ಮೆಘಾಸ್ಟಾರ್ ಚಿರಂಜೀವಿ ಹುಟ್ಟುಹಬ್ಬದ ನಿಮಿತ್ತ ಅಭಿಮಾನಿಗಳಿಂದ ರಕ್ತದಾನ ಶಿಬಿರ
ಬಳ್ಳಾರಿ : ನಗರದಲ್ಲಿ 16ನೇ ವಾರ್ಡ್ನ ಪವನ್ ಹೊಟೆಲ್ ಹಿಂದುಗಡೆ ಇರುವ ರೋಟರಿ ಕ್ಲಬ್ ಸಭಾಂಗಣದಲ್ಲಿ ಭಾನುವಾರದಂದು ಅಖಿಲ ಕರ್ನಾಟಕ ಚಿರಂಜೀವಿ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷರಾದ ಕೆ.ರಾಜು ನೇತೃತ್ವದಲ್ಲಿ ರಕ್ತದಾನ ಶಿಬಿರವನ್ನು ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾವಹಿಸಿದ್ದ ರೋಟರಿ ಕ್ಲಬ್ ಕಾರ್ಯದರ್ಶಿ ಕೆ ವಿಜಯಭಾಸ್ಕರ್ ಮಾತನಾಡಿ, ಚಿರಂಜೀವಿ ಸಹ ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮೀತವಾಗದೆ, ಚಿರಂಜೀವಿ ಐ ಬ್ಯಾಂಕ್ ಸ್ಥಾಪನೆ, ಪ್ರತಿ ತಿಂಗಳು ರಕ್ತದಾನ ಶಿಬಿರಗಳನ್ನು ನಡೆಸುತ್ತಾ ಸಾರ್ವಜನಿಕ ಸೇವೆಯಲ್ಲಿ ತೊಡಗಿದ್ದಾರೆ.
ಅದೇ ರೀತಿ ಬಳ್ಳಾರಿಯಲ್ಲಿ ಅವರ ಅಭಿಮಾನಿಗಳ ಸಂಘದಿಂದ ಈ ರೀತಿ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಸಂತಸದ ವಿಷಯ, ಪ್ರತಿಯೊಬ್ಬರು ರಕ್ತದಾನ ಮಾಡಿ ಒಂದು ಜೀವವನ್ನು ಉಳಿಸಬೇಕು, ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು, ಇದರಿಂದ ಯವುದೇ ಅಡ್ಡಪರಿಣಾಮಗಳಾಗುವುದಿಲ್ಲ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ನಾಗರತ್ನ ಪ್ರಸಾದ್, ಚಿರಂಜೀವಿ ಅಭಿಮಾನಿಗಳ ಸಂಘದ, ಎಸ್.ಆರ್.ಪಿ ನಾಗರಾಜ್, ರಾಜೇಶ್, ಯುವರಾಜ್, ಮಹೇಶ್, ನಾಗರಾಜ್, ಅನಿಲ್, ಉಮೇಶ್, ಪ್ರಭು, ರೋಟರಿ ಕ್ಲಬ್ನ ಅಧ್ಯಕ್ಷರಾದ ಸುರೇಶ್, ಜಂಟಿ ಕಾರ್ಯದರ್ಶಿ ಬಿ.ಎಂ.ಡಿ ಮಝ್ಹರ್ ಬಾಷಾ, ಸದಸ್ಯರಾದ ತಿಪ್ಪೇಸ್ವಾಮಿ, ರೋಟರಿ ಇನ್ನರ್ವ್ಹೀಲ್ ಕ್ಲಬ್ ಅಧ್ಯಕ್ಷರಾದ ಎನ್.ಟಿ ಲಕ್ಷ್ಮಿಪ್ರಿಯ, ಸದಸ್ಯರಾದ ಅನಿತಾ ಜೈನ್, ರೆಡ್ಕ್ರಾಸ್ ಸಂಸ್ಥೆಯ ಶಕೀಬ್, ವಲಿಭಾಷಾ, ವಿಮ್ಸ್ ಸಂತೋಷ್, ಮೆಡಿಕಲ್ ವಿದ್ಯಾರ್ಥಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು. ಈ ಶಿಬಿರದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಯುವಕ ಯುವತಿಯರು ರಕ್ತದಾನ ಮಾಡಿದರು.
ಮಾಹಿತಿ ಹಂಚಿಕೊಂಡವರು;ಕೆ ರಾಜು, ಜಿಲ್ಲಾಧ್ಯಕ್ಷರು, ಮೇಘಫ್ಯಾನ್ಸ್ ಅಸೋಸಿಯೇಷನ್, ಬಳ್ಳಾರಿ 9448006474
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ