ಸ್ವಾತಂತ್ರ್ಯೋತ್ಸವದ ಸಂಭ್ರಮ


    ವರದಿ - ಮಂಜುನಾಥ್ ಕೋಳೂರು ಕೊಪ್ಪಳ      

ಕೊಪ್ಪಳ  ಅಗಸ್ಟ್ 16 : -   ದೇಶಾದ್ಯಂತ ಹಲವಾರು ಹೋರಾಟಗಾರರು  ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಪ್ರಾಣ , ಜೀವನವನ್ನೇ ತ್ಯಾಗ ಮಾಡಿ   ಸ್ವತಂತ್ರವನ್ನು ಕೊಡಿಸಿದ್ದು  , ಸ್ವತಂತ್ರ ಹೋರಾಟಗಾರರನ್ನು  ಗುಣಗಾನ ಮಾಡುವ ಇಂದು 79ನೇ ಸ್ವಾತಂತ್ರ್ಯೋತ್ಸವದ ದಿನದ ಅಂಗವಾಗಿ ಜಿಲ್ಲೆಯ ಯಲಬುರ್ಗಾ  ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ- ಕನಕಪುರ  ಭವನ ಮುಂಭಾಗದಲ್ಲಿ ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ  ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಸಿಬ್ಬಂದಿಯವರು ಏರ್ಪಡಿಸಿದ ಸ್ವಾತಂತ್ರೋತ್ಸವ ದಿನಾಚರಣೆ ಅಂಗವಾಗಿ ಡಾ// ಬಿ. ಆರ್. ಅಂಬೇಡ್ಕರ್ ರವರ  ಹಾಗೂ ಮಹಾತ್ಮ ಗಾಂಧೀಜಿಯವರ ಭಾವಚಿತ್ರಗಳಿಗೆ  ಪೂಜೆಸಲ್ಲಿಸಿ ,  ಧ್ವಜಾರೋಹನ  ನೆರೆವೇರಿಸಿ ರಾಷ್ಟ್ರಧ್ವಜಕ್ಕೆ ಗೌರವ ವಂದನೆಯನ್ನು ಸಮರ್ಪಿಸಲಾಯಿತು. ಧ್ವಜರೋಣದ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶೋಕ್ ಗೌಡ್ರು ನೆರೆವೇರಿಸಿದರು. ನಂತರ ಪರಸ್ಪರ ಎಲ್ಲರಿಗೂ ಸಂತೋಷ ಸಂಭ್ರಮದಿಂದ  ಸಿಹಿ ತಿಂಡಿ ತಿನಿಸುಗಳನ್ನು ಹಂಚಲಾಯಿತು. ಧ್ವಜಾರೋಹನ ಕಾರ್ಯಕ್ರಮದಲ್ಲಿ  ದೈಹಿಕ ಶಿಕ್ಷಣಾಧಿಕಾರಿಗಳಾದ ವೀರಭದ್ರಪ್ಪ ಅಂಗಡಿ ,  ವ್ಯವಸ್ಥಾಪಕರಾದ ಸೂರ್ಯನಾರಾಯಣ ,  ಕಚೇರಿಅಧೀಕ್ಷಕರಾದ ಫಾರೂಕ್ ಖಾನ್ , ಹಾಗೂ ಜ್ಯೋತಿಬಾ ಜಾದವ್,  ದ್ವಿತೀಯ ದರ್ಜೆ ಸಹಾಯಕ ಎ .ವೆಂಕಟೇಶ್,  ಶ್ರೀಶೈಲಪ್ಪ ತೋಟದ,  ಶರಣಪ್ಪ ಹಳ್ಳಿಕೇರಿ, ಸಂತೋಷ್ ಇಮ್ಮಡಿಗೌಡ್ರ್ ಹಾಗೂ ಬಿ.ಇ.ಓ ಮತ್ತು ಬಿ.ಆರ್.ಸಿ ಕಛೇರಿಯ ಸರ್ವ ಸಿಬ್ಬಂದಿಯವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*