ್ಲಾ ಸಂಚಾಲಕ ಬುದ್ಧಿ ಮರಿಸ್ವಾಮಿ ಮಾತನಾಡ  ಸ್ವಾತಂತ್ರ್ಯ ಪೂರ್ವದಲ್ಲಿ ಹಬ್ಬದ ನಿಮಿತ್ತ ಜನರನ್ನು ಕುಡಿಸಲು ಗಣೇಶ ಚತುರ್ಥಿ ಹಬ್ಬವನ್ನು ಆಚರಣೆ ಮಾಡಲಾಯಿತು.ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ವನ್ನು  ...

*ಕೊಟ್ಟೂರುಗೆ ನೂತನ ಸಿಪಿಐ ದುರುಗಪ್ಪ*

ಇಮೇಜ್
ಕೊಟ್ಟೂರು: ಪಟ್ಟಣದ ಪೊಲೀಸ್ ಠಾಣೆಯ ನೂತನ ಸಿಪಿಐ  ದುರುಗಪ್ಪ ಕರ್ತವ್ಯಕ್ಕೆ ಬುಧವಾರ  ಹಾಜರಾದರು. ಈ ಹಿಂದೆ ಸಿಪಿಐ ಆಗಿ ವೆಂಕಟ ಸ್ವಾಮಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ನಂತರ ವಿಕಾಸ್ ಲಂಮಣಿ ಹಾಗೂ ನಾರಾಯಣ ಅವರು ಪ್ರಭಾರಿಯಾಗಿ ಕಾರ್ಯನಿರ್ವಹಿಸಿದ್ದರು. ಹಗರಿಬೊಮ್ಮನಹಳ್ಳಿ ತಾಲೂಕಿನ ಮರಬ್ಬಿಹಾಳು ಗ್ರಾಮದವರಾದ ಇವರು 2003 ನೇ ಬ್ಯಾಚ್  ಆಯ್ಕೆಯಾಗಿ, 2012 ರಲ್ಲಿ సిపిఐ ಮುಂಬಡ್ತಿ ಹೊಂದಿ, ಹೊಸಪೇಟೆ ಗ್ರಾಮೀಣ, ಹರಪ್ಪನಹಳ್ಳಿ,ಕಡೂರು,  ಸಿಂಧನೂರು,  ಠಾಣೆಗಳಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸಿ, ಕೊಟ್ಟೂರು ಠಾಣೆಗೆ ನೂತನ ಸಿಪಿಐ ಆಗಿ ಕರ್ತವ್ಯಕ್ಕೆ ಹಾಜರಾದರು.

ಕೊಟ್ಟೂರು ಕೆರೆಯನ್ನು ಪ್ರವಾಸಿ ತಾಣವಾಗಿಸುವೆ -ಶಾಸಕ ಕೆ.ನೇಮಿರಾಜ ನಾಯ್ಕ

ಇಮೇಜ್
  ಕೊಟ್ಟೂರು :೧೭ ಕೆರೆಗೆ ನೀರು ತುಂಬಿಸುವ ಯೋಜನೆ ಕೊಟ್ಟೂರು ಸೇರಿದಂತೆ ೬೦೦ ಕೋಟಿ ಅನುದಾನ ವನ್ನು ತರುವ ಯೋಜನೆಯನ್ನು ಹೊತ್ತು ಕೇಂದ್ರಕ್ಕೆ ತೆರಳಿ ಕುಮಾರಸ್ವಾಮಿಯವರು ಹಾಗು ಕೇಂದ್ರ ನೀರಾವರಿ ಮಂತ್ರಿ ಜೊತೆ ಮಾತುಕತೆ ನಡೆಸಿ ಬಂದಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡು ಸರ್ಕಾರ ಸಮ ಪಾಲು ಈ ಯೋಜನೆಗೆ ನೀಡಬೇಕು  ಆದರೆ ರಾಜ್ಯ ಸರ್ಕಾರ ಅನುದಾನದ ಕೊರತೆಯ ಕಾರಣ ಕೇಂದ್ರದ ಪಾಲಿನ ಜೊತೆಗೆ ಬೇರೆ ಯಾವುದಾದರು ಅನುದಾದಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸುವೆ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಕೆ.ನೇಮಿರಾಜ ನಾಯ್ಕ ಹೇಳಿದರು. ಪಟ್ಟಣದಲ್ಲಿ ನಡೆದ ಕರೆಗೆ ಬಾಗಿನ ಕಾರ್ಯಕ್ರಮ ಶಾಸಕ ಕೆ.ನೇಮಿರಾಜ ನಾಯ್ಕ, ಉಜ್ಜಯಿನಿ ಸದ್ಧರ್ಮ ಜಗದ್ಗರು ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಕೊಟ್ಟೂರು ದೇವರು, ಡೋಣೂರು ಚಾನುಕೋಟಿ ಮಠಾಧ್ಯಕ್ಷ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಸೇರಿ ಮಂಗಳವಾರ ಅರ್ಪಿಸಿ ಹೆಣ್ಣು ಮಕ್ಕಳಿಗೆ ಉಡಿ ತುಂಬಿದರು.  ಕೆರೆಗೆ ಬಾಗಿನ ಅರ್ಪಿಸಿ ಶಾಸಕ ಕೆ.ನೇಮಿರಾಜ ನಾಯ್ಕ ಮಾತನಾಡಿ ಕೊಟ್ಟೂರು ಕೆರೆಯನ್ನು ಪ್ರವಾಸ ತಾಣವನ್ನಾಗಿ ಮಾಡಲು ನಾವು ಹಿಂದಿನ ವರ್ಷ ಘೋಷಣೆಯನ್ನು ಮಾಡಿದ್ದೇವೆ.ಈ ವರ್ಷ ಅದನ್ನು ಪೂರ್ಣಗೊಳಿಸಲಿದ್ದೇವೆ ಅಲ್ಲದೆ ಕೊಟ್ಟೂರೇಶ್ವರ ದೇವಸ್ಥಾನವನ್ನು ಸೇರಿ ೯.೫೦ ಲಕ್ಷ ರೂಗಳಲ್ಲಿ ಪ್ರಾರಂಭವನ್ನು ಮಾಡಲಿದ್ದೇವೆ. ಅಲ್ಲದೆ ಕೆರೆಯ ಸುತ್ತಮುತ್ತಲಿನ ಜಂಗಲ್ ಕಟ್ಟಿಂಗ್ ಹಾಗು ರಾಜ್ಯ ಕಾಲುವೆ ಸ್ವಚ...

ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಿ : ಪಲ್ಲವಿ

ಇಮೇಜ್
  ಕೊಟ್ಟೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಜಾರಿ ಮಾಡಿರುವ ಯೋಜನೆಗಳನ್ನು ಪಾರದರ್ಶಕವಾಗಿ ತಲುಪಿಸಬೇಕೆಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಸೂಚಿಸಿದರು. ತಾಲ್ಲೂಕಿನ ಬತ್ತನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಕುಂದು ಕೊರತೆ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿ ಅಲೆಮಾರಿ ಜನಾಂಗ ಸ್ಥಿರವಾಗಿ ಒಂದು ಕಡೆ ನೆಲೆಸುವಂತೆ ನಿಗಮದಿಂದ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು ಸಮುದಾಯದವರು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢ ಜೀವನ ಕಟ್ಟಿಕೊಳ್ಳಲು ಮುಂದಾಗಬೇಕೆಂದರು.  ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಪಾಲಕರು ಆದ್ಯತೆ ನೀಡಬೇಕು ಹಾಗೂ ಸ್ವಯಂ ಉದ್ಯೋಗ ಮುಂತಾದ ಕೆಲಸಗಳಲ್ಲಿ ನಿರತರಾಗಿ ಜೀವನದಲ್ಲಿ ಭದ್ರತೆ ಕಂಡುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು. ಸಮುದಾಯಕ್ಕೆ ಮೀಸಲಾದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಮೂಲ ಸೌಕರ್ಯಗಳನ್ನು ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳು ಸಹ ಕಾರ್ಯನ್ಮೋಖರಾಗಬೇಕು ಎಂದರು. ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಅನ್ನದಾನೇಶ ಬಿ.ಪತ್ತಾರ್, ಸಮಾಜ ಕಲ್ಯಾಣ ಇಲಾಖಾಧಿಕಾರಿ ಜಗದೀಶ್ ದಿಗಡೂರು ಹಾಗೂ ವಿವಿಧ ಇಲಾಖಾಧಿಕಾರಿಗಳು, ಅಖಿಲ ಕರ್ನಾಟಕ ಕುಳವ ಮಹಾಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಕುಮಾರ್ ಏಕಲವ್ಯ,ಹಿರಿಯ ಮುಖಂಡರು ಕೆ ಹಾ...

*ಕೂಡ್ಲಿಗಿಯ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಪೊಲೀಸ್ ಪಥ ಸಂಚಲನ*

ಇಮೇಜ್
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಹಾಗೂ ಈದ್ ಮಿಲಾಹಿದ್ ಕುರಿತು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಇಲಾಖೆಯ ಡಿವೈಎಸ್ಪಿ ಯಾದ ಮಲ್ಲೇಶ್ ದೊಡ್ಮನಿ ಇವರ ನೇತೃತ್ವದಲ್ಲಿ ನಡೆದ ಪೊಲೀಸ್ ಪಥಸಂಚಲನ ಮಾಡುವುದರೊಂದಿಗೆ ಸಾರ್ವಜನಿಕರಲ್ಲಿ ಯಾವುದೇ ಭಯ ಭೀತಿ ಇಲ್ಲದೆ ಧಾರ್ಮಿಕ ಹಬ್ಬಗಳನ್ನು ಉತ್ಸಾಹದಿಂದ ಆಚರಣೆಗಳನ್ನು ಮಾಡಿ ನಿಮ್ಮ ಜೊತೆ ಪೊಲೀಸ್ ಇಲಾಖೆ ಯಾವಾಗಲೂ ರಕ್ಷಣೆಯಲ್ಲಿ ಇರುತ್ತದೆ,ಎಂಬ ಸಂದೇಶದೊಂದಿಗೆ ಕೂಡ್ಲಿಗಿ ಪಟ್ಟಣದ ಅನೇಕ ವಾರ್ಡ್ ಗಳ ಮೂಲಕ ಮಾರ್ಚ್ ರೂಟ್ ಮಾಡಲಾಯಿತು  ಹಾಗೆ ಈ ಪಥಸಂಚಲನದ ಸಂದೇಶ ಯಾವುದೇ ಸಮುದಾಯಗಳು ಹಬ್ಬ ಆಚರಣೆಗಳು ಮಾಡುವಾಗ ಯಾವುದೇ ತರಹದ ಕೋಮು ಗಲಭೆಯ ಗದ್ದಲ ಗಲಾಟೆಗಳಿಗೆ ಆಸ್ಪದ ವಿಲ್ಲ, ಹಾಗೆ ಯಾವುದೇ ಕಿಡಿಗೇಡಿಗಳು ಧಾರ್ಮಿಕ ಹಬ್ಬಗಳಲ್ಲಿ ಅಹಿತಕರ ಘಟನೆಗಳು ನಡೆಯಬಾರದು ಎಂಬ ಉದ್ದೇಶದಿಂದ ಪೊಲೀಸ್ ರಕ್ಷಣೆ ಸೂಕ್ತವಾದ ಬಂದೋಬಸ್ತಿನೊಂದಿಗೆ ನೀಡುವ ಸಂದೇಶವನ್ನು ಈ ಸಮಯದಲ್ಲಿ ಸಾರ್ವಜನಿಕರಲ್ಲಿ ಯಾವುದೇ ಭಯವಿಲ್ಲದೆ ಹಬ್ಬ ಆಚರಣೆ ಮಾಡಲು ಈ ಮೂಲಕ ಪಥ ಸಂಚಲನ ಮಾಡಿದರು  ಈ ಸಂದರ್ಭದಲ್ಲಿ ಸಿ.ಪಿ.ಐ ಪ್ರಹ್ಲಾದ ಆರ್ ಚೆನ್ನಗಿರಿ, ಕೂಡ್ಲಿಗಿ ಪಿಎಸ್ಐ ಸಿ ಪ್ರಕಾಶ್, ಕೊಟ್ಟೂರು ಪಿಎಸ್ಐ ಗೀತಾಂಜಲಿ ಸಿಂಧೆ, ಗುಡೆಕೋಟೆ ಪಿಎಸ್ಐ ಸುಬ್ರಹ್ಮಣ್ಯ, ಹಾಗೆ ಕೆ ಎಸ್ ಆರ್ ಪಿ ಮೂರು ತುಕಡಿಗಳ ದಂಡುಗಳ ಜೊತೆಗೆ ಕೂಡ್ಲಿಗಿ,ಕೊಟ್ಟೂರು, ಗುಡೆಕೋಟೆ, ಠಾಣೆಗಳ ಪೊಲೀಸ್ ಸಿಬ್ಬ...

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*

ಇಮೇಜ್
ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ ನಗರ 14ನೇ ವಾರ್ಡಿನಲ್ಲಿ ತಳವಾರ ದುರುಗಪ್ಪ ಇವರು ವಾಸವಿದ್ದು (60), ಇಂದು (ಆಗಸ್ಟ್ 19) ಬೆಳಿಗಿನ ಜಾವಾ 5.40ಗಂಟೆಗೆ ಅನಾರೋಗ್ಯ ನಿಮಿತ ಹೊಸಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರು ಕೆಲವೇ ದಿನಗಳಲ್ಲಿ ಅನಾರೋಗ್ಯ ದಿಂದ ಬಳಲುತ್ತಿದ್ದು ಚಿಕಿಸ್ಥೆ ಫಲಕರಿಯಾಗದೆ ನಿಧನ ಹೊಂದಿದ್ದಾರೆ, ಮೃತರು ಇವರ ಕುಟುಂಬದಲ್ಲಿ 3 ಜನ ಗಂಡು ಹಾಗೂ 3 ಹೆಣ್ಣುಮಕ್ಕಳು ಇದ್ದು ಮೃತ ತಳವಾರ ದುರುಗಪ್ಪನಿಗೆ ಹಾಗೂ ಮೊಮ್ಮಕ್ಕಳಿದ್ದು ತುಂಬು ಕುಟುಂಬವನ್ನು , ಹೊಂದಿದವರಾಗಿದ್ದರು. *ಅಂತ್ಯಕ್ರಿಯೆ*-ಆಗಸ್ಟ್ 19 ರಂದು ಮದ್ಯಾಹ್ನ 1.30 ಗಂಟೆಗೆ , ಪಟ್ಟಣದ 16 ನೇ ವಾರ್ಡಿನ ರಾಜೀವ್ ಗಾಂಧಿ ನಗರ ಪಕ್ಕದಲ್ಲಿ ಬರುವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. *ಸಂತಾಪ*- ತಂಗಿಯರು ತಮ್ಮ ಹಾಗೂ ಅಣ್ಣಂದಿರು ಹಾಗೂ ಅಪಾರ ಕುಟುಂಬ ಬಂಧು ಬಳಗದವರು ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ನಗರದ ಹಿರಿಯರು ಅಗಲಿಕೆಯಿಂದಾಗಿ , ಅವರ ಕುಟುಂಬದಲ್ಲಿ ದುಖಃ ಮಡುವುಗಟ್ಟಿದೆ ಸೂಚಕದ ಛಾಯೆ ಆವರಿಸಿದೆ. ಸಮಸ್ತ ಬಂಧುಗಳು , ದುಖಃತಪ್ತರಾಗಿದ್ದಾರೆ. ಮಾದಿಗ ಸಮುದಾಯದವರು ಸೇರಿದಂತೆ. ವಿವಿದ ಸಮುದಾಯದವರು. ಕೂಡ್ಲಿಗಿ ಅಂಬೇಡ್ಕರ ನಗರ ಸಮಸ್ತ ಗ್ರಾಮಸ್ಥರು. ಕ್ಷೇತ್ರದ ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು. ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರು ಸರ್ವ ಸದಸ್ಯರು...

ನ್ಯಾಯಾಲಯ ಸ್ಥಾಪನೆಗೆ ಶಾಸಕರಿಂದ ಸ್ಥಳ ವೀಕ್ಷಣೆ

ಇಮೇಜ್
   ಕೊಟ್ಟೂರು: ಪಟ್ಟಣದಲ್ಲಿ ನ್ಯಾಯಾಲಯ ಆರಂಭಿಸಲು ಅಗತ್ಯವಿರುವ ಕಟ್ಟಡ ಮುಂತಾದ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವುದಾಗಿ ಶಾಸಕ ಕೆ.ನೇಮರಾಜನಾಯ್ಕ ಭರವಸೆ ನೀಡಿದರು. ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಛೇರಿಯಲ್ಲಿ ಸೋಮವಾರ ನಡೆದ ನ್ಯಾಯಲಯ ಹೋರಾಟ ಸಮಿತಿ ಪದಾಧಿಕಾರಿಗಳನ್ನುದ್ದೇಶಿಸಿ ಮಾತನಾಡಿ ವಕೀಲರ ಬೇಡಿಕೆಯಂತೆ ಪಟ್ಟಣ ಪಂಚಾಯ್ತಿ ಕಚೇರಿಯ ಹಿಂಭಾಗದಲ್ಲಿರುವ ಬಾಲ ಭವನದಲ್ಲಿ ನಡೆಯುತ್ತಿರುವ ನಮ್ಮ ಕ್ಲಿನಿಕ್ ಆಸ್ಪತ್ರೆಯನ್ನು ಹಳೇ ನಾಡಕಚೇರಿ ಕಟ್ಟಡಕ್ಕೆ ಸ್ಥಳಾಂತರಿಸಿ ಬಾಲ ಭವನ ಕಟ್ಟಡವನ್ನು ತಾತ್ಕಾಲಿಕವಾಗಿ ನ್ಯಾಯಲಯ ಸ್ಥಾಪನೆಗೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ಶೀಘ್ರದಲ್ಲಿಯೇ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೂ ಸಹ ಕೂಡ್ಲಿಗಿ ರಸ್ತೆಯಲ್ಲಿ ಸೂಕ್ತ ಸ್ಥಳವನ್ನು ಮಂಜೂರು ಮಾಡುವುದಲ್ಲದೇ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ಕಲ್ಪಿಸಿಕೊಡುವುದಾಗಿ ತಿಳಿಸಿದರು. ನ್ಯಾಯಾಲಯ ಹೋರಾಟ ಸಮಿತಿ ಅಧ್ಯಕ್ಷ ಎಂ. ಗುರುಸಿದ್ಧನಗೌಡ ಮಾತನಾಡಿ ಉಚ್ಚ ನ್ಯಾಯಾಲಯದ ಬಳ್ಳಾರಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಆರ್ ನಟರಾಜ್ ಇವರು ಹರಪನಹಳ್ಳಿಗೆ ಇತ್ತೀಚೆಗೆ ಆಗಮಿಸಿದ ಸಂದರ್ಭದಲ್ಲಿ ನ್ಯಾಯಾಲಯ ಸ್ಥಾಪನೆಗೆ ಮನವಿ ಸಲ್ಲಿಸಿದಾಗ ಕೂಡಲೇ ಸ್ಪಂದಿಸಿ ಬಳ್ಳಾರಿಯ ಪ್ರಧಾನ ಜಿಲ್ಲಾ ಸತ್ರ ನ್ಯಾಯದೀಶರಾದ ಕೆ.ಜಿ.ಶಾಂತಿ ಇವರಿಗೆ ಕೊಟ್ಟೂರಿನಲ್ಲಿ ಕಟ್ಟಡ ವೀಕ್ಷಣೆ ಮಾಡಿ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ ಬಗ್ಗೆ ವಿವರಣೆ ನೀಡಿದರ...

ಸ್ವಾತಂತ್ರ್ಯೋತ್ಸವದ ಸಂಭ್ರಮ

ಇಮೇಜ್
    ವರದಿ - ಮಂಜುನಾಥ್ ಕೋಳೂರು ಕೊಪ್ಪಳ       ಕೊಪ್ಪಳ  ಅಗಸ್ಟ್ 16 : -   ದೇಶಾದ್ಯಂತ ಹಲವಾರು ಹೋರಾಟಗಾರರು  ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಪ್ರಾಣ , ಜೀವನವನ್ನೇ ತ್ಯಾಗ ಮಾಡಿ   ಸ್ವತಂತ್ರವನ್ನು ಕೊಡಿಸಿದ್ದು  , ಸ್ವತಂತ್ರ ಹೋರಾಟಗಾರರನ್ನು  ಗುಣಗಾನ ಮಾಡುವ ಇಂದು 79ನೇ ಸ್ವಾತಂತ್ರ್ಯೋತ್ಸವದ ದಿನದ ಅಂಗವಾಗಿ ಜಿಲ್ಲೆಯ ಯಲಬುರ್ಗಾ  ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ- ಕನಕಪುರ  ಭವನ ಮುಂಭಾಗದಲ್ಲಿ ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ  ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಸಿಬ್ಬಂದಿಯವರು ಏರ್ಪಡಿಸಿದ ಸ್ವಾತಂತ್ರೋತ್ಸವ ದಿನಾಚರಣೆ ಅಂಗವಾಗಿ ಡಾ// ಬಿ. ಆರ್. ಅಂಬೇಡ್ಕರ್ ರವರ  ಹಾಗೂ ಮಹಾತ್ಮ ಗಾಂಧೀಜಿಯವರ ಭಾವಚಿತ್ರಗಳಿಗೆ  ಪೂಜೆಸಲ್ಲಿಸಿ ,  ಧ್ವಜಾರೋಹನ  ನೆರೆವೇರಿಸಿ ರಾಷ್ಟ್ರಧ್ವಜಕ್ಕೆ ಗೌರವ ವಂದನೆಯನ್ನು ಸಮರ್ಪಿಸಲಾಯಿತು. ಧ್ವಜರೋಣದ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶೋಕ್ ಗೌಡ್ರು ನೆರೆವೇರಿಸಿದರು. ನಂತರ ಪರಸ್ಪರ ಎಲ್ಲರಿಗೂ ಸಂತೋಷ ಸಂಭ್ರಮದಿಂದ  ಸಿಹಿ ತಿಂಡಿ ತಿನಿಸುಗಳನ್ನು ಹಂಚಲಾಯಿತು. ಧ್ವಜಾರೋಹನ ಕಾರ್ಯಕ್ರಮದಲ್ಲಿ  ದೈಹಿಕ ಶಿಕ್ಷಣಾಧಿಕಾರಿಗಳಾದ ವೀರಭದ್ರಪ್ಪ ಅಂಗಡಿ ,  ವ್ಯವಸ್ಥಾಪಕರಾದ ಸೂರ್ಯನಾರಾಯಣ...

ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ: ಶಾಸಕ ನೇಮಿರಾಜ್ ನಾಯ್ಕ

ಇಮೇಜ್
  *ವಿದ್ಯುತ್ ಕೇಬಲ್‌ ಅಳವಡಿಕೆಗೆ ಶಾಸಕ   ಚಾಲನೆ* "ಪಟ್ಟಣದೊಳಗಿನ ಎಲ್ಲಾ ವಿದ್ಯುತ್ ಮಾರ್ಗದಲ್ಲಿನ ತಂತಿಗಳನ್ನು ತೆರವು ಮಾಡಿ 80 ಲಕ್ಷ ರೂ.ಗಳಲ್ಲಿ ಕೇಬಲ್ ಅಳವಡಿಕೆ ಮಾಡಲಾಗುತ್ತದೆ ಎಂದು ಶಾಸಕ ಕೆ.ನೇಮಿರಾಜ ನಾಯ್ಕ್ ಹೇಳಿದರು." ಕೊಟ್ಟೂರು:  ಪಟ್ಟಣದ ಮಹಾತ್ಮಾ ಗಾಂಧೀಜಿ ವೃತ್ತದಲ್ಲಿ ಕೇಬಲ್ ಅಳವಡಿಕೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಪಟ್ಟಣದ ರಥ ಬೀದಿಯ ಎರಡೂ ಬದಿಯಲ್ಲಿ ಹಾದು ಹೋಗಿರುವ ವಿದ್ಯುತ್ ಮಾರ್ಗದಲ್ಲಿ ಸದ್ಯ ತಂತಿಗಳಿವೆ. ಇದರಿಂದ ರಥ ಸಾಗುವ ವೇಳೆ ಅಪಾಯ ವಾಗುವ ಸಾಧ್ಯತೆಗಳಿವೆ. ಅಲ್ಲದೇ ಕೆಲ ಕಡೆ ಕಟ್ಟಡಗಳಿಗೆ ಹತ್ತಿರದಲ್ಲಿ ವಿದ್ಯುತ್ ಲೈನ್ ಇದೆ. ಈ ಹಿನ್ನೆಲೆಯಲ್ಲಿ ಪಟ್ಟಣ ವ್ಯಾಪ್ತಿಯೊಳಗೆ ಎಲ್ಲ ಮಾರ್ಗ ದಲ್ಲಿತಂತಿ ಬದಲು 80 ಲಕ್ಷ ರೂ.ಗಳಲ್ಲಿ ಕೇಬಲ್ ಅಳವಡಿಕೆ ಮಾಡಲಾಗುತ್ತಿದೆ. ಸದ್ಯ 5 ಕಿಮೀ ಉದ್ದದ ಕೇಬಲ್ ಅಳವಡಿಕೆ ಮಾಡಲಾಗುತ್ತಿದ್ದು, ಇನ್ನೂ 10 ಕಿಮೀ ಉದ್ದದ ಕೇಬಲ್ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಕೊಟ್ಟೂರು ಪಟ್ಟಣ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಹಾಕಿ ಕೊಂಡಿದೆ. ಅಭಿವೃದ್ಧಿಗೂ ಮೊದಲು ಯಾವುದನ್ನೂ ಹೇಳಲು ಬಯಸುವುದಿಲ್ಲ ಶೀಘ್ರದಲ್ಲಿ 15 ಕೋಟಿ ರೂ. ಗಳಲ್ಲಿ ಅಭಿವೃದ್ಧಿ ಕಾರ್ಯ ಕ್ಕೆ ಚಾಲನೆ ನೀಡುತ್ತೇನೆ ಎಂದರು. ಕೊಟ್ಟೂರು ಸೇರಿ ಕ್ಷೇತ್ರ 17ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಂಬಂ ಧಿಸಿದಂತೆ ಕೇಂದ್ರ ನೀರಾವರಿ ಸಚಿವರಿಗೆ 500 ಕೋಟಿ ರೂ.ಗಳಿಗೂ ಹೆಚ...

ಶ್ರೀಕೃಷ್ಣನ ಸಹೋದರತ್ವ ಪ್ರಾಮಾಣಿಕ ಕಾರ್ಯಕ್ಷಮತೆ ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನ - ವಸಂತ ಪೂಜಾರಿ

ಇಮೇಜ್
  ವರದಿ - ಮಂಜುನಾಥ ಕೋಳೂರು ಕೊಪ್ಪಳ.  ಕೊಪ್ಪಳ ಅ-16 : -ಭಾರತೀಯ ಜನತಾ ಪಾರ್ಟಿ ಕೊಪ್ಪಳ ನಗರ ಮಹಿಳಾ ಮೋರ್ಚಾ ವತಿಯಿಂದ ಕೃಷ್ಣ ಜನ್ಮಾಷ್ಟಮಿ , ಹಾಗು ರಕ್ಷಾ ಬಂಧನದ ಕಾರ್ಯಕ್ರಮವನ್ನು ಆಚರಿಸಲಾಯಿತು. ಶ್ರೀ ಯುತ ವಸಂತ ಪೂಜಾರಿಯವರು ಬೌದ್ದಿಕ್ ನೆರವೇರಿಸಿ ಶ್ರೀಕೃಷ್ಣನ ಸಹೋದರತ್ವ ಪ್ರಾಮಾಣಿಕ ಕಾರ್ಯಕ್ಷಮತೆ ಮತ್ತು ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಜೊತೆಗೆ ಸಂಘದ ನೂರುದಿನದ ಶತಬ್ದಿಯ ಕುರಿತು ಸುಧೀರ್ಘವಾಗಿ ಮಾತನಾಡಿದರು. ನಗರ ಮಹಿಳಾ ಮೋರ್ಚಾ ಅಧ್ಯಕ್ಷರಾದ ಜಯಶ್ರೀ ಗೊಂಡಬಾಳ ಅವರು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್,ಮಧುರ ಕರ್ಣಂ,ಅಪ್ಪಣ್ಣ ಪದಕಿ, ಚಂದ್ರು ಪಾಟೀಲ್ ಹಲಗೇರಿ, ಡಾ. ಮಹೇಶ್ ಗೋವಿನಕೊಪ್ಪ, ಚಂದ್ರು ಕವಲೂರು, ಪಾನಘಂಟಿ ವಕೀಲರು, ಭೂಸ್ನೂರು ಮಠ ಫಕೀರಪ್ಪ ಆರೇರ್ ,ಪ್ರದೀಪ್ ಹಿಟ್ನಾಳ್, ರಮೇಶ್ ಕವಲೂರ,ಸುನೀಲ್ ಹೆಸರೂರ, ಮಹೇಶ್ ಹಾದಿಮನಿ ಹಾಗೂ ರತ್ನಾಕುಮಾರಿ,ಕೀರ್ತಿ ಪಾಟೀಲ್, ರೇಖಾ ಸಂಗಳ, ರೇವತಿ ಮಟ್ಟಿ, ಸುನಂದಾ ಹಂಚಿನಾಳ,ನೇತ್ರಾವತಿ,ಗೌರಮ್ಮ ಹಾದಿಮನಿ ಉಪಸ್ಥಿತರಿದ್ದರು.ಮಹಾಲಕ್ಷ್ಮಿ ಕಂದಾರಿ ನಿರೂಪಿಸಿದರು.

79ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಸಡಗರ.

ಇಮೇಜ್
  ವರದಿ - ಮಂಜುನಾಥ್ ಕೊಳೂರು  ಕೊಪ್ಪಳ. ಆಗಸ್ಟ್ 16 : - ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ಹಲವಾರು ಮಹನೀಯರು ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟು ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಕೊಡಿಸಿದ 79ನೇ ಸ್ವಾತಂತ್ರ್ಯೋತ್ಸವ ಆಚರಣೆಯನ್ನು ನಗರದ ಮೋಚಿ (ಮುಚಿಗೇರ) ಸಮಾಜ ಬಾಂಧವರು ಜವಾಹರ ರೋಡ್, ಶ್ರೀ ಬಂಡೆ ದುರ್ಗಮ್ಮ ದೇವಸ್ಥಾನದ ಮುಂಭಾಗದಲ್ಲಿ ಆಯೋಜಿಸಿದ್ದ ಧ್ವಜರೋಹಣದ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ// ಬಿ.ಆರ್. ಅಂಬೇಡ್ಕರ್ ರವರ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ಮಾಡಿ ರಾಷ್ಟ್ರಧ್ವಜಕ್ಕೆಗೌರವ ಸಮರ್ಪಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುನಾಥ ಬಂಡಿ , ಗೌರವಾಧ್ಯಕ್ಷ ಹುಲಗಪ್ಪ ಹುನಗುಂದ , ಮಾಜಿ ಉಪಾಧ್ಯಕ್ಷರಾದ ರಾಮಣ್ಣ ಮಂಗಳೂರು ನೆರವೇರಿಸಿದರು.  ಧ್ವಜಾರೋಹಣ ನೆರವೇರಿಸಿದ ನಂತರ ಪರಸ್ಪರ ಸಿಹಿ ವಿತರಿಸಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕವನ್ನು ವಿತರಿಸಿದರು.  ಧ್ವಜಾರೋಹಣ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಪಕೀರಪ್ಪ ಹಾದಿಮನಿ , ಕಾರ್ಯದರ್ಶಿ ಮಹೇಶ್ ಹಾದಿಮನಿ, ಖಜಾ0ಚಿ ಆನಂದ ದೊಡ್ಮನಿ , ಸಹ ಕಾರ್ಯದರ್ಶಿ ಹನುಮಂತ ಮಂಗಳೂರು, ಸದಸ್ಯರಾದ ಈರಪ್ಪ ಹುಣಸಿಮರ , ತಿಪ್ಪಣ್ಣ ಹಾದಿಮನಿ , ಆಂಜನೇಯ ಬೆದವಟ್ಟಿ , ಮಂಜುನಾಥ ಹಾದಿಮನ...

ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಹೋರಾಟಗಾರರ ಸ್ಮರಣೆ ದೇಶಭಕ್ತಿಯ ಅನುಕರಣೆ . ಬಹುಜನರ ಒಳಿತಿಗಾಗಿ ಬಹು ಜನರ ಕಲ್ಯಾಣಕ್ಕಾಗಿ ಎಂಬ ಮಂತ್ರವನ್ನು ಸಾರುತ್ತ ಭವ್ಯ ಭಾರತ ಕಟ್ಟುವ ಸಂಕಲ್ಪ ಮಾಡೋಣ ಭಾರತಕ್ಕೊಂದು ಹೊಸ ಬಾಷ್ಯ ಬರೆಯೋಣ : ಶಿವರಾಜ್ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವ.

ಇಮೇಜ್
   ವರದಿ - ಮಂಜುನಾಥ ಕೋಳೂರು ಕೊಪ್ಪಳ  ಕೊಪ್ಪಳ ಆಗಸ್ಟ್ 15 : - ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷದ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾ ಕೇಂದ್ರ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಶುಕ್ರವಾರ ರಾಷ್ಟ್ರ ಧ್ವಜ ರೋಹಣ ನೆರವೇರಿಸಿದರು.  ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳ ದೇಶಭಕ್ತಿಗೆ ಪ್ರೇರೇಪಿಸುವ ಹಾಡುಗಳಿಗೆ ಹೆಜ್ಜೆ ಹಾಕಿ ವಿಜೃಂಭಣೆಯಿಂದಸಂಭ್ರಮ ಪಟ್ಟರು. ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ತಮ್ಮ ಭಾಷಣದಲ್ಲಿ ಸ್ಮರಿಸಿದ ಸಚಿವರು ಹೋರಾಟಗಾರರು ಪ್ರತಿಯೊಬ್ಬರು ಭಾರತೀಯರ ಮನದಲ್ಲಿ ಅಮರವಾಗಿದ್ದಾರ  ಮಹಾತ್ಮ ಗಾಂಧಿ ಜಿ, ಸುಭಾಷ್ ಚಂದ್ರ ಬೋಸ್ , ಡಾ// ಬಿ .ಆರ್. ಅಂಬೇಡ್ಕರ , ಸರ್ದಾರ್ ವಲ್ಲಬಾಯ್ ಪಟೇಲ್ , ಲಾಲ್ ಬಹದ್ದೂರ ಶಾಸ್ತ್ರಿ ,ಗೋಪಾಲಕೃಷ್ಣ ಗೋಖಲೆ , ಬಾಲಗಂಗಾಧರ್ ತಿಲಕ್ ಹೀಗೆ ಅನೇಕ ಪ್ರಾಣತ್ಯಾಗಮಾಡಿದ್ದಾರೆ ಎಂದರು . ಬಹು ಜನರ ಒಳಿತಿಗಾಗಿ ಬಹು ಜನರ ಕಲ್ಯಾಣಕ್ಕಾಗಿ ಎಂಬ ಮಂತ್ರವನ್ನು ಸಾರುತ್ತ ಭವ್ಯ ಭಾರತ ಕಟ್ಟುವ ಸಂಕಲ್ಪ ಮಾಡೋಣ ಭಾರತಕ್ಕೊಂದು ಹೊಸ ಭಾಷ್ಯ ಬರೆಯೋಣ ಎಂದರು . ಜಿಲ್ಲೆಯ ಹೋರಾಟಗಾರರು ನೀಡಿದ ಕೊಡುಗೆಯನ್ನು ಕೊಂಡಾಡಿದರು.  ನಂತರ ರಾಜ್ಯ ಸರ್ಕಾರದ ಪಂಚ್ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿ ಹಿಂದಿನ ಎರಡುವರೆ ವರ್ಷದಲ್ಲಿ ಸಾಕಷ್ಟು ಅಭಿವೃದ್...