ಮಸ್ಕಿ ಪರಮ ಪೂಜ್ಯ ದಿ.ವೀರಭದ್ರಯ್ಯ ತಾತ ಮಹಾ ಸ್ವಾಮಿಗಳು ಕೃತ ಗದ್ದುಗೆ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ.
ಮಸ್ಕಿ : ಕಾರ್ತಿಕ ಸೋಮವಾರದ ಅಂಗವಾಗಿ ಪಟ್ಟಣದ ಗಾಂಧಿ ನಗರದಲ್ಲಿ ಇರುವ ಶ್ರೀ ಪರಮ ಪೂಜ್ಯ ದಿ.ವೀರಭದ್ರಯ್ಯ ತಾತ ಮಹಾ ಸ್ವಾಮಿಗಳು ಹಾಗೂ ಮೋತೋ ಶ್ರೀ ಶರಣಮ್ಮ ನವರ ಕೃತ ಗದ್ದುಗೆ ಇಂದು ಮುಂಜಾನೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾ ಮಂಗಳಾರತಿ ಸೇರಿದಂತೆ ಪೂಜಾ ಕಾರ್ಯಕ್ರಮಗಳು ಜರುಗಿದವು.
ಸಾಯಂಕಾಲ ಗದ್ದುಗೆ ಮುಂದೆ ಭಕ್ತರು ಕಾರ್ತಿಕ ದೀಪೋತ್ಸವ ಹಾಗೂ ಅನ್ನ ದಾಸೋಹ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದ ಕುರಿತು ಮಾತನಾಡಿ ನಾವು ಪ್ರತಿವರ್ಷ ದೀಪೋತ್ಸವ ಕಾರ್ಯಕ್ರಮ ಆಚರಣೆ ಮಾಡುತ್ತಾರೆ ಈ ಮಾಸದಲ್ಲಿ ಪ್ರತಿಯೊಬ್ಬ ಭಕ್ತರು ಶಿವನ ಆರಾಧನೆ ಮಾಡಿದರೆ ನಮಗೆ ಹೆಚ್ಚಿನ ಫಲ ದೊರೆಯುತ್ತದೆ ಎಂದು ರುದ್ರಯ್ಯ ಸ್ವಾಮಿ ಸೊಪ್ಪಿಮಠ ಹೇಳಿದರು.
ಈ ವೇಳೆ, ಶರಣಬಸವ ಸೊಪ್ಪಿಮಠ, ದೇವಯ್ಯ ಸಾಮಿ ಕಾರಲಕುಂಟಿ ,ಮಲ್ಲಯ್ಯ ಸೊಪ್ಪಿಮಠ, ಚನ್ನಬಸವ ಸ್ವಾಮಿ, ಅಮರೇಶ ಸೊಪ್ಪಿಮಠ, ವಿಜಯ ಕುಮಾರ,ಮಂಜುನಾಥ ಸೊಪ್ಪಿಮಠ, ಕಿರಣ್ ಕುಮಾರ ಸೊಪ್ಪಿಮಠ, ವಿಶ್ವನಾಥ ಸೊಪ್ಪಿಮಠ ಹಾಗೂ ಮಹಿಳೆಯರು ಹಾಗೂ ಮಕ್ಕಳು ಹಾಗೂ ಭಕ್ತರು ಇದ್ದರು.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ