ಸಚಿನ್ ಪಂಚಾಳ ನಿಗೂಢ ಸಾವಿಗೆ ಸೂಕ್ತ ನ್ಯಾಯಾಂಗ ತನಿಖೆಗೆ ಆಗ್ರಹ
ಮಸ್ಕಿ : ಸಚಿನ ತಂದೆ ಮೊನಪ್ಪ ಪಂಚಾಳ ಇವರ ಆತ್ಮಹತ್ಯೆಯ ನಿಗೂಢ ಸಾವಿನ ಬಗ್ಗೆ ತನಿಖೆ ಮತ್ತು ಅವರ ಪರಿವಾರಕ್ಕೆ ನ್ಯಾಯ ಒದಗಿಸ ಬೇಕು ಎಂದು ಮಾಜಿ ವಿಶ್ವ ಕರ್ಮ ಸಮಾಜದ ಮಾಜಿ ಅಧ್ಯಕ್ಷ ಕಾಳಪ್ಪ ಕಣ್ಣೂರು ಆಗ್ರಹಿಸಿದ್ದಾರೆ.
ದಿನಾಂಕ 28.12.2024 ಶನಿವಾರ ದಂದು, ಬೀದರ್ ಜಿಲ್ಲೆಯ ತುಗಾಂವ ಗ್ರಾಮದ ಯುವಕ ದಿವಂಗತ ಸಚೀನ ಪಂಚಾಳ, ಇವರ ನಿಗೂಢ ಸಾವಿನ ಬಗ್ಗೆ ವಿಷಾದ ವ್ಯಕ್ತಪಡಿಸಿ, ದುಃಖ ಸಾಗರದಲ್ಲಿ ಮುಳುಗಿದ ಕುಟುಂಬಕ್ಕೆ ಸಾಂತ್ವನ ಹೇಳುತ್ತ,ಸಣ್ಣ ವಯಸ್ಸಿನ ಹಿರಿಯರ ಏಕೈಕ ಮಗ ನಿಗೂಢ ಸಾವಿನಿಂದ ತಂದೆ ತಾಯಿ ಪರಿವಾರದ ಸದಸ್ಯರು ಅನಾಥರಾಗಿದ್ದಾರೆ.
ಈ ದುರ್ಘಟನೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತವಾದ ಕಾನೂನು ತನಿಖೆ ಮಾಡುವ ಮೂಲಕ ಸಂತ್ರಸ್ತರಿಗೆ ನ್ಯಾಯ ಒದಗಿಸುವುದರ ಜೊತೆಗೆ ಈ ಘಟನೆಯಿಂದ ನೊಂದ ಅವರ ಕುಟುಂಬಕ್ಕೆ ತಕ್ಕ ಪರಿಹಾರ ನೀಡಬೇಕು ಎಂದು ವಿಶ್ವಕರ್ಮ ಸಮಾಜದ ಮುಖಂಡ ವಿಜಯ ಬಡಿಗೇರ ರವರ ಸರಕಾರಕ್ಕೆ ಒತ್ತಾಯಿಸಿದರು.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ