ಬಳ್ಳಾರಿ,ಲಿಂಗಸ್ಗೂರು,ವಾಡಿ ರೈಲು ಮಾರ್ಗ ಪ್ರಾರಂಭಿಸಲು ಪ್ರತಾಪ್ ಗೌಡ ಪಾಟೀಲ ಸಚಿವ ವಿ.ಸೋಮಣ್ಣರಿಗೆ ಮನವಿ
ಮಸ್ಕಿ : ಸಿಂಧನೂರು ನಗರಕ್ಕೆ ಗುರುವಾರ ಆಗಮಿಸಿದ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಬಳ್ಳಾರಿ ಸಿರುಗುಪ್ಪ ಸಿಂಧನೂರು, ಮಸ್ಕಿ, ಲಿಂಗಸುಗೂರು, ವಾಡಿ ಕಲ್ಬುರ್ಗಿ ರೈಲು ಮಾರ್ಗ ಪ್ರಾರಂಭಿಸಿ ಎಂದು ಮಸ್ಕಿ ಕ್ಷೇತ್ರದ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ ರವರು ಮನವಿ ಪತ್ರವನ್ನು ಸಲ್ಲಿಸಿದರು.
ಈ ವೇಳೆ, ಮಸ್ಕಿ ಬಿಜೆಪಿ ಮಂಡಲ ಅಧ್ಯಕ್ಷ ಶರಣಬಸವ ಸೊಪ್ಪಿಮಠ, ಚಂದ್ರಕಾಂತ್ ಗೂಗೇಬಾಳ, ಶರಣಬಸವ ವಕೀಲ ಉಮಲೂಟಿ, ಮೌನೇಶ್ ನಾಯಕ, ಶ್ರೀಧರ ಕಡಬೂರು, ಸೇರಿದಂತೆ ಮಸ್ಕಿ ಕ್ಷೇತ್ರದ ಪಕ್ಷದ ಮುಖಂಡರು ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ