ಒಂದೇ ರಸ್ತೆಗೆ ಎರಡೆರೆದು ಬಾರಿ ಭೂಮಿಪೂಜೆ ಕಾಮಗಾರಿ ಪ್ರಾರಂಭಿಸಿದ್ದೇವೆಂದು ಹಣ ಲೂಟಿ ಹೊಡೆಯುವ ಹುನ್ನಾರ : ಆರೋಪ
ಮಸ್ಕಿ : ತಾಲ್ಲೂಕಿನ ಮುದಬಾಳ ಕ್ರಾಸ್ – ಮಾರಲದಿನ್ನಿ ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು ಸಾರ್ವಜನಿಕ ರಾದ ಶರಣಬಸವ ಎಂಬವರು 18/10/2022 ರಂದು ಲೋಕಾಯುಕ್ತ ಕಛೇರಿಯಲ್ಲಿ ದೂರು ದಾಖಲು ಮಾಡಿದ್ದಾರೆ.
ಹೌದು ಮುದಬಾಳ ಕ್ರಾಸ್ ನಿಂದ ಮಾರಲದಿನ್ನಿ ರಸ್ತೆ ಡಾಂಬರು ಹಾಕಿದ ದಿನವೇ ಕಿತ್ತು ಹೋಗಿದೆ.ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರಿಂಗ್ ವಿಭಾಗದಿಂದ ಬಿಆರ್ಜಿಎಫ್ ಯೋಜನೆಯ ₹1.60 ಕೋಟಿ ವೆಚ್ಚದಲ್ಲಿ 4.5 ಕಿ.ಮೀ ರಸ್ತೆ ಡಾಂಬರೀಕರಣಕ್ಕೆ ರಾಯಚೂರು ಮೂಲದ ನರಸರೆಡ್ಡಿ ಎನ್ನುವ ಗುತ್ತಿಗೆದಾರರಿಗೆ ಗುತ್ತಿಗೆ ನೀಡಲಾಗಿತ್ತು.
ಕಳಪೆ ಕಾಮಗಾರಿ ಕಾರಣಕ್ಕೆ ರಸ್ತೆ ಹಾಳಾಗಿದೆ ಎಂದು ಆರೋಪಿಸಿ ಕಾಟಗಲ್, ಉಸ್ಕಿಹಾಳ ಸೇರಿ ವಿವಿಧ ಗ್ರಾಮಗಳ ಗ್ರಾಮಸ್ಥರು ಕಾಮಗಾರಿ ಬಂದ್ ಮಾಡಿಸಿ ರಸ್ತೆ ಮೇಲೆಯೇ ಹೋರಾಟ ಮಾಡಿದ್ದರು.
ಎಫ್ ಶಿವಕುಮಾರ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಲಿಂಗಸ್ಗೂರು ಇವರು ಅಪರ ನಿಭಂದಕರು ವಿಚಾರಣೆಗಳು -5
ಕರ್ನಾಟಕ ಲೋಕಾಯುಕ್ತರು ಬೆಂಗಳೂರು ಇವರಿಗೆ ಯಾವುದೇ ರೀತಿಯ ಕಳಪೆ ಕಾಮಗಾರಿ ಆಗಿರುವುದಿಲ್ಲ ಎಂದು ವರದಿಯನ್ನು ಸಲ್ಲಿಸಿದರು.
ದೂರಿನ ಮೇರೆಗೆ ಸ್ಥಳಕ್ಕೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ಮಾಡಿ ಕಾಮಗಾರಿಯ ಗುಣಮಟ್ಟವನ್ನು ವೀಕ್ಷಣೆ ಮಾಡಿದ್ದರು. ಆದರೆ ವರದಿ ಯಾವ ಹಂತದಲ್ಲಿ ಇದೆ ಎಂಬುದು ಗೌಪ್ಯವಾಗಿದೆ.
ಕ್ಷೇತ್ರದಲ್ಲಿ ಈ ರೀತಿಯಲ್ಲಿ ಇನ್ನೂ ಎಷ್ಟು ಕಾಮಗಾರಿ ಕೆಲಸಗಳು ಇದೇ ರೀತಿಯಲ್ಲಿ ನಡೆಯುತ್ತವೆ ಎಂದು ಸಾರ್ವಜನಿಕ ಆರೋಪಿಸಿದ್ದಾರೆ
ಕ್ಷೇತ್ರದ ಮೇಲೆ ಬರುವ ಅನೇಕ ರೀತಿಯ ಕಾಮಗಾರಿ ಕೆಲಸದ ಗುಣಮಟ್ಟದ ಬಗ್ಗೆ ಸೂಕ್ತ ನ್ಯಾಯಾಂಗ ತನಿಖೆ ಮಾಡಿದಾಗ ಸತ್ಯ ಹೊರಬರುತ್ತದೆ ಎಂದು ದಲಿತ ಸಂಘರ್ಷ ಸಮಿತಿ ರಾಯಚೂರು ಜಿಲ್ಲೆ ಅಧ್ಯಕ್ಷ ಮಲ್ಲಪ್ಪ ಎಸ್ ಗೋನಾಳ ರವರ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಲೋಕಾಯುಕ್ತ ತನಿಖೆ ಹಂತದಲ್ಲಿದೆ ಎಂದು ಉಪಲೋಕ್ ಜಿಎಲ್ ಬಿ 4171 ಎಂಬ ಲೋಕಾಯುಕ್ತ ದೂರಿನ ಸಂಖ್ಯೆಯ ಅರ್ಜಿಯ ಸ್ಥಿತಿಯು ಹೇಳುತ್ತಿದ್ದು.
ಸೋಮವಾರ ಪುನಃ ಮತ್ತೆ ಅದೇ ರಸ್ತೆಯಲ್ಲಿ ಮತ್ತೆ ಕಾಮಗಾರಿಗೆ ಶಂಕು ಸ್ಥಾಪನೆಯನ್ನು ಮಾಡಿದ್ದಾರೆ. ಆದ್ದರಿಂದ ಅಂದಿನ ಕಾಮಗಾರಿಯ ಗುತ್ತಿಗೆದಾರರಾದ ನರಸರೆಡ್ಡಿ ರವರ ಲೈಸನ್ಸ್ ಅನ್ನು ಕಪ್ಪು ಪಟ್ಟಿಗೆ ಸೇರಿಸಿ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಫ್ ಶಿವಕುಮಾರ್ ಹಾಗೂ ಕಿರಿಯ ಇಂಜಿನಿಯರ್ ತ್ರಿವೇಣಿ ರವರ ಮೇಲೆ ಕ್ರಮ ಜರುಗಿಸಬೇಕು ಎಂದು ಸ್ಥಳೀಯರಾದ ಶರಣ ಬಸವ ಕಾಟಗಲ್ ಪತ್ರಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ