"ದಲಿತ ಕಾಲೋನಿಯ ಜನರ ಸಮಸ್ಯೆಗೆ ಸ್ಪಂದಿಸದೆ: ಮುಖ್ಯ ಅಧಿಕಾರಿ ಎ ನಸರುಲ್ಲಾ "
ಕೊಟ್ಟೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹ್ಯಾಳ್ಯ ರಸ್ತೆ ಯಲ್ಲಿ ಇರುವ ದಲಿತರ ಕಾಲೋನಿ ಹತ್ತಿರದ ರಾಜಕಾಲುವೆಯನ್ನು ಸ್ವಚ್ಚತೆ ಗೊಳಿಸಿ ಬ್ಲೀಚಿಂಗ್ ಪೌಡರ್ ಸಿಂಪಡಿಸಿದರು.
ಹಗರಿಬೊಮ್ಮನಹಳ್ಳಿ ರಸ್ತೆಯ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು.ಈ ಕಳಪೆ ಕಾಮಗಾರಿಯಿಂದ ದಲಿತರ ಕಾಲೋನಿ ಹ್ಯಾಳ್ಯ ರಸ್ತೆ ಯಲ್ಲಿ ಇರುವ ಸುಮಾರು 300 ದಲಿತ ಮನೆಗಳು ಚರಂಡಿಯ ಕೊಳಚೆ ನೀರಿನಿಂದ ಜನರು ತೊಂದರೆಯಿಂದ ರೋಷಿ ಹೋಗಿದ್ದರು.
ಇಷ್ಟೆಲ್ಲ ಕಾಲೋನಿಯ ಜನರಿಗೆ ತೊಂದರೆ ಆದರೂ ಕಾಮಗಾರಿಯಿಂದ ಕೊಳಚೆ ನೀರು ನುಗ್ಗಿ ರೋಗ ಅರಡುವ ಭೀತಿ ಎದುರಾಗಿದ್ದು .ಲೋಕೋಪಯೋಗಿ ಇಲಾಖೆಯ ವಿರುದ್ಧ ದಲಿತ ಮುಖಂಡರು ಹಾಗೂ ಕಾಲೋನಿಯ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ವರದಿಗೆ ಸ್ಪಂದಿಸಿದ ಸ್ಥಳೀಯ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎ ನಸರುಲ್ಲಾ ಅವರು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಸ್ವಚ್ಛತೆಗೊಳಿಸಿದರು.
ಕೊಟ್ -1
ಇದು ಯಾವುದಕ್ಕೂ ಸ್ಪಂದಿಸದೆ ಇರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಕ್ತವಾಗಿ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡರಾದ ಅಜ್ಜಪ್ಪ ಆಕ್ರೋಶಗೊಂಡರು.



ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ