ನೀಲಿ ಚಿತ್ರಗಳ ಲಿಂಕ್ ಹಾವಳಿಗೆ ಬೆಚ್ಚಿದ ಮಸ್ಕಿ ವಾಟ್ಸಾಪ್ ಬಳಕೆದಾರರು

 

ಮಸ್ಕಿ : 











 

ಮೊಬೈಲ್‌ಫೋನ್‌ ಈ ಕಾಲದ ಸಂಪತ್ತು ಎಂದರೆ ತಪ್ಪಾಗಲಾರದೇನೊ. ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ ಮಾಹಿತಿ, ಇ–ಮೇಲ್‌, ಆನ್‌ಲೈನ್‌ ಬ್ಯಾಂಕಿಂಗ್‌. ಹೀಗೆ ಖಾಸಗಿ ಮತ್ತು ಹಣಕಾಸಿಗೆ ಸಂಬಂಧಿಸಿದ ಮಾಹಿತಿಗಳೆಲ್ಲವೂ ಇದರಲ್ಲಿಯೇ ಇಟ್ಟುಕೊಳ್ಳುತ್ತೇವೆ. ಹೀಗಿರುವಾಗ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವೂ ಇದೆಯಲ್ಲವೇ.?

ಮೊಬೈಲ್‌ಗೆ ಬರುವ ಅಪರಿಚಿತ ಸಂದೇಶಗಳ ಲಿಂಕ್‌ ಕ್ಲಿಕ್‌ ಮಾಡುವುದರಿಂದ ಹ್ಯಾಕ್‌ ಆಗುತ್ತದೆ. ಇಂತಹ ಲಿಂಕ್‌ಗಳು ಯಾವುದಾದರೂ ಹೊಸ ಉತ್ಪನ್ನ ಅಥವಾ ರಿಯಾಯಿತಿ ಮಾರಾಟದ ಆಮಿಷಗಳಿಂದ ಕೂಡಿರುತ್ತವೆ. ಅದನ್ನು ಕ್ಲಿಕ್ ಮಾಡುವಂತೆ ಸೆಳೆಯುತ್ತವೆ. ಅದನ್ನು ಕ್ಲಿಕ್ ಮಾಡಿದಾಕ್ಷಣ ನಮ್ಮ ಫೋನ್‌ನಲ್ಲಿರುವ ಮಾಹಿತಿ ಪಡೆಯುವ ಅವಕಾಶ ಮಾಡಿಕೊಟ್ಟಂತಾಗುತ್ತದೆ.

ಇದಕ್ಕೆ ಉದಾಹರಣೆ ಎಂಬುತೆ ಪಟ್ಟಣದ ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ ನೀಲಿ ಚಿತ್ರಗಳನ್ನು ಒಳಗೊಂಡ ಲಿಂಕ್ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಮುಜುಗರ ಉಂಟು ಮಾಡುತ್ತಿದೆ.

ಭಾನುವಾರ ಸಂಜೆಯಿಂದ ನೀಲಿಚಿತ್ರಗಳ ಲಿಂಕ್ ಹರಿದಾಡುತ್ತಿದೆ. ಕುತೂಹಲಕ್ಕೆ ಲಿಂಕ್ ಒತ್ತಿದರೆ, ಕ್ಷಣಾರ್ಧದಲ್ಲಿ ಸ್ವೀಟ್ ಬೇಬಿ ಹೆಸರಿನಲ್ಲಿ ನೀಲಿ ಚಿತ್ರಗಳು ಡೌನ್ ಲೋಡ್ ಆಗುತ್ತವೆ. ಅಲ್ಲದೇ ಡಿಪಿಯೂ ಚೇಂಚ್ ಆಗುತ್ತಿದೆ. ಅನೇಕರು ಲಿಂಕ್ ಒತ್ತಿ ಹೌಹಾರಿದ್ದಾರೆ.

ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ ನೀಲಿ ಚಿತ್ರಗಳಿಂದ ಗ್ರೂಪ್ ಗಳಲ್ಲಿ ಇರುವವರಿಗೆ ಇರಿಸು- ಮೂರಿಸು ಆಗುತ್ತಿದೆ ವಾಟ್ಸಾಪ್ ಬಳಕೆದಾರರು ಬೆಚ್ಚಿ ಬಿದ್ದಿದ್ದಾರೆ.

ಜಂಗಮ ವಧುವರ ವೇದಿಕೆ, ವೀರಶೈವ ಜಂಗಮ ಸಮಾಜ, ಹೀಗೆ ಅನೇಕ ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ ನೀಲಿ ಚಿತ್ರ ಗಳಿಂದಾಗಿ ಭಯದ ವಾತಾವರಣ ನಿರ್ಮಾಣವಾಗಿದ್ದು ಗ್ರೂಪ್ ಗಳಲ್ಲಿ ಇರುವ ಕೇಲವು ವ್ಯಕ್ತಿಗಳು ಪೊಲೀಸ ಠಾಣೆ ಮೆಟ್ಟಿಲು ಏರಿದ್ದಾರೆ.

ಆದಷ್ಟೂ ಬೇಗನೇ ನೀಲಿ ಚಿತ್ರಗಳ ವಿರುದ್ಧ ಸೈಬರ್ ಕ್ರೈಮ್ ಪೊಲೀಸರು ಎಚ್ಚೆತ್ತು ಆನ್ಲೈನ್ ಲಿಂಕ್ ಗಳ ಹರಿದಾಟಕ್ಕೆ ಬ್ರೇಕ್ ಹಾಕಬೇಕಿದೆ ಎಂದು ಕರ್ನಾಟಕ ರೈತ ಸಂಘದ ಮಾರುತಿ ಜಿನ್ನಾಪುರ,

ಸಂತೋಷ ಹಿರೇದಿನ್ನಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಮಲ್ಲಪ್ಪ ಎಸ್ ಗೋನಾಳ ರವರು ಪತ್ರಿಕೆ ಮೂಲಕ ಮನವಿ ಮಾಡಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*