ಪೋಸ್ಟ್‌ಗಳು

ಏಪ್ರಿಲ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

"ಶವವಾದ ಲೈನ್ ಮ್ಯಾನ್, ಜೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ಆರೋಪ"

ಇಮೇಜ್
ಕೊಟ್ಟೂರು ತಾಲೂಕಿನ ದೂಪದಹಳ್ಳಿ ಗ್ರಾಮದಲ್ಲಿ ವಿದ್ಯುತ್ ಕಂಬದಲ್ಲಿ ಲೈನ್ ಬದಲಾವಣೆ ಮಾಡುವ ವೇಳೆ ವಿದ್ಯುತ್‌ ಪ್ರವಹಿಸಿ ಕಂಬದ ಮೇಲೆ ಲೈನ್ ಮ್ಯಾನ್ ಇರುವ ದುರ್ಘಟನೆ ಬುಧವಾರ ನಡೆದಿದೆ. ಮೃತ ದುರ್ದೈವಿ ಲೈನ್ ಮ್ಯಾನ್ ಅಜ್ಜಯ್ಯ(29), ದೂಪದಹಳ್ಳಿ ಗ್ರಾಮದ ಕಂಬಳ ವಿದ್ಯುತ್ ಸಮಸ್ಯೆ ಪರಿಹರಿಸಲು ವಿದ್ಯುತ್ ಮೇಲೇರಿ ಕೆಲಸ ಮಾಡುತ್ತಿದ್ದಾರೆ. ವೇಳೆ ಈ ಘಟನೆ ನಡೆದಿದೆ. ಕೆಲಸಕ್ಕೂ ಮುನ್ನ ಕೊಟ್ಟೂರು ಉಪಕೇಂದ್ರದಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಬಳಿಕ ಕಂಬ ಹತ್ತಿದ್ದಾನೆ. ಆದರೆ ಕಂಬದ ಮೇಲೇರಿ ಕೆಲಸ ನಿರ್ವಹಿಸುತ್ತಿದ್ದ ಏಕಾಏಕಿ ಲೈನ್ ನಲ್ಲಿ ವಿದ್ಯುತ್ ಪೂರೈಕೆಯಾದ ಹಿನ್ನಲೆಯಲ್ಲಿ ಕಂಬದ ಮೇಲಿನ ಲೈನ್ ಮ್ಯಾನ್ ಶವವಾಗಿದ್ದಾನೆ. ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಕರ್ತವ್ಯನಿರತ ಲೈನ್ ಮ್ಯಾನ್ ಕಂಬದ ಮೇಲೆಯೇ ಶವವಾಗಿ ನೇತಾಡುತ್ತಿರುವ ದೃಶ್ಯ ಮನ ಕಲಕುವಂತಿದೆ. ಜೆಸ್ಕಾಂ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೇ, ಲೈನ್ ಬದಲಾವಣೆ ಮಾಡಲು ಸೂಚಿಸಿರುವ ತಪ್ಪು ಮಾಹಿತಿ ನೀಡಿರೋದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಮೃತ ಲೈನ್ ಮ್ಯಾನ್‌ ಅಜ್ಜಯ್ಯನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಜೆಸ್ಕಾಂ ಮೇಲಾಧಿಕಾರಿಗಳು ಬರುವಂತೆ ಸ್ಥಳೀಯರು ಮತ್ತು ಕುಟುಂಬಸ್ಥರು ಆಗ್ರಹಿಸಿದ್ದಾರೆ. ವಿದ್ಯುತ್ ಕಂಬದ ಮೇಲಿಂದ ಮೃತದೇಹವನ್ನು ಕೆಳಗಿಸದಂತೆ ಪಟ್ಟು ಹಿಡಿದಿದ್ದಾರೆ. ಈ ಸಾವಿಗೆ ಜೆಸ್ಕಾಂ ಇಲಾಖ...

"ವಿಜಯಮಾಲೆ ಧರಿಸಿದ ಕೆ ಕೆ ಕಿಂಗ್ಸ್ ಕ್ರಿಕೆಟರ್ಸ್ ತಂಡ"

ಇಮೇಜ್
*ಕರ್ನಾಟಕ ಪ್ರೆಸ್ ಕ್ಲಬ್ ಪ್ರೀಮಿಯರ್ ಲೀಗ್ ಸೀಸನ್ 01 ರಲ್ಲಿ ವಿವಿಧ ಇಲಾಖೆಯ ಕ್ರಿಕೆಟ್ ಕ್ರೀಡಾಪಟುಗಳು ಡಾಕ್ಟರ್ಸ್ , ಪೊಲೀಸ್, ಗ್ರಾಮ ಲೆಕ್ಕಾಧಿಕಾರಿಗಳು, ಟೀಚರ್ಸ್ ,ಬ್ಯಾಂಕ್ ಸಿಬ್ಬಂದಿಗಳು ಭಾಗವಹಿಸಿ ಈ ಟೂರ್ನಮೆಂಟ್ ಗೆ ಮೇರಗು ಮೂಡಿಸಿತು* ಕೊಟ್ಟೂರಿನಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ನಡೆದ ಪ್ರೀಮಿಯರ್ ಲೀಗ್ ಸೀಸನ್ 01 ನಾಲ್ಕು ದಿನಗಳ ಕಾಲ ಸ್ಟಂಪರ್ ಬಾಲ್  ಟೂರ್ನಮೆಂಟ ಪಂದ್ಯಾವಳಿಗಳ ಆಯೋಜಿಸಿದು ಮಂಗಳವಾರ ಸುಖಾಂತ್ಯ ಕಂಡಿತು. ಕೊಟ್ಟೂರು : ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ಪ್ರಪಥಮ ಬಾರಿಗೆ ಪ್ರೀಮಿಯರ್ ಲೀಗ್ ಸೀಸನ್ 01 ಆಯೋಜಿಸಿದ ಸ್ಟಂಪರ್ ಬಾಲ್  ಟೂರ್ನಮೆಂಟ  ಏಪ್ರಿಲ್ 19 ರಿಂದ 22 ವರೆಗೂ ನಾಲ್ಕು ದಿನ ಆಯೋಜಿಸಲಾಗಿತ್ತು.  ತಾಲೂಕಿನ ಹಳ್ಳಿ ಕ್ರೀಡಾಪಟುಗಳು ಒಳಗೊಂಡು ಜಿ ಬಿ ಕ್ರಿಕೆಟರ್ಸ್, ಕೆ ಕೆ ಕಿಂಗ್ಸ್ ಕ್ರಿಕೆಟರ್ಸ್,ನೈಸ್ ಕ್ರಿಕೆಟರ್ಸ್, ಶಿವಾನಿ ಕ್ರಿಕೆಟರ್ಸ್, ರೈಲ್ವೆ ಕ್ರಿಕೆಟರ್ಸ್,ಅರ್ ಸಿ ಕೆ ಕ್ರಿಕೆಟರ್ಸ್, ಎಸ್ ಎಸ್ ಸ್ಟ್ರೈಕರ್ಸ್,ಲಾಯನ್ಸ್ ಕ್ರಿಕೆಟರ್ಸ್, ಒಟ್ಟು 08 ತಂಡಗಳು ಭಾಗವಹಿಸಿದ್ದವು. ಪ್ರಥಮ ಸೆಮಿಫೈನಲ್ ಪಂದ್ಯದ ಸೆಣಸಾಟಕ್ಕಾಗಿ ಕೆ ಕೆ ಕಿಂಗ್ಸ್ ಕ್ರಿಕೆಟರ್ಸ್ ತಂಡ ಮತ್ತು ರೈಲ್ವೆ ಕ್ರಿಕೆಟರ್ಸ್ ತಂಡ ನಡುವಿನ ಸೆಮಿಫೈನಲ್‌ ಹಣಾಹಣಿಯಾಲ್ಲಿ ಕೆ ಕೆ ಕಿಂಗ್ಸ್ ಕ್ರಿಕೆಟರ್ಸ್ ಜಯಗಳಿಸಿ ಫೈನಲ್‌ಗೆ ಲಗ್ಗೆಯಿಟ್ಟಿತು. ನಂತರ ಲಾಯನ್ಸ್ ಕ್ರಿಕ...

ಪತ್ರಕರ್ತರು ಕ್ರೀಡಾಮನೋಭಾವ ಬೆಳೆಸಿಕೊಳ್ಳಲು ಸಲಹೆ ಶ್ರೀರಾಮುಲು

ಇಮೇಜ್
  ಕೊಟ್ಟೂರು: ಶನಿವಾರ ಕೊಟ್ಟೂರಿನಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ನಡೆದ ಪ್ರೀಮಿಯರ್ ಲೀಗ್ ಪಂದ್ಯಾವಳಿಗಳ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಶ್ರೀರಾಮುಲು ಮಾತನಾಡಿ ಪತ್ರಕರ್ತರು ಸದಾ ಚುರುಕಿನಿಂದ ಸಾಮಾಜಿಕ ಬದಲಾವಣೆಗಳಿಗಾಗಿ ಶ್ರಮಿಸುವವರಾಗಿದ್ದು,  ಇವರು ಕ್ರಿಕೆಟ್ ಆಡುವ ಮೂಲಕ ತಮ್ಮ ದೇಹದಾಢ್ಯತೆಯನ್ನು ಬೆಳೆಸಿಕೊಳ್ಳಬೇಕು ಮತ್ತು ಕರ್ನಾಟಕ ಪ್ರೆಸ್‌ಕ್ಲಬ್ ವತಿಯಿಂದ ಹಳ್ಳಿಗಳಿಂದ ಬರುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಈ ಟೂರ್ನಿಮೆಂಟ್ ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆ ಎಂದರು. ನಿಮ್ಮ ಕ್ರೀಡೆಯನ್ನು ಕ್ರೀಡಾಸ್ಪೂರ್ತಿಯಿಂದ ಆಡಿ, ಒಳ್ಳೆಯ ಮನೋಭಾವ ಬೆಳೆಸಿಕೊಳ್ಳಿ ಎಂದರು. ಕರ್ನಾಟಕ ಪ್ರೆಸ್‌ಕ್ಲಬ್ ವತಿಯಿಂದ ರಾಜ್ಯ ಉಪಾಧ್ಯಕ್ಷರಾದ ಕೆ.ಕೊಟ್ರೇಶ್, ಎಂ.ಶ್ರೀನಿವಾಸ್ ವತಿಯಿಂದ ರಾಮುಲುರವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಿ.ಜೆ.ಪಿ. ತಾಲ್ಲೂಕು ಮುಖಂಡರಾದ ಭರಮನಗೌಡ, ಪ.ಪಂ. ಉಪಾಧ್ಯಕ್ಷ ಸಿದ್ದಯ್ಯ ಉಪಸ್ಥಿತರಿದ್ದು ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಪ್ರಮುಖ ಮುಖಂಡರು ಸೇರಿದ್ದರು  

ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಮೆಂಟ್

ಇಮೇಜ್
ಕೊಟ್ಟೂರಿನಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಮೆಂಟ್ ಶನಿವಾರ ಆಯೋಜಿಸಲಾಗಿತ್ತು. ಕರ್ನಾಟಕ ಪ್ರೆಸ್ ಕ್ಲಬ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿಯವರಾದ ರಮೇಶ್ ಜಿ. ರವರು ಸಸಿಗೆ ನೀರೆರೆಯುವ ಮೂಲಕ ಉದ್ಘಾಟನೆ ಮಾಡಿದರು.  ಪ್ರೆಸ್ ಕ್ಲಬ್‌ನ ಸದಸ್ಯರು ಕ್ರಿಕೆಟ್ ಆಯೋಜಿಸುವ ಮೂಲಕ ದೈಹಿಕವಾಗಿ ಸದೃಢರಾಗಿ, ಮೌಲ್ಯಾಧಾರಿತ ಸುದ್ದಿಗಳನ್ನು ಮಾಡುವುದರ ಮೂಲಕ ಸಮಾಜವನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು. ರಾಜ್ಯ ಉಪಾಧ್ಯಕ್ಷರಾದ ಹಲಗಿ ಸುರೇಶ್ ಮಾತನಾಡಿ, ಪತ್ರಕರ್ತರಾದವರು ಇಂತಹ ಸೃಜನಶೀಲ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ದೈಹಿಕವಾಗಿ ಸಮರ್ಥರಾಗಬೇಕು ಎಂದರು. ಕೊಟ್ಟೂರಿನ ಪ್ರೆಸ್ ಕ್ಲಬ್‌ನ ತಾಲ್ಲೂಕು ಘಟಕದ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿದ್ದಲ್ಲದೆ, ಕೆ.ಕೊಟ್ರೇಶ್‌ರವರನ್ನು ಕರ್ನಾಟಕ ಪ್ರೆಸ್ ಕ್ಲಬ್‌ನ ರಾಜ್ಯ ಉಪಾಧ್ಯಕ್ಷರಾಗಿ ನೇಮಕವಾಗಿ ಆದೇಶ ಪತ್ರ ನೀಡಿದರು. ತಾಲ್ಲೂಕು ಪದಾಧಿಕಾರಿಗಳನ್ನು ನೇಮಕ ಮಾಡಿದರು. ಹಸಿರು ಹೊನಲು ತಂಡದ ಬಿ.ಆರ್. ವಿಕ್ರಮ್ ಮಾತನಾಡಿ, ಒಳ್ಳೆಯ ಕಾರ್ಯಗಳನ್ನು ಮಾಡಲು ನೂರಾರು ವಿಘ್ನಗಳು ಎದುರಾಗುತ್ತವೆ. ಅದೇ ರೀತಿ ಈ ಕ್ರಿಕೆಟ್ ಟೂರ್ನಿಮೆಂಟ್ ಮಾಡಲೂ ಸಹ ಹಲವಾರು ವಿಘ್ನಗಳನ್ನು ಪತ್ರಕರ್ತರು ಇದೆಲ್ಲವನ್ನು ಮೀರಿ ಕರ್ನಾಟಕ ಪ್ರೆಸ್ ಕ್ಲಬ್ ಪ್ರೀಮಿಯರ್ ಲೀಗ್ ಮಾಡಿದ್ದಾರೆ. ಇವರ ಜೊತೆ ನಮ್ಮ ಸಹಕ...

ಜಂಬೂರ್ ಬಸಮ್ಮನವರಿಗೆ ಶತಮಾನೋತ್ಸವದ ಸಂಭ್ರಮ

ಇಮೇಜ್
  ಕೊಟ್ಟೂರು: ಇತ್ತೀಚೆಗೆ ಮನುಷ್ಯನ ಒತ್ತಡದ ಕಾರಣಕ್ಕಾಗಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈಗ ಇದ್ದವರು ಇನ್ನೊಂದು ಸಮಯಕ್ಕೆ ಇಲ್ಲವಾಗುತ್ತಿದ್ದಾರೆ. ಇದಕ್ಕೆ ವ್ಯತಿರಿಕ್ತ ಎಂಬಂತೆ ಕೊಟ್ಟೂರಿನ ಜಂಬೂರ್ ಬಸಮ್ಮನವರು ಶತಮಾನೋತ್ಸವ ಸಂಭ್ರಮದ ಹೊಸ್ತಿಲಲ್ಲಿದ್ದಾರೆ. ಕೊಟ್ಟೂರಿನ ಜಂಬೂರ್ ಬಸಮ್ಮನವರಿಗೆ ಈಗ ೧೦೦ ವರ್ಷ. ಮನುಷ್ಯ ಒಂದು ನೂರು ವರ್ಷ ಬದುಕುತ್ತಾನಾ? ಎಂಬ ಪ್ರಶ್ನೆಗೆ ಉತ್ತರವಾಗಿ ನಿಂತಿದ್ದಾರೆ.  ಅವರ ಶತಮಾನೋತ್ಸವ ಸಂಭ್ರಮವನ್ನು ಅವರ ಕುಟುಂಬಸ್ತರು ಭಾನುವಾರ ಸಿದ್ದಲಿಂಗೇಶ್ವರ ಸದನದಲ್ಲಿ ವಿಜೃಂಭಣೆಯಾಗಿ ಆಚರಿಸಿ ಸಂಭ್ರಮಿಸಿದ್ದಾರೆ. ಕ್ಷೇತ್ರದ ಶಾಸಕರಾದ ನೇಮಿರಾಜನಾಯ್ಕ, ಎಂ.ಎಂ.ಜೆ. ಹರ್ಷವರ್ಧನ್, ಮಾಜಿ ಸಚಿವ ಶ್ರೀರಾಮುಲು ಸಮಾರಂಭದಲ್ಲಿ ಭಾಗವಹಿಸಿ ಶತಮಾನೋತ್ಸವದ ಅಜ್ಜಿಗೆ ಶುಭಾಶಯನ್ನು ತಿಳಿಸಿದ್ದಾರೆ. ಮನುಷ್ಯನ ಆಯಸ್ಸು ಇತ್ತೀಚೆಗೆ ಕಡಿಮೆಯಾಗುತ್ತಿದೆ ಎಂದು ಹೇಳುತ್ತಿರುವುದು ಒಂದು ಕಡೆಯಾದರೆ, ಇಂತಹ ಶತಮಾನೋತ್ಸವವನ್ನು ಆಚರಿಸಿಕೊಳ್ಳುವವರು ಇನ್ನೊಂದು ಕಡೆ ಇದ್ದು, ಜೀವನೋತ್ಸಾಹವನ್ನು ತಮ್ಮಲ್ಲಿ ಜೀವಂತವಾಗಿರಿಸಿಕೊಂಡು ಪೀಳಿಗೆಗೆ ಮಾದರಿಯಾಗಿದ್ದಾರೆ.

ಸಕಲ ನರಸಿಂಹುಲು ಚೆಟ್ಟಿ ಒಂದು ನೆನಪು ಸ್ಮರಣಿಕೆ ಬಿಡುಗಡೆ

ಇಮೇಜ್
  ಬೆಂಗಳೂರು: ಆಕರ್ಷಕ ವ್ಯಕ್ತಿತ್ವದ ಸಕಲ ನರಸಿಂಹಲು ಚೆಟ್ಟಿ ಅವರು 97 ವರ್ಷದ ಸಾರ್ಥಕ ಜೀವನವನ್ನು ಪೂರೈಸಿದ್ದು, ಅವರ ಬದುಕಿನ ಕುರಿತು ಪ್ರಕಟಿಸಲಾದ ಸ್ಮರಣಿಕೆಯನ್ನು ಚಿನ್ಮಯ ಮಿಷನ್‌ ಪೂಜ್ಯ ಸ್ವಾಮಿ ಬ್ರಹ್ಮಾನಂದಜೀ ಅವರು ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ಬಿಡುಗಡೆ ಮಾಡಿದರು. ವ್ಯಾಪಾರ ವೃತ್ತಿಯಲ್ಲಿ ಮಾತ್ರವಲ್ಲದೆ, ಅವರು ನಿಜವಾದ ಕರ್ಮಯೋಗಿ, ತತ್ವ ಜ್ಞಾನಿ, ಮಾರ್ಗದರ್ಶಕ, ಗುರು ಹಾಗೂ ಮಾನವೀಯ ಮೌಲ್ಯಗಳನ್ನು ಪಾಲಿಸಿದ ಒಬ್ಬ ಶ್ರೇಷ್ಠ ವ್ಯಕ್ತಿಯಾಗಿದ್ದರು. ಪೂಜ್ಯ ಸ್ವಾಮಿ ಬ್ರಹ್ಮಾನಂದಜೀ ಅವರು ಪುಸ್ತಕ ಬಿಡುಗಡೆ ಮಾಡಿ ಮಾತ ನಾಡಿ, ಶ್ರೀ ಚೆಟ್ಟಿ ಅವರು ನಿಜವಾದ ಯೋಗಿಯಾಗಿದ್ದರು. ಶಾಸ್ತ್ರಗಳ ತತ್ತ್ವ ಜ್ಞಾನವನ್ನು ಅವರು ತಮ್ಮ ನಿತ್ಯ ಜೀವನದಲ್ಲಿ ಚಿಂತನೆ, ಮಾತು ಹಾಗೂ ಕೃತ್ಯಗಳಲ್ಲಿ ಅಳವಡಿಸಿಕೊಂಡವರು. ಅವರನ್ನು ಚಿನ್ಮಯ ಮಿಷನ್‌ ಭೀಷ್ಮ ಪಿತಾಮಹ ಎಂದು ಗೌರವದಿಂದ ಕರೆಯ ಲಾಗುತ್ತಿತ್ತು ಎಂದು ಅವರು ಹೇಳಿದರು.  ಕಾರ್ಯಕ್ರಮದಲ್ಲಿ ಕುದುರೆ ಮುಖ ಕಬ್ಬಿಣ ಮತ್ತು ಅದಿರು ಕಂಪನಿ ಲಿಮಿಟೆಡ್ ನ ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕರಾದ ಎ. ಕೃಷ್ಣಮೂರ್ತಿ, ಮತ್ತು ಆರ್ಯ ವೈಶ್ಯ ಮಹಾಸಭಾದ ಅಧ್ಯಕ್ಷರಾದ ಆ‌ರ್. ಪಿ.ರವಿಶಂಕರ್ ಉಪಸ್ಥಿತರಿದ್ದರು.

ಅಮರೇಶ ನಾಯ್ಕ ಅವರಿಗೆ ಛಾಯಾ ಶ್ರೀ ಪ್ರಶಸ್ತಿ ಪ್ರಧಾನ

ಇಮೇಜ್
  ಮಸ್ಕಿ: ಪಟ್ಟಣದ ಹವ್ಯಾಸಿ ಛಾಯಾಗ್ರಹಕ ಅಮರೇಶ ನಾಯ್ಕ ಗಂಗಾಫೋಟೋ ಸ್ಟುಡಿಯೋ ಅವರಿಗೆ ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘ ಬೆಂಗಳೂರಿನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಛಾಯಾ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪಟ್ಟಣದ ಹವ್ಯಾಸಿ ಛಾಯಾಗ್ರಹಕರಾದ ಅಮರೇಶ ನಾಯ್ಕ ಇವರು ಗಂಗಾ ಫೋಟೋ ಸ್ಟುಡಿಯೋ ದಲ್ಲಿ 25 ವರ್ಷಗಳ ಕಾಲ ಫೋಟೋಗ್ರಫಿ ವೃತ್ತಿಯಲ್ಲಿ ತಮ್ಮದೇ ಆದ ಐತಿಹಾಸಿಕ, ಪರಿಸರ, ಗ್ರಾಮೀಣ ಸೊಗಡು, ಸಮಾಜಿಕ ಕಳಕಳಿಯ ಕುರಿತು ಛಾಯಾಚಿತ್ರ ಗಳನ್ನು ಸೆರೆ ಹಿಡಿದು ಸಾರ್ವಜನಿಕ ರಂಗದಲ್ಲಿ ಅಚ್ಚುಮೆಚ್ಚಿನ ಫೋಟೋಗ್ರಫರ್ ಹಾಗೂ ವಿಡಿಯೋಗ್ರಫರ್ ಎಂದು ಅಮರೇಶ ನಾಯ್ಕ ರವರು  ಹೆಸರು ವಾಸಿ ಆಗಿದ್ದಾರೆ. ಇವರಿಗೆ ಪ್ರಶಸ್ತಿ ಪ್ರಧಾನ ಸುದ್ದಿ ತಿಳಿಯುತ್ತಲೇ ಕುಟುಂಬ ವರ್ಗದವರು ಹಾಗೂ ಗೆಳೆಯರು ಸನ್ಮಾನಿಸಿ ಶುಭ ಕೋರುತ್ತಿದ್ದಾರೆ.

ಮಸ್ಕಿ : ಪಟ್ಟಣದ ಮೌನೇಶ್ವರ ಜಾತ್ರೆ ಅದ್ಧೂರಿ

ಇಮೇಜ್
ಮಸ್ಕಿ: ಮಸ್ಕಿ ಪಟ್ಟಣದ ಜಗದ್ಗುರು ಮೌನೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಜೋಡು ಪಲ್ಲಕ್ಕಿ ಉತ್ಸವದ ಮೆರವಣಿಗೆಯೂ ಪುರವಂತರ ಸೇವೆಯೊಂದಿಗೆ, ಮಂಗಲ ವಾದ್ಯ ಮೇಳಗಳೊಂದಿಗೆ ಶನಿವಾರ ಸಂಭ್ರಮದಿಂದ ಜರುಗಿತು. ಪಲ್ಲಕ್ಕಿ ಉತ್ಸವ ಮುನ್ನಾ ದಿನವಾದ ಶುಕ್ರವಾರ ಗುಹಾ ದೇವಾಲಯದಲ್ಲಿರುವ ದೇವರ ಉತ್ಸವ ಮೂರ್ತಿಗಳನ್ನು ಹಾಗೂ ಪೂಜಾ ಸಾಮಗ್ರಿಗಳನ್ನು ಹೊರ ತೆಗೆದು ಸಕಲ ವಾದ್ಯ ಮೇಳಗಳೊಂದಿಗೆ ತೀರಕ್ಕೆ ತೆರಳಿ ಗಂಗಾ ಪೂಜೆಯನ್ನು ನೆರವೇರಿಸಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ಅಹೋರಾತ್ರಿ ಭಜನೆ ನಡೆಸಲಾಯಿತು. ವಿಶೇಷ ಜೋಡು ಪಲ್ಲಕ್ಕಿ ಉತ್ಸವ: ಶನಿವಾರ ಬೆಳಗ್ಗೆ ಶ್ರೀ ಮೌನೇಶ್ವರರ ಹಾಗೂ ವೀರಭದ್ರದೇವರ ಉತ್ಸವ ಮೂರ್ತಿ ಹಾಗೂ ಪೂಜಾ ಸಾಮಗ್ರಿಗಳನ್ನು ಹೊತ್ತ ಜೋಡು ಪಲ್ಲಕ್ಕಿ ಉತ್ಸವದ ಮೆರವಣಿಗೆಗೆ ದೇವಸ್ಥಾನದಿಂದ ಚಾಲನೆ ದೊರೆಯಿತು. ಮೆರವಣಿಗೆ ಪಟ್ಟಣದ ಅಶೋಕ ವೃತ್ತ, ಮುಖ್ಯರಸ್ತೆ, ಚೆನ್ನಮ್ಮ ವೃತ್ತ, ದೈವದ ಕಟ್ಟೆ, ಪತ್ತಾರ ಓಣಿ, ಸಂತೆ ಬಜಾರ್, ದುರ್ಗಮ್ಮ ಗುಡಿ, ಅಶೋಕ ವೃತ್ತ ವೃತ್ತ ಮಾರ್ಗದಿಂದ ಆಗಮಿಸಿ ಶ್ರೀ ಮೌನೇಶ್ವರ ದೇವಸ್ಥಾನಕ್ಕೆ ತಲುಪಿತು. ರಾತ್ರಿಯೇ ದೇವರುಗಳ ಪೂಜಾ ಸಾಮಗ್ರಿಗಳನ್ನು ಗುಹಾದೇವಾಲಯದಲ್ಲಿ ಪುನಃ ಪ್ರವೇಶವಾಗುವ ಮೂಲಕ ಜಾತ್ರೆಯೂ ಮಂಗಲೋತ್ಸವಾಯಿತು. ಇದೇ ಸಂದರ್ಭದಲ್ಲಿ ಪಟ್ಟಣದ ಮಹಿಳೆಯರು ಇಷ್ಟ ದೇವರಾದ ತಿಂಥಣಿ ಮೌನೇಶ್ವರ ಹಾಗೂ ಶ್ರೀ ವೀರಭದ್ರ ದೇವರುಗಳ ದರ್ಶನ ಪಡೆದು ಕಾಯಿ ಕರ್ಪೂರ, ನೈವೇದ್ಯ ಸಮರ್ಪಿಸಿದರು. ಇದೇ ಸಂದರ್ಭದಲ್ಲ...

ಜಾತ್ರೆಯ ಪ್ರಯುಕ್ತ ಮಸ್ಕಿ ಕೆಂಡದ ಆಂಜನೇಯ ದೇವಸ್ಥಾನದಲ್ಲಿ ದಾಸೋಹ ಕಾರ್ಯಕ್ರಮ

ಇಮೇಜ್
  ಮಸ್ಕಿ: ಪಟ್ಟಣದ ಬಾರಿಕೇರ ಓಣಿಯ ಐತಿಹಾಸಿಕ ಶ್ರೀ ಕೆಂಡದ ಆಂಜನೇಯ ದೇವಸ್ಥಾನದಲ್ಲಿ ಬೆಳಿಗ್ಗೆ ಆಂಜನೇಯ ವಿಗ್ರಹಕ್ಕೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.  ನಂತರ ಬಂದ ಭಕ್ತರಿಗೆ ಕೆಂಡದ ಆಂಜನೇಯ ದೇವಸ್ಥಾನದಲ್ಲಿ ದಾಸೋಹ ಕಾರ್ಯಕ್ರಮ ಇರುತ್ತದೆ.ಆದ್ದರಿಂದ ಭಕ್ತರು ಆಗಮಿಸಿ ಆಂಜನೇಯ ದೇವರ ಕೃಪೆಗೆ ಪಾತ್ರರಾಗಬೇಕು  ಎಂದು ಕೆಂಡದ ಆಂಜನೇಯ ದೇವಸ್ಥಾನ ಕಮಿಟಿ ಅಧ್ಯಕ್ಷ ರಾದ ನಾಗಭೂಷಣ ಬಾರಿಕೇರ ರವರು ಪತ್ರಿಕೆಗೆ ತಿಳಿಸಿದ್ದಾರೆ.

ಮಹಾವೀರರ 2624 ನೇ ಜಯಂತಿ ರ್ಯಾಲಿಗೆ ಮಹೇಂದ್ರ ಮುನೋತ್ ಚಾಲನೆ

ಇಮೇಜ್
  ಬೆಂಗಳೂರು, ಏ, 10; ಜೈನ ಯುವ ಸಂಘಟನೆ ಮತ್ತು ಜೈನ ಯುವ ಸಂಘಟನೆ ಸೇವಾ ಟ್ರಸ್ಟ್ ಆಶ್ರಯದಲ್ಲಿ, ಜೈನ ಸಮುದಾಯದ ಕಾರ್ಯಕ್ರಮವಾದ 2624ನೇ ತೀರ್ಥಂಕರ ಮಹಾವೀರ ಜನ್ಮ ಕಲ್ಯಾಣಕ್ ಮಹೋತ್ಸವ, ಹಾಲ್‌ನಿಂದ ದೀಪಗಳನ್ನು ಬೆಳಗಿಸಿ ಜೈನ ಧ್ವಜವನ್ನು ಬೀಸುವ ಮೂಲಕ ರ್ಯಾಲಿಗೆ ಟೌನ್ ನಲ್ಲಿ ಮಹೇಂದ್ರ ಮುನೋತ್ ಚಾಲನೆ ನೀಡಿದರು.   ನಾವು ಮಹಾವೀರ ಜನ್ಮ ಕಲ್ಯಾಣ ಮಹೋತ್ಸವವನ್ನು ನಿಜವಾದ ಅರ್ಥದಲ್ಲಿ ಆಚರಿಸಲು ಬಯಸಿದರೆ, ಅವರ ತತ್ವಗಳನ್ನು ನಮ್ಮ ಜೀವನದ ಆದರ್ಶವನ್ನಾಗಿ ಮಾಡಿಕೊಳ್ಳಬೇಕು ಎಂದು ಮಹೇಂದ್ರ ಮುನೋತ್ ಶೋಭಾ ಯಾತ್ರೆಯ ಆರಂಭಿಕ ಹಂತದಲ್ಲಿ ಹೇಳಿಕೆಯಲ್ಲಿ ಹೇಳಿದರು.   ಅಹಿಂಸಾ ಮತ್ತು ವಿಶ್ವಶಾಂತಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಹಲವಾರು ಸಾಮಾಜಿಕ ಚಟುವಟಿಕೆಗಳ ಮೂಲಕ ಭಗವಾನ್ ಮಹಾವೀರರ ಕಲ್ಯಾಣ ಮಹೋತ್ಸವವನ್ನು ಸ್ಮರಣೀಯಗೊಳಿಸಲು ಕಾರ್ಯಕ್ರಮ ಜರುಗಿದವರು.  ಜೈನ ಯುವ ಸಂಘಟನೆ ಮತ್ತು ಜೈನ ಯುವ ಸಂಘಟನೆ ಸೇವಾ ಟ್ರಸ್ಟ್ ಆಶ್ರಯದಲ್ಲಿ, ಜೈನ ಸಮುದಾಯದ ಕಾರ್ಯಕ್ರಮವಾದ 2624ನೇ ತೀರ್ಥಂಕರ ಮಹಾವೀರ ಜನ್ಮ ಕಲ್ಯಾಣಕ್ ಮಹೋತ್ಸವವನ್ನು ಗುರುವಾರ ಭಕ್ತಿ, ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಯಿತು.  ವಿವಿಧ ಜೈನ ಸಂಘಟನೆಗಳು, ಮಹಿಳಾ ಮಂಡಲ್, ಬಹು ಮಂಡಲ್, ಕಿಶೋರ್ ಮಂಡಲ್, ಬಾಲಿಕಾ ಮಂಡಲ್ ಜೀವನಕ್ಕೆ ಉಪಯುಕ್ತ ಸಂದೇಶಗಳನ್ನು ನೀಡುವ ಸ್ತಬ್ಧಚಿತ್ರಗಳೊಂದಿಗೆ ರ್ಯಾಲಿಗೆ ಆಗಮಿಸಿದವು, ಅವು ಆಕರ್ಷಣೆಯ ಕೇಂದ್ರಬಿಂದುವ...

ಕನಕಪುರ ದೇಗುಲಮಠದ ಶ್ರೀ ಚನ್ನಬಸವ ಸ್ವಾಮಿಗಳಿಗೆ ರಾಣಿಚನ್ನಮ್ಮ ವಿವಿ ಪಿಎಚ್‌ಡಿ ಪ್ರದಾನ

ಇಮೇಜ್
  ಕನಕಪುರ : ಬೆಳಗಾವಿಯ ರಾಣಿಚನ್ನಮ್ಮ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ಕನಕಪುರ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮಿಗಳಿಗೆ ಪಿಎಚ್‌ಡಿ ಪದವಿಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಪ್ರದಾನ ಮಾಡಿದರು. ಪೂಜ್ಯರು ಬಾಲ್ಯದಿಂದಲೂ ವಿದ್ಯಾಭ್ಯಾಸದಲ್ಲಿ ಉನ್ನತ ಶ್ರೇಣಿಯನ್ನು ಗಳಿಸಿಕೊಂಡವರಾಗಿದ್ದು, ಸ್ನಾತಕೋತ್ತರ ಪದವಿಯಲ್ಲಿ ಆರು ಚಿನ್ನದ ಪದಕ ಮತ್ತು ಎರಡು ಪಾರಿತೋಷಕದೊಂದಿಗೆ ವಿಶ್ವವಿದ್ಯಾಲಯಕ್ಕೆ ಮೊದಲಿಗರಾಗಿದ್ದರು. ಶ್ರೀಗಳು ಬೆಳಗಾವಿಯ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ಎಸ್.ಎಂ.ಗಂಗಾಧರಯ್ಯ ಅವರ ಮಾರ್ಗದರ್ಶನದಲ್ಲಿ ಸಲ್ಲಿಸಿದ್ದ 'ಏಕೋತ್ತರ ಶತಸ್ಥಲಗಳ ಪರಾಮರ್ಶೆ' ಎಂಬ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿಗೆ ಭಾಜನರಾಗಿದ್ದಾರೆ. ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್, ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ, ಕುಲಸಚಿವ ಸಂತೋಷ ಕಾಮಗೌಡ ಮತ್ತಿತರರಿದ್ದರು. ವಚನ ಸಾಹಿತ್ಯದ ನೂತನ ಸಂಶೋಧನೆ ವಚನ ತತ್ತ್ವಶಾಸ್ತ್ರದ ಪ್ರಧಾನ ಭೂಮಿಕೆಯಂತಿರುವ ಏಕೋತ್ತರ ಶತಸ್ಥಲಗಳ ಕುರಿತು ಆಮೂಲಾಗ್ರವಾಗಿ ಪರಾಮರ್ಶಿಸಿ, ಬಹುಮುಖಿ ನೆಲೆಯಲ್ಲಿ ಶ್ರೀಗಳು ಸಂಶೋಧನೆಯನ್ನು ಪೂರೈಸಿದ್ದಾರೆ. ಈ ಮಹಾಪ್ರಬಂಧವು ಸಂಶೋಧನಾಕ್ಷೇತ್ರಕ್ಕೆ ಒಂದು ಮೌಲಿಕ ಕೊಡುಗೆಯಾಗಿದೆ. ವೈಜ್ಞಾನಿಕ ಹಾಗೂ ವಿದ್ವತ್ ಪೂರ್ಣವಾದ ಒಳನೋಟಗಳಿರುವ ತಮ್ಮ ಅಧ್ಯಯನದಲ್ಲಿ ಶ್ರೀಗಳ ಹೊಸ ಬಗೆಯ ಸಂಶೋ...

*🪔ನಿಧನ ವಾರ್ತೆ: ಶ್ರೀ ಮತಿ ಭಜನೆ ಹನುಮವ್ವ ನಿಧನ *🪔

ಇಮೇಜ್
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ 14 ನೇ ವಾರ್ಡಿನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ನಗರದ ನಿವಾಸಿಗಳಾದ ಭಜನೆ ಹನುಮವ್ವ (75), ಮಂಗಳವಾರ ರಂದು ರಾತ್ರಿ 8.30 ಘಂಟೆಗೆ ಸ್ವ ಗೃಹದಲ್ಲಿ ಸುಮಾರು ಮೂರರಿಂದ ನಾಲ್ಕು ವರ್ಷಗಳಿಂದ ಅನಾರೋಗ್ಯ ದಿಂದ ಹಾಸಿಗೆಯಲ್ಲಿ ಬಳಲುತ್ತಿದ್ದು ಈ ದಿನ ನಿಧನರಾಗಿದ್ದಾರೆ. ಇವರು ಪತಿಯಾದ ಭಜನೆ ಚೌಡಪ್ಪ ಇವರು ಹೆಸರಾಂತ ಭಜನಾ ಕಲಾವಿದರಾಗಿರುವುದರಿಂದಚೌಡಪ್ಪ ಇವರ ಧರ್ಮ ಪತ್ನಿ ಯಾದ ಭಜನೆ ಹನುಮವ್ವ ಇವರು ನಿಧನ ಹೊಂದಿದ್ದು, ಇವರಿಗೆ 3 ಜನ ಗಂಡು ಮಕ್ಕಳು ಹಾಗೂ 3 ಜನ ಹೆಣ್ಣುಮಕ್ಕಳಿದ್ದು ಮೊಮ್ಮಕ್ಕಳು ಸೇರಿದಂತೆ,ಅಳಿಯಂದಿರು,ತುಂಬು ಕುಟುಂಬವನ್ನು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.   *ಅಂತ್ಯಕ್ರಿಯೆ*- ಏಪ್ರಿಲ್ -09-04-2025 ಬುಧವಾರ ರಂದು 12. ಘಂಟೆಗೆ ಕೂಡ್ಲಿಗಿ ಪಟ್ಟಣದ ಕಡೆಯ ಅಂಚಿನಲ್ಲಿರುವ ಶ್ರೀ ರಾಜೀವ್ ಗಾಂಧಿನಗರದ ಪಕ್ಕದಲ್ಲಿ ಬರುವ ಶಾಂತಿ ವನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. *ಸಂತಾಪ*- ಕೂಡ್ಲಿಗಿ , ಪಟ್ಟಣದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಂಘ ಹಾಗೂ ಮಾದಿಗ ದಂಡೋರ ಸಂಘ ಹಾಗೂ ದಲಿತ ಸಮುದಾಯದ ಮುಖಂಡರು ಗಳು, ಸಂಬಂಧಿಕರು ಹಾಗೂ ವಿವಿದ ಸಮುದಾಯದವರು ಪಟ್ಟಣದ ಸಮಸ್ತ ಗ್ರಾಮಸ್ಥರು. ಸೇರಿದಂತೆ, ವಿವಿದ ಸಮುದಾಯದವರು. ತಾಲೂಕಿನ ಎಲ್ಲಾ ದಲಿತ ಪರ ಸಂಘಟನೆಗಳು ಸೇರಿದಂತೆ ರೈತರು ಕಾರ್ಮಿಕರು ಮಹಿಳೆಯರ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು. ಪಟ್ಟ...

ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ ನಿಂದ ವಿಶ್ವ ನವಕಾರ ಮಂತ್ರ ಪಠಣ ಜೈನ ಸಾಹಿತ್ಯವು ಭಾರತದ ಬೌದ್ಧಿಕ ವೈಭವದ ಬೆನ್ನೆಲುಬು : ಪ್ರಧಾನಿ ನರೇಂದ್ರ ಮೋದಿ

ಇಮೇಜ್
  ಬೆಂಗಳೂರು, ಏ, 9; ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ – ಜೀತೊ ನಿಂದ ವಿಶ್ವ ನವಕಾರ ಮಂತ್ರ ದಿನಕ್ಕಾಗಿ ಮೆಗಾ ಜಾಗತಿಕ ಪಠಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು.  ಬೆಳಿಗ್ಗೆ 8 ರಿಂದ 9:36 ರವರೆಗೆ ಪವಿತ್ರ ನವಕಾರ ಮಂತ್ರವನ್ನು ಒಗ್ಗಟ್ಟಿನಿಂದ ಪಠಿಸಿತು. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ದೇಶದ 6 ಸಾವಿರ ಮತ್ತು ವಿವಿಧ 108 ದೇಶಗಳಲ್ಲಿ ಏಕಕಾಲದಲ್ಲಿ ಮಂತ್ರಪಠಣ ನಡೆಯಿತು.  ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ನವಕರ್ ಮಹಾಮಂತ್ರದ ತತ್ವಶಾಸ್ತ್ರವು ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನಕ್ಕೆ ಪೂರಕವಾಗಿದೆ. ಸ್ಥಳೀಯ ಉತ್ಪನ್ನಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಅಗತ್ಯವಿದೆ. ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆ ಸೇರಿದಂತೆ ಉತ್ತಮ ಯೋಗಕ್ಷೇಮಕ್ಕೆ 9 ಸಂಕಲ್ಪಗಳನ್ನು ಮಾಡುವಂತೆ ಜನತೆಗೆ ಮನವಿ ಮಾಡಿದರು.  ನೀರನ್ನು ಉಳಿಸುವುದು, ತಾಯಿಯ ಹೆಸರಿನಲ್ಲಿ ಮರವೊಂದನ್ನು ಪೋಷಿಸುವುದು, ಸ್ವಚ್ಛತೆಯ ಧ್ಯೇಯ, ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ, ದೇಶೀಯ ಪ್ರವಾಸೋದ್ಯಮ, ನೈಸರ್ಗಿಕ ಕೃಷಿ, ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದು, ಯೋಗ ಮತ್ತು ಕ್ರೀಡೆಗಳನ್ನು ಜೀವನದ ಭಾಗವಾಗಿಸುವುದು ಮತ್ತು ಬಡವರಿಗೆ ಸಹಾಯ ಮಾಡುವುದು ಇದರಲ್ಲಿ ಸೇರಿವೆ ಎಂದರು.  ಭಾರತದ ಇತಿಹಾಸ...

ದ್ವಿತೀಯ ಪಿಯು ಫಲಿತಾಂಶ: ಎಪಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಶೇ 92 ರಷ್ಟು ತೇರ್ಗಡೆ

ಇಮೇಜ್
  ಬೆಂಗಳೂರು, ಏ, 9; ಬೆಂಗಳೂರಿನ ಕನಕಪುರ ರಸ್ತೆಯ ಸೋಮನಹಳ್ಳಿಯ ಅನಂತ ಜ್ಞಾನಗಂಗೋತ್ರಿ ಕ್ಯಾಂಪಸ್‌ನಲ್ಲಿರುವ ಎಪಿಎಸ್ ಪಿಯು ಕಾಲೇಜ್ ಆಫ್ ಸೈನ್ಸ್ ಅಂಡ್ ಕಾಮರ್ಸ್, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ದ್ವಿತಿಯ ಪಿಯುಸಿಯಲ್ಲಿ ಸರಾಸರಿ ಶೇ 92ರಷ್ಟು ಫಲಿತಾಂಶವನ್ನು ದಾಖಲಿಸಿದೆ.   ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ. ವಿಷ್ಣು ಭರತ್ ಅಲಂಪಲ್ಲಿ ವಿದ್ಯಾರ್ಥಿಗಳನ್ನು ಅಭಿನಂಧಿಸಿದ್ದಾರೆ. ಎಪಿಎಸ್ ಎಜುಕೇಶನ್ ಟ್ರಸ್ಟ್ ಕಳೆದ 90 ವರ್ಷಗಳಿಂದ ಶಿಕ್ಷಣದ ಉದ್ದೇಶಕ್ಕಾಗಿ ಸಮರ್ಪಿತವಾಗಿದ್ದು, ಕೆಜಿಯಿಂದ ಪಿಜಿವರೆಗೆ ಗುಣಮಟ್ಟದ ಶೈಕ್ಷಣಿಕ ಸೇವೆಗಳನ್ನು ಒದಗಿಸುತ್ತಿದೆ ಎಂದಿದ್ದಾರೆ.  ಶೇಕಡಾ 100% ಫಲಿತಾಂಶವನ್ನು ಗುರಿಯಾಗಿಸಿಕೊಂಡು ಶೈಕ್ಷಣಿಕ ಚಟುವಟಿ ನಡೆಸಲಾಗಿತ್ತು. ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕೋರ್ಸ್‌ಗಳು ಸೇರಿದಂತೆ ನಗರ ಮತ್ತು ಸೋಮನಹಳ್ಳಿ ಕ್ಯಾಂಪಸ್‌ಗಳಲ್ಲಿ ಎಲ್ಲಾ ಕಾರ್ಯಕ್ರಮಗಳಿಗೆ ಪ್ರವೇಶಾವಕಾಶಗಳು ಮುಕ್ತವಾಗಿವೆ. ಮೊದಲು ಬಂದವರಿಗೆ ಆದ್ಯತೆಯ ಆಧಾರದ ಮೇಲೆ ಈ ತಿಂಗಳ ಅಂತ್ಯದವರೆಗೆ ಪ್ರವೇಶಾವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.

*ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಗಮನ: ಶಾಸಕ ಕೆ.ನೇಮಿರಾಜನಾಯ್ಕ*

ಇಮೇಜ್
ಕೊಟ್ಟೂರಿನ ಎಲ್‌ಬಿ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ನೇಮಿರಾಜನಾಯ್ಕ ಭೂಮಿ ಪೂಜೆ ನೆರವೇರಿಸಿದರು. "ಪಟ್ಟಣದಲ್ಲಿನ 20 ವಾರ್ಡ್‌ಗಳಲ್ಲಿ ಎಲ್ಲ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಇನ್ನೆರೆಡು ತಿಂಗಳಲ್ಲಿ ಅನುದಾನ ಕಲ್ಪಿಸಿ, ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಕೆ.ನೇಮಿರಾಜನಾಯ್ಕ ಹೇಳಿದರು" ಕೊಟ್ಟೂರು, ಪಟ್ಟಣದ ವಾರ್ಡ್ ಸಂಖ್ಯೆ 8, 10, 12 ಮತ್ತು 16ರಲ್ಲಿ 1.32 ಕೋಟಿ ರೂ.ಗಳ ಸಿಸಿ ರಸ್ತೆ ಕಾಮಗಾರಿಗಳಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಕಳೆದ 40 ವರ್ಷಗಳಿಂದ ಸರಕಾರಿ ಆಸ್ಪತ್ರೆ ಹಿಂಭಾಗದ ರಸ್ತೆ ಈವರೆಗೂ ಅಭಿವೃದ್ಧಿಯಾಗಿರಲಿಲ್ಲ ಇದೀಗ ರಸ್ತೆಯನ್ನು ಸಿಸಿ ರಸ್ತೆಯನ್ನಾಗಿಸಲಾಗುವುದು. ಅದರಂತೆ ಬಸವೇಶ್ವರ ಬಡಾವಣೆ, ದ.ರಾ.ಬೇಂದ್ರೆ ಶಾಲೆ, ಹಳೆ ಶೆಟ್ಟಿ ಹೋಟೆಲ್, ಬಾಲಾಜಿ ಕಲ್ಯಾಣ ಮಂಟಪ ರಸ್ತೆಗಳನ್ನು ಕೆಕೆಆರ್ ಡಿಬಿ ಮತ್ತು ಡಿಎಂಎಫ್ ಅನುದಾನದಲ್ಲಿ ಅಭಿವೃದ್ಧಿ ಮಾಡಲಾಗುವುದು. ಇನ್ನೆರೆಡು ತಿಂಗಳಲ್ಲಿ ವಾರ್ಡ್ಗೆ ಕೋಟಿ ರೂ.ಗಳಂತೆ ಅನುದಾನ ಕಲ್ಪಿಸಿ ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುವುದು ಎಂದರು. ತುಂಗಭದ್ರಾ ನದಿ ಹಿನ್ನೀರಿನ ಬನ್ನಿಗೋಳು ಜಾಕ್ ವೆಲ್‌ ನಿಂದ ಸದ್ಯ ಹ.ಬೊ.ಹಳ್ಳಿ, ಕೊಟ್ಟೂರು, ಕೂಡ್ಲಿಗಿ ಪಟ್ಟಣಗಳಿಗೆ ಕುಡಿವ ನೀರು ಸರಬರಾಜು ಮಾಡಲಾಗುತ್ತಿದೆ. ಅಮೃತ ಯೋಜನೆಯಡಿ ಪಟ್ಟಣಕ್ಕೆ ತುಂಗಭದ್ರಾ ನದಿ ಹಿನ್ನೀರಿನಿಂದ ಪ್ರತ್ಯೇಕವಾಗಿ ನೀರು ಸರಬರಾಜು ಮಾಡುವ ಯ...

*ದಲಿತರು ಮೌಡ್ಯಾಚರಣೆಗಳನ್ನು ಬಿಟ್ಟು ಅಂಬೇಡ್ಕರ್ ಮಾರ್ಗದಲ್ಲಿ ಸಾಗಬೇಕು: ರಾಮು ಹೋಳೆಪ್ಪನವರ್*

ಇಮೇಜ್
ಮಾನವಿ: ದಲಿತರು ಸಾವಿರಾರು ವರ್ಷಗಳ ಕಾಲ ದೇವರ ಅರಿಕೆಮಾಡಿಕೊಂಡು ಕೋಣ, ಕುರಿ ಬಲಿಕೊಡುತ್ತಿದ್ದರು. ಇಂತಹ ಅನೇಕ ಮೌಡ್ಯಾಚರಣೆ ಮತ್ತು ಮದ್ಯಪಾನ ಸೇವಿಸುವುದರಿಂದ ದೂರವಿರಬೇಕು. ಶಿಕ್ಷಣ ಪಡೆದು ಅಭಿವೃದ್ಧಿ ಹೊಂದಲು ಸಾಂಸ್ಕೃತಿಕವಾಗಿ ಬದಲಾಗಬೇಕೆಂದು ಹೇಳಿದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಮಾರ್ಗದಲ್ಲಿ ಸಾಗಬೇಕು ಎಂದು ಮಾನವಿ ಸರಕಾರಿ ಆಸ್ಪತ್ರೆಯ ವಿಕಿರಣ ಶಾಸ್ತ್ರ ಚಿತ್ರಣ ಅಧಿಕಾರಿ ರಾಮು ಹೋಳೆಪ್ಪನವರ್ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಮಾರಮ್ಮ - ಮಾರೆಪ್ಪ ಕೊಂಡಯ್ಯ ಇವರ ಮನೆಯಲ್ಲಿ ಬಹುಜನ ಸಂಘರ್ಷ ಸಮಿತಿಯಿಂದ ಶನಿವಾರ ಆಯೋಜಿಸಿದ್ದ, 114ನೇ ಮನೆ-ಮನೆಗೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡಿದರು. ಪುರಸಭೆ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ಸಂತೋಷಿ ಪಿ.ಜಯಪ್ರಕಾಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದೇಶದಲ್ಲಿ ಮಹಿಳೆಯರನ್ನು ಸೇವಕಿಯಾಗಿ, ಗಂಡನ ಗುಲಾಮಳಾಗಿ, ಅಸಹಾಯಕಿಯಾಗಿ ಕಾಣಲಾಗುತ್ತಿದ್ದರು. ಮಹಿಳೆ ಕೂಡ ಪುರುಷನಷ್ಟೇ ಸಮಾನಳು ಮತ್ತು ಸಮರ್ಥಳಾಗಿದ್ದಾಳೆ. ದೇಶದ ಪ್ರಧಾನಿಯಾಗಿದ್ದಾರೆ, ಮುಖ್ಯಮಂತ್ರಿಯಾಗಿದ್ದಾರೆ, ವಿಜ್ಞಾನಿಯಾಗಿ ಅಂತರಿಕ್ಷಕ್ಕೆ ಹಾರಿದ್ದಾರೆ. ಇಂತಹ ಅನೇಕ ಸಾಧನೆಗೈಯಲು ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಮುಕ್ತ ಅವಕಾಶಗಳನ್ನು ಸಂವಿಧಾನ ಬದ್ಧವಾಗಿ ಹಕ್ಕುಗಳನ್ನು ಕಲ್ಪಿಸಿಕೊಟ್ಟವರು ಬಾಬಾ ಸಾಹೇಬ್ ಅಂಬೇಡ್ಕರ್ ಎಂದರು. ಪ್ರತಿಯೊಬ್ಬರೂ ಶಿಕ್ಷಣಕ್ಕೆ ಆದ್ಯತೆ ನೀಡಬೇಕು...

ಲಿಂಗಸಗೂರು ತಾಲೂಕ ಆಡಳಿತದಿಂದ.ಸಮಾನತೆಯ ದೀಪ.ಹಸಿರು ಕ್ರಾಂತಿ ಹರಿಕಾರ ಬಾಬೂಜೀರವರ 118ನೇ ಜಯಂತೋತ್ಸವ. ಆಚರಣೆ.

ಇಮೇಜ್
  ಲಿಂಗಸಗೂರು:ಪಟ್ಟಣದ ಜೂನಿಯರ್ ಕಾಲೇಜ್ ಮೈದಾನದಲ್ಲಿ ತಾಲೂಕ ಆಡಳಿತ ವತಿಯಿಂದ. ದೇಶ ಕಂಡ ಆಪ್ರತಿಮಾ ನಾಯಕ ಡಾಕ್ಟರ್ ಬಾಬು ಜಗಜೀವನ್ ರಾಮ್ ರವರ 118ನೆಯ ಜಯಂತ್ಯೋತ್ಸವವನ್ನು ದೀಪಾ ಬೆಳಗಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಇದಕ್ಕೂ ಮುನ್ನ ಪ್ರಾರ್ಥನೆ ಗೀತೆ ಹಾಗೂ ಭಾರತದ ಸಂವಿಧಾನ ಪೀಠಿಕೆಯನ್ನು ಓದಲಾಯಿತು.ಹಾಗೂ ಬಾಬು ಜಗಜೀವನ್ ರಾಮ್ ರವರ ಭಾವಚಿತ್ರಕ್ಕೆ ಗಣ್ಯ ಮಾನ್ಯರಿಂದ ಹೂಮಾಲೆ ಹಾಗೂ ಪುಷ್ಪಾರ್ಚನೆ ಮಾಡಲಾಯಿತು. ಕಾರ್ಯಕ್ರಮದ ಪ್ರಸ್ತಾವಿಕ ನುಡಿಯನ್ನು ಶ್ರೀರವೀಂದ್ರ ಉಪ್ಪಾರ್ ಸಹಾಯಕ ನಿರ್ದೇಶಕರು ಗ್ರೇಡ್1ಸಮಾಜ ಕಲ್ಯಾಣ ಇಲಾಖೆ ಇವರು ಮಾತನಾಡಿ.ಭಾರತ ದೇಶದ ಇತಿಹಾಸವನ್ನು ಅವಲೋಕಿಸಿ ನೋಡಿದಾಗ ಶತಾಶತಮಾನಗಳಿಂದ. ಸಮಾನತೆಯಿಂದ ವಂಚಿತವಾದ ಸಮಾಜಕ್ಕೆ ನಿಜವಾದ ಸಾಮಾಜಿಕ ನ್ಯಾಯ.ಹಾರ್ದಿಕ.ರಾಜಕೀಯ. ಮತ್ತು ಇನ್ನಿತರ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲಿಕ್ಕೆ ನಮಗೆ ಮೂಲಭೂತವಾಗಿ ಸಂವಿಧಾನವೇ ಆಸೆಯೇ.ಸಂವಿಧಾನದ ಆಶಯದಂತೆ ಇಬ್ಬರು ಮಹಾನ್ ವ್ಯಕ್ತಿಗಳಗೀರುವ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್.ಹಗೂ ಡಾಕ್ಟರ್ ಬಾಬು ಜಗಜೀವನ್ ರಾಮ್(ಬಾಬೂಜಿ)ರವರು.ಇವರು ಈ ದೇಶದ ಎರಡು ಕಣ್ಣುಗಳಿದ್ದಂತೆ ಏಕೆಂದರೆ ನಮ್ಮ ಸಂವಿಧಾನದ ಅಡಿಯಲ್ಲಿ ಸಾಮಾಜಿಕ ಆರ್ಥಿಕ ರಾಜಕೀಯ ಮತ್ತು ಶೈಕ್ಷಣಿಕವಾಗಿ ಎಲ್ಲಾ ಜನಾಂಗದವರು ಜನರ ಅಭಿವೃದ್ಧಿ ಹೊಂದಬೇಕು ಹಾಗೂ ತುಳಿತಕ್ಕೆ ಒಳಗಾದ ಜನಾಂಗದವರು ಈ ಎಲ್ಲಾ ಸಮಾಜಿಕ ನ್ಯಾಯವನ್ನು ಪಡೆಯಬೇಕು ಎನ್...

ಬೆಲೆ ಏರಿಕೆ ಖಂಡಿಸಿ ಬಿಜೆಪಿ ಅಂಬೇಡ್ಕರ್ ವೃತ್ತ ಬಳಿ ಪ್ರತಿಭಟನೆ

ಇಮೇಜ್
ಮಸ್ಕಿ : ಹಾಲು, ಮೊಸರು ಸೇರಿದಂತೆ ಪೆಟ್ರೋಲ್‌ ಡಿಸೇಲ್‌ ದರ ಏರಿಕೆ ವಿರೋಧಿಸಿ ಮಸ್ಕಿ ಬಿಜೆಪಿ ಮಂಡಲ ವತಿಯಿಂದ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಗ್ರೇಡ್ 2 ತಹಶಿಲ್ದಾರರ ಮೂಲಕ ಮನವಿಯನ್ನು ಸಲ್ಲಿಸಿದರು. ಬಿಜೆಪಿ ಕಾರ್ಯಾಲಯದಿಂದ ಹಳೇ ಬಸ್ ನಿಲ್ದಾಣದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ವೃದ್ಧವರೆಗೆ ಕಾಲ್ನಡಿಗೆ ಮೂಲಕ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಬಂದು ವೃತ್ತದ ಬಳಿ ಸೇರಿ ಮೊದಲಿಗೆ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪರತಿಭಟಿಸುತ್ತಾ ಈ ವೇಳೆ ಮಾತನಾಡಿದ ಮಾಜಿ ಶಾಸಕ‌ ಪ್ರತಾಪ್ ಗೌಡ ಪಾಟೀಲ ರವರು ಕಾಂಗ್ರೆಸ್ ಸರಕಾರ ಪೆಟ್ರೋಲ್, ಡೀಸೆಲ್ ಬೆಲೆ ಸೇರಿದಂತೆ ಅಗತ್ಯ ವಸ್ತುಗಳನ್ನು ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡಿ ಲೂಟಿ ಹೊಡೆಯಲು ಆರಂಭಿಸಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಹೇಳೋದೊಂದು ಮಾಡೋದೊಂದಾಗಿದೆ.  ಮುಖ್ಯಮಂತ್ರಿಗಳು ಸುಳ್ಳು ಹೇಳುತ್ತಾ ಜನರನ್ನು ವಂಚಿಸುತ್ತಿದ್ದಾರೆ ಎಂದರು. ಮಂಡಲ ಅಧ್ಯಕ್ಷ ಶರಣ ಬಸವ ಸೊಪ್ಪಿಮಠ, ಮಲ್ಲಪ್ಪ ಅಂಕುಶದೂಡ್ಡಿ,ಸಿದ್ದಣ್ಣ ಹೂವಿನ ಬಾವಿ, ಕಾಂಗ್ರೆಸ್ ಸರಕಾರದ ಬೆಲೆ ಏರಿಕೆ ವಿರುದ್ಧ ಮಾತನಾಡಿದರು. ಪ್ರತಿಭಟನೆಯಲ್ಲಿ ಬಿಜೆಪಿ ಪಕ್ಷದ, ಹಿರಿಯ ನಾಯಕರು, ಬಿಜೆಪಿ ಪದಾಧಿಕಾರಿಗಳು ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.

ಡಾ. ಬಾಬು ಜಗಜೀವನ್ ರಾಮ್ ಜೀವನ ಚರಿತ್ರೆ ವಿಶೇಷದಾಯಕ

ಇಮೇಜ್
ಬಾಬು ಜಗಜೀವನ್ ರಾಮ್ ಜಗತ್ಪ್ರಸಿದ್ಧ ಭಾರತದ ನಾಯಕ ,ಸ್ವತಂತ್ರ ಹೋರಾಟಗಾರರು, ಸಮಾನತೆಯ ಹರಿಕಾರರು, ಹಸಿರು ಕ್ರಾಂತಿಯ ಹರಿಕಾರ, ಬಡತನ ನಿರ್ಮೂಲನ ನಾಯಕ ಸಂವಿಧಾನ ರಚನಾ ಸಭೆಯ ಪ್ರಮುಖ ಸದಸ್ಯರು ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ ಧೀಮಂತ ವ್ಯಕ್ತಿ .ಹೀಗೆ ಇವರ ಸಾಧನೆಯ ಕ್ಷೇತ್ರಗಳು ಅನೇಕ ವೈವಿಧ್ಯಮಯ ಸಾಧನೆಗೈದ ಸದಾ ಸ್ಮರಣೆಯ ವ್ಯಕ್ತಿ ಬಾಬು ಜಗಜೀವನ್ ರಾಮ್ ಅವರ ಜಯಂತಿಯ ಸಂದರ್ಭವಾಗಿ ಅವರ ಕಾಲಘಟ್ಟದಲ್ಲಿ ನಡೆದ ಕೆಲವು ಸಂದರ್ಭಗಳನ್ನು ನೆನೆಸಿಕೊಳ್ಳುವುದು ಪ್ರಸ್ತುತ ಎನಿಸುತ್ತಿದೆ. ಬಾಲ್ಯ ಜೀವನ:- ಇವರ ತಂದೆ ಶೋಭಿರಾಮ್ ಮತ್ತು ತಾಯಿ ವಸಂತಿ ದೇವಿ. ಈ ದಂಪತಿಗಳಿಗೆ ವಸಂತ ಮಾಸದ ಏಪ್ರಿಲ್ ೫  ೧೯೦೮ರಂದು ಬಿಹಾರದ  ಚಾಂದ್ ವಿ ಗ್ರಾಮದಲ್ಲಿ ಭಾರತದ ಭಾಗ್ಯವಾಗಿ ಜನಿಸಿದ ಜಗಜೀವನ್ ರಾಮ್ ಜನನಿ ಜನಕರು ಜನ್ಮಭೂಮಿಗೆ ತಮ್ಮ ಸಾಧನೆಗಳ ಮೂಲಕ ಸಾರ್ಥಕ ಜೀವನ ನಡೆಸಿದರು. ಶಿಕ್ಷಣ:- ೧೯೧೪ ರಲ್ಲಿ ಸ್ಥಳೀಯವಾಗಿ ಶಿಕ್ಷಣವನ್ನು ಪಡೆದ ಇವರು. ನಂತರ ಅರ ಎಂಬಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪಡೆದರು. ಆದರೆ ಅಲ್ಲಿ ಶಿಕ್ಷಣ ದಲ್ಲಿ ಸಮಾನತೆಯನ್ನು ಮಾತಿನಲ್ಲಿ ನೋಡುತ್ತಿದ್ದರು. ಆದರೆ ಕಾರ್ಯಗಳಲ್ಲಿ ನೋಡಿದರೆ ದಲಿತರಿಗೆ ಒಂದು ಹಿಂದುಗಳಿಗೆ ಒಂದು ಮುಸ್ಲಿಮರಿಗೆ ಒಂದು ಪ್ರತ್ಯೇಕ ಗಡಿಗೆಗಳನ್ನು ಕುಡಿಯುವ ನೀರಿಗಾಗಿ ಇಟ್ಟಾಗ. ಇದು ಸಮಾನತೆಯ ಮತ್ತು ದೇಶದ ಸಮಗ್ರತೆ ಮತ್ತು ಐಕ್ಯತೆಗೆ ಭಂಗ ತರುವುದು ಎಂದು ಗಡಿಗೆಗಳು ತೆಗೆಯುವವರಿಗೆ ಇಟ್ಟ ಪ್ರತಿ...

ಬಾಬು ಜಗಜೀವನ್ ರಾಂ ಬಗ್ಗೆ ಹೆಚ್ಚು ತಿಳಿಯಿರಿ

ಇಮೇಜ್
ಬಳ್ಳಾರಿ: ಡಾ.ಬಾಬು ಜಗಜೀವನ್ ರಾಂ ರವರ ಜಯಂತಿ ನಿಮಿತ್ತ ಇಂದು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ನಮನ ಸಲ್ಲಿಸಲಾಯಿತು.  ಮಾಲಾರ್ಪಣೆ ಬಳಿಕ ಮಾತನಾಡಿದ ಕೆಪಿಸಿಸಿ ವಕ್ತಾರ  ವೆಂಕಟೇಶ್ ಹೆಗಡೆ, ಭಾರತದ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿ ಅಂದರೆ 30 ವರ್ಷ ಸಚಿವರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಬಾಬು ಜಗಜೀವನ್ ರಾಮ್ ರವರುದು, ನೆಹರು ಸಂಪುಟದಲ್ಲಿ ಅತ್ಯಂತ ಕಿರಿ ವಯಸ್ಸಿನ ಸಚಿವ ಎಂಬ ಹೆಗ್ಗಳಿಕೆ ಅವರದ್ದು, ಉಪ ಪ್ರಧಾನಿ ಆಗಿ ಹಸಿರು ಕ್ರಾಂತಿ ಮಾಡಿದ ಮಹನೀಯ. ಆಹಾರ ಸಮಸ್ಯೆ ಎದುರಾದಾಗ ಎದೆಗುಂದದೆ ಸವಾಲಾಗಿ ಸ್ವೀಕರಿಸಿದ ಸಚಿವ. ಹಿಂದುಳಿದವರು ಎಂಬ ಕಾರಣಕ್ಕೆ ಅವರ ಪರ ಹೆಚ್ಚು ಪ್ರಚಾರ ಮಾಡಲಾಗಲಿಲ್ಲ ಎಂದರು. ಅಂಬೇಡ್ಕರ್, ಜಗಜೀವನ್ ರಾಮ್ ಈ ದೇಶದ ದೊಡ್ಡ ಆಸ್ತಿ. ನಾವು ಯುವ ಜನಾಂಗಕ್ಕೆ ಇದನ್ನು ಹೇಳಬೇಕಿದೆ. ಸ್ವಾಭಿಮಾನ ಬೆಳೆಸಿಕೊಳ್ಳಲು ಇಂತಹ ನಾಯಕರ ಬಗ್ಗೆ ಹೆಚ್ಚು ಹೇಳಬೇಕು ಎಂದರು.   ಎಂ,ಎರುಕುಲಸ್ವಾಮಿ, ಅಧ್ಯಕ್ಷರು, ಪರಿಶಿಷ್ಟ ಜಾತಿ ಕಾಂಗ್ರೆಸ್ ವಿಭಾಗ, ಮಲ್ಲಿಕಾರ್ಜುನ ಬರಿಮರ, ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಬಳ್ಳಾರಿ. ಟಿ.ಆನಂದ್, ರಾಜ, ತಿಪ್ಪೇಸ್ವಾಮಿ, ರವಿಕುಮಾರ್ ಇದ್ದರು.

ಸರ್ಕಾರಿ ನೌಕರರು ಮತ್ತು ಕುಟುಂಬ ವರ್ಗದವರಿಗೆಉಚಿತ ಆರೋಗ್ಯ ತಪಾಸಣೆ ಶಿಬಿರ : ಸಿ.ಜೋತಾನ್

ಇಮೇಜ್
   ಮಸ್ಕಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕ ಶಾಖೆ ಮಸ್ಕಿ ಇವರುಗಳ ಸಂಯುಕ್ತಾಶ್ರಯದಲ್ಲಿ  ತಾಲೂಕಿನ ಸಮಸ್ತ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬ ವರ್ಗದವರಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏ.05 ಶನಿವಾರ ರಂದು ಪಟ್ಟಣದ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ಕಲ್ಯಾಣ ಮಂಟಪ ಆವರಣದಲ್ಲಿ ಏರ್ಪಡಿಸಲಾಗಿದ್ದು ಹೃದಯ ಸಂಬಂಧಿ ಕಾಯಿಲೆ, ನರರೋಗ, ಮಧುಮೇಹ, ಕ್ಯಾನ್ಸರ್, ಕಣ್ಣಿನ ಸಮಸ್ಯೆ,ಸ್ತ್ರೀ ರೋಗ ಸಮಸ್ಯೆ ಸೇರಿದಂತೆ ಅನೇಕ ಕಾಯಿಲೆಗಳಿಗೆ ಉಚಿತವಾಗಿ ತಪಾಸಣೆ ಮಾಡಿ ಅವಶ್ಯವಿದ್ದಲ್ಲಿ ಉಚಿತ ಶಸ್ತ್ರಚಿಕಿತ್ಸೆ ಸಹ ಮಾಡಲಾಗುವುದು ಎಂದು ನೌಕರರ ಸಂಘದ ಅಧ್ಯಕ್ಷ ಪಂಪಾಪತಿ ಹೂಗಾರ ರವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಉಚಿತ ಆರೋಗ್ಯ ಶಿಬಿರಕ್ಕೆ ಬೆಂಗಳೂರಿನ ವೈದೇಹಿ ಆಸ್ಪತ್ರೆಯ ಖ್ಯಾತ ವೈದ್ಯರಾದ ಕೆ.ಮಲ್ಲಿಕಾರ್ಜುನ ಹಚ್ಚೂಳ್ಳಿ ರವರು ಆಗಮಿಸುತ್ತಿದ್ದು ತಾಲೂಕಿನ ಎಲ್ಲಾ ಸರಕಾರಿ ನೌಕರರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನೌಕರರ ಸಂಘದ ಕಾರ್ಯದರ್ಶಿ ಚನ್ನವೀರ ಜೋತಾನ್ ರವರು ಮನವಿ ಮಾಡಿದರು.

ಹಿರೇನಗನೂರು ಹಾಗೂ ಚುಕ್ಕನಟ್ಟಿ ಗ್ರಾಮದ ಮುಸ್ಲಿಂ ಬಾಂಧವರಿಂದ.ಈದ್ ಉಲ್ ಫಿತರ್ ಆಚರಣೆ.

ಇಮೇಜ್
  ಹಟ್ಟಿ ಚಿನ್ನದ ಗಣಿ: ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಸಮೀಪದ ಹಿರೇನಗನೂರು ಹಾಗೂ ಚುಕ್ಕನಟ್ಟಿ ಗ್ರಾಮದ ಮುಸ್ಲಿಂ ಬಾಂಧವರು ಶೃದ್ಧಾಭಕ್ತಿಯೊಂದಿಗೆ ಸಂಭ್ರಮದಿಂದ ರಂಜಾನ್ ಹಬ್ಬ ಆಚರಿಸಿದರು.  ಬೆಳಗಿನಿಂದಲೇ ಎರಡು ಗ್ರಾಮದ ಮುಸ್ಲಿಂ ಬಾಂಧವರು ಗ್ರಾಮದ ಹೊರವಲಯದ ಈದ್ಗಾ ಮೈದಾನಕ್ಕೆ ತೆರಳಿದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.  ಇಸ್ಲಾಂ ಧರ್ಮ ಗುರುಗಳಾದ ಆಫೀಜ್ ಅಬ್ದುಲ್ ರೆಹಮಾನ್ ಸಾಬ್ ಮಾತನಾಡಿ.ಈದ್ ಉಲ್ ಫಿತಾರ್ ಎಂದರೆ?ಉಪವಾಸ ಮುರಿಯುವ ಹಬ್ಬ.ಇದು ರಂಜಾನ್ ಮಾಸದ ಪೂರ್ಣಗೊಳಿಸುವಿಕೆಯ ಆಚರಣೆಯಾಗಿದೆ.ಈ ದಿನ ಪೂಜೆ ಧ್ಯಾನ ಮತ್ತು ತಮ್ಮನ್ನು ತಾನು ತಿಳಿದುಕೊಳ್ಳುವ ಮತ್ತು ಅರ್ಥ ಮಾಡಿಕೊಳ್ಳುವ ತಿಂಗಳಾಗಿರುತ್ತದೆ.ಇದನ್ನು ಇಸ್ಲಾಮಿನ ಐದು ಪ್ರಮುಖ ಬೋಧನೆಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ.ಅಲ್ಲದೆ ಇದನ್ನು ಕೃತಜ್ಞತಾ ಪ್ರತಿಫಲ ಮತ್ತು ಸಂತೋಷದ ಸಂಕೇತವಾಗಿ ಆಚರಿಸಲಾಗುತ್ತದೆ.ಅದೇ ರೀತಿ ರಮ್ ದಾನ್ ಅಥವಾ ರಂಜಾನ್ ಪದದ ಅರ್ಥ ರಮ್ ದಾನ್ ಎಂದರೆ.ಅರಬ್ ಬಾಷೆಯಲ್ಲಿ ಅತಿಯಾದ ಶಾಖ ಎಂದರ್ಥ." ಬಿಸಿಲಿಗೆ ಕಾದ ಮರಳು"ಎಂಬ ಅರ್ಥವನ್ನು ಹೊಂದಿದೆ.ಬಿಸಿಲಿನ ಶಾಖ.ನೆಲವನ್ನು ಸುಡುವಂತೆ.ಮನುಷ್ಯನಲ್ಲಿ ಉದ್ಭವಿಸುವ ಹಸಿವಿನ ಶಾಖ ಹಾಗೂ ಮಾನವನಲ್ಲಿನ ಕೆಟ್ಟ ಆಲೋಚನೆಗಳನ್ನು ಸುಟ್ಟು ಹಾಕುತ್ತದೆ.ಎಂಬ ನಂಬಿಕೆ ನಮ್ಮದು.ಈ ಹಬ್ಬ ಕೇವಲ ಉಪವಾಸವಲ್ಲ.ಇದೊಂದು ಮುಸ್ಲಿಂ ಬಾಂಧವರ ತಪಸ್ಸು ಆಗಿದೆ.ಹಾಗೂ ರಂಜಾನ...