ಪೋಸ್ಟ್‌ಗಳು

ಪಂಚ ದೀಪಗಳ ಬೆಳಕಿನ ಹಬ್ಬ.ಕ್ರಿಸ್ಮಸ್

ಇಮೇಜ್
  ಲಿಂಗಸ್ಗೂರು : ತಮ್ಮೆಲ್ಲರಿಗೂ ಕ್ರಿಸ್ತ ಆಗಮನ ದಿನಮಾನಗಳ ಶುಭಾಶಯಗಳು.ಕ್ರೈಸ್ತ ಬಂದವರು ಪ್ರಾರ್ಥನಾ ಪೂರಕವಾಗಿಯೂ ಹಾಗೂ ಶ್ರದ್ಧಾ ಭಕ್ತಿಯಿಂದಲೂ ಆಚರಿಸಲ್ಪಡುವ ಪ್ರಮುಖವಾದ ಹಬ್ಬಗಳೆಂದರೆ ಕ್ರಿಸ್ಮಸ್ ಗುಡ್ ಫ್ರೈಡೇ ಹಾಗೂ ಈಸ್ಟರ್."ಕ್ರಿಸ್ಮಸ್" ಹಬ್ಬವನ್ನು ಬೆಳಕಿನ ಹಬ್ಬವೆಂದು ಕರೆಯುವುದು ಉಂಟು. ಈ ಎಲ್ಲಾ ಹಬ್ಬಗಳ ಬುನಾದಿ ಕ್ರಿಸ್ಮಸ್ ಎಂದು ಹೇಳಿದರೆ ತಪ್ಪಾಗಲಾರದು. ಕ್ರಿಸ್ಮಸ್ ಏಸುಕ್ರಿಸ್ತನ ಜನನದ ಸಂದೇಶವನ್ನು ಸಾರುವತ್ತ ಹಬ್ಬವಾಗಿದೆ. ವಿಶ್ವದಲ್ಲೇ ಡಿಸೆಂಬರ್ 25ನೇ ತಾರೀಖಿನ ದಿನದಂದು ಈ ಹಬ್ಬವನ್ನು ಆಚರಿಸುತ್ತಾರೆ. ನವಂಬರ್ ತಿಂಗಳ ಕೊನೆಯವಾರದಿಂದ ಹಿಡಿದು ಕ್ರಿಸ್ಮಸ್ ಹಬ್ಬದವರೆಗೂ ಈ ದಿನಗಳನ್ನು ಕ್ರಿಸ್ತನ ಆಗಮನ ದಿನಗಳು(Advent) ಎಂದು ಕರೆಯುತ್ತಾರೆ.ಅಂದರೆ ಕ್ರಿಸ್ಮಸ್ ದಿನಕ್ಕಿಂತಲೂ ನಾಲ್ಕು ವಾರಗಳ ಮುಂಚಿತವಾಗಿ ಕ್ರೈಸ್ತ ಬಂದವರು ಕ್ರಿಸ್ಮಸ್ ಹಬ್ಬದವರಿಗೂ ಪ್ರತಿಯೊಂದು ಭಾನುವಾರ ಒಂದೊಂದು ಮೇಣದ ಬತ್ತಿಯನ್ನು ಬೆಳಗಿಸುವುದರ ಮೂಲಕ ಐದು ವಿಧವಾದ ಸಂದೇಶಗಳನ್ನು ಧ್ಯಾನಿಸುತ್ತಾರೆ.ಈ ಲೇಖನದಲ್ಲಿ ಈ ಸಂಪ್ರದಾಯ ಒಪ್ಪಿಕೊಂಡಿರುವ ಹಿನ್ನೆಲೆ ಹಾಗೂ ಅವುಗಳ ಅರ್ಥವನ್ನು ತಮ್ಮೊಡನೆ ಹಂಚಿಕೊಳ್ಳಲು ಇಚ್ಚಿಸುತ್ತೇನೆ.    ಐದು ಮೇಣದ ಬತ್ತಿಗಳ ಹಿನ್ನೆಲೆ: ಕ್ರೈಸ್ತ ಬಂದವರು ಕ್ರಿಸ್ಮಸ್ ಹಬ್ಬವನ್ನು ಆಚರಿಸುವವರಿಗೆ ಸುಮಾರು ಐದು ವಿಧವಾದ ಬಣ್ಣದ ಮೇಣದಬತ್ತಿಗಳನ್ನು ಪ್ರತಿಯೊಂದು ಭಾನುವಾರ ಬೆಳಗುತ್ತಾ ಆ ಮೇಣದ ಬತ್...

ಮನೆ ಇಲ್ಲದವರಿಗೆ ಮನೆ ಎಂಬ ಯೋಜನೆಯಡಿ ಶಂಕು ಸ್ಥಾಪನೆ

ಇಮೇಜ್
ಮಸ್ಕಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಪರಮಪೂಜ್ಯ ಡಾ. ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರಿ ಹೇಮಾವತಿ ಅವರ ಆಶಯದಂತೆ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ನಿರ್ಗತಿಕರಿಗೆ 1000 ರೂಪಾಯಿಯನ್ನು ಸಹಾಯ ಧಾನವಾಗಿ ಸಂಸ್ಥೆಯ ವತಿಯಿಂದ ನೀಡಲಾಗುತ್ತಿದೆ ಎಂದು ಶಂಕು ಸ್ಥಾಪನೆ ಮಾಡಲಾಯಿತು. ಯೋಜನೆಯ ಕುರಿತು ಮಾತನಾಡಿ ಮನೆ ಇಲ್ಲದ ಫಲಾನುಭವಿಗಳಿಗೆ ಇದುವರೆಗೂ ಸಂಸ್ಥೆಯ ಯೋಜನೆಯಲ್ಲಿ 455 ಮನೆ ನಿರ್ಮಾಣ ಮಾಡಲಾಗಿದ್ದು 4,73,01,758 ಕೋಟಿ ರೂ ಮೊತ್ತ ಮಂಜೂರಾಗಿರುತ್ತದೆ ಇದುವರೆಗೆ ಸಂಸ್ಥೆಯ ಯೋಜನೆ ಪಡೆದ 455 ಕುಟುಂಬವು ಶ್ರೀ ಧರ್ಮಸ್ಥಳ ಮಂಜುನಾಥ ಸಂಸ್ಥೆಗೆ ಧನ್ಯವಾದವನ್ನು ತಿಳಿಸಿದ್ದಾರೆ ಎಂದು ಮಸ್ಕಿ ತಾಲೂಕ ಶ್ರೀ ಧರ್ಮಸ್ಥಳ ಮಂಜುನಾಥ ಯೋಜನಾಧಿಕಾರಿಗಳಾದ ಶ್ರೀಮತಿ ಶಾಲಿನಿ.ಜಿ ತಿಳಿಸಿದರು. ಪಟ್ಟಣದ ಮೂರನೇ ವಾರ್ಡಿನ ಫಲಾನುಭವಿ ಒಬ್ಬರಿಗೆ ಪ್ರಸ್ತುತ 2024 - 25 ನೇ ಸಾಲಿನಲ್ಲಿ ಸಂಸ್ಥೆಯ ಮಸ್ಕಿ ತಾಲೂಕಿನ ಮಾಶಾಸನ ಫಲಾನುಭವಿಯಾದ ಹುಸೇನ್ ಬೀ ಅವರಿಗೆ ಯೋಜನೆಯಿಂದ ಹೊಸ ಮನೆ, ಶೌಚಾಲಯ ಮತ್ತು ಸ್ನಾನಗೃಹ ನಿರ್ಮಾಣ ಮಾಡಲು 1,13,700 ಲಕ್ಷ ಮೊತ್ತ ಮಂಜೂರಾತಿಯಾದ ಪ್ರಯುಕ್ತ ಶುಕ್ರವಾರ ಶಂಕು ಸ್ಥಾಪನೆ ಪೂಜೆ ಮಾಡುವ ಮೂಲಕ ಯಶಸ್ವಿಗೊಳಿಸಿದರು. ಇದೇ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಶ್ರೀಮತಿ ಭಾಗ್ಯಮ್ಮ ,ಶಿವರೆಡ್ಡಿ, ಎಸ್ ಡಿಎಂಸಿ ಉರ್ದು ಶಾಲೆಯ ಅಧ್ಯಕ್ಷರಾದ ಶ್ರೀ ಶಬ್ಬೀರ್, ಒಕ್ಕೂಟ ದ ಅಧ್ಯಕ್...

ನೀಲಿ ಚಿತ್ರಗಳ ಲಿಂಕ್ ಹಾವಳಿಗೆ ಬೆಚ್ಚಿದ ಮಸ್ಕಿ ವಾಟ್ಸಾಪ್ ಬಳಕೆದಾರರು

ಇಮೇಜ್
  ಮಸ್ಕಿ :    ಮೊಬೈಲ್‌ಫೋನ್‌ ಈ ಕಾಲದ ಸಂಪತ್ತು ಎಂದರೆ ತಪ್ಪಾಗಲಾರದೇನೊ. ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ ಮಾಹಿತಿ, ಇ–ಮೇಲ್‌, ಆನ್‌ಲೈನ್‌ ಬ್ಯಾಂಕಿಂಗ್‌. ಹೀಗೆ ಖಾಸಗಿ ಮತ್ತು ಹಣಕಾಸಿಗೆ ಸಂಬಂಧಿಸಿದ ಮಾಹಿತಿಗಳೆಲ್ಲವೂ ಇದರಲ್ಲಿಯೇ ಇಟ್ಟುಕೊಳ್ಳುತ್ತೇವೆ. ಹೀಗಿರುವಾಗ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವೂ ಇದೆಯಲ್ಲವೇ.? ಮೊಬೈಲ್‌ಗೆ ಬರುವ ಅಪರಿಚಿತ ಸಂದೇಶಗಳ ಲಿಂಕ್‌ ಕ್ಲಿಕ್‌ ಮಾಡುವುದರಿಂದ ಹ್ಯಾಕ್‌ ಆಗುತ್ತದೆ. ಇಂತಹ ಲಿಂಕ್‌ಗಳು ಯಾವುದಾದರೂ ಹೊಸ ಉತ್ಪನ್ನ ಅಥವಾ ರಿಯಾಯಿತಿ ಮಾರಾಟದ ಆಮಿಷಗಳಿಂದ ಕೂಡಿರುತ್ತವೆ. ಅದನ್ನು ಕ್ಲಿಕ್ ಮಾಡುವಂತೆ ಸೆಳೆಯುತ್ತವೆ. ಅದನ್ನು ಕ್ಲಿಕ್ ಮಾಡಿದಾಕ್ಷಣ ನಮ್ಮ ಫೋನ್‌ನಲ್ಲಿರುವ ಮಾಹಿತಿ ಪಡೆಯುವ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇದಕ್ಕೆ ಉದಾಹರಣೆ ಎಂಬುತೆ ಪಟ್ಟಣದ ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ ನೀಲಿ ಚಿತ್ರಗಳನ್ನು ಒಳಗೊಂಡ ಲಿಂಕ್ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಮುಜುಗರ ಉಂಟು ಮಾಡುತ್ತಿದೆ. ಭಾನುವಾರ ಸಂಜೆಯಿಂದ ನೀಲಿಚಿತ್ರಗಳ ಲಿಂಕ್ ಹರಿದಾಡುತ್ತಿದೆ. ಕುತೂಹಲಕ್ಕೆ ಲಿಂಕ್ ಒತ್ತಿದರೆ, ಕ್ಷಣಾರ್ಧದಲ್ಲಿ ಸ್ವೀಟ್ ಬೇಬಿ ಹೆಸರಿನಲ್ಲಿ ನೀಲಿ ಚಿತ್ರಗಳು ಡೌನ್ ಲೋಡ್ ಆಗುತ್ತವೆ. ಅಲ್ಲದೇ ಡಿಪಿಯೂ ಚೇಂಚ್ ಆಗುತ್ತಿದೆ. ಅನೇಕರು ಲಿಂಕ್ ಒತ್ತಿ ಹೌಹಾರಿದ್ದಾರೆ. ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ ನೀಲಿ ಚಿತ್ರಗಳಿಂದ ಗ್ರೂಪ್ ಗಳಲ್ಲಿ ಇರುವವರಿಗೆ ಇರಿಸು- ಮೂರಿಸ...

ಮೆದಿಕಿನಾಳ : ಡಿ.22 ಚೆನ್ನಮಲ್ಲ ಶಿವಯೋಗಿಗಳವರ 69ನೇ ಜಾತ್ರಾ ಮಹೋತ್ಸವ

ಇಮೇಜ್
  ಮಸ್ಕಿ: ತಾಲೂಕಿನ ಮೆದಿಕಿನಾಳ ಗ್ರಾಮದಲ್ಲಿ ಡಿಸೆಂಬರ್ 22 ರಂದು ಲಿಂ. ಚೆನ್ನಮಲ್ಲ ಶಿವಯೋಗಿಗಳವರ 69ನೇ ಜಾತ್ರಾ ಮಹೋತ್ಸವ ಜರುಗಲಿದೆ ಎಂದು ಶ್ರೀ ಶ್ರೀ ಶ್ರೀ ಚನ್ನಮಲ್ಲ ಶಿವಯೋಗಿಗಳ ಮಠ ಮದಿಕಿನಾಳ ಸಮಿತಿಯ ರಾಜಣ್ಣ ಪರಡ್ಡಿ ತಿಳಿಸಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿಸೆಂಬರ್ 21 ರಂದು ಹುಡಿ ತುಂಬುವ ಜರುಗುವುದು. ಕಾರ್ಯಕ್ರಮದಲ್ಲಿ ಸಂತೆಕೆಲ್ಲೂರಿನ ಗುರುಬಸವ ಸ್ವಾಮೀಜಿ, ಮಸ್ಕಿಯ ವರರುದ್ರಮುನಿ ಸ್ವಾಮೀಜಿ ಸೇರಿದಂತೆ 15 ರಿಂದ 20 ಮಠಗಳ ಮಠಾಧೀಶರು ಪಾಲ್ಗೊಳ್ಳುವ ಸಂಭವ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮೆದಿಕಿನಾಳ ಗ್ರಾಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜಾತ್ರಾ ಮಹೋತ್ಸವದ ಯಶಸ್ಸಿಗೆ ಗ್ರಾಮಸ್ಥರು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಡಿ.12 ರಿಂದ 21 ರ ವರೆಗೆ ಪ್ರತಿನಿತ್ಯ ಸಂಜೆ ಪ್ರವಚನದ ಮಂಗಲ ಕಾರ್ಯಕ್ರಮ ನಡೆಯಲಿದೆ. ಡಿ.22 ರಂದು ಬೆಳಿಗ್ಗೆ ಚೆನ್ನ ಮಲ್ಲ ಶಿವಯೋಗಿಗಳ ಗದ್ದುಗೆಗೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯುವವು ಗಂಗಾಸ್ಥಳದಿಂದ ಕುಂಭ ಹಾಗೂ ಚೆನ್ನಮಲ್ಲ ಶಿವಯೋಗಿಗಳ ಭಾವಚಿತ್ರದ ಮೆರವಣಿಗೆ ನಡೆಯಲಿದೆ.ಬೆಳಿಗ್ಗೆ 501 ಮಹಿಳೆಯರಿಗೆ ಹುಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸುವವು. ಸಂಜೆ ರಥೋತ್ಸವ ನಡೆಯಲಿದೆ ವಿವಿಧ ಮಠಾಧೀಶರು, ಸಾಹಿತಿಗಳು ವಿಧಾ...

ಮಧ್ಯ ಅಕ್ರಮ ಮಾರಾಟ |ಸೂಕ್ತ ಕ್ರಮ ಕೈಗೊಳ್ಳುವಂತೆ| ಸಿಪಿಎಂಎಲ್ ಪಕ್ಷ ಮನವಿ

ಇಮೇಜ್
  ಕೊಟ್ಟೂರು ತಾಲೂಕಿನ ಹರಾಳು ಮತ್ತು ನಾಯಕನಹಳ್ಳಿ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವವರ ಸಂಖ್ಯೆ ಗಣನೀಯವಾಗಿ ಇಂತವರನ್ನು ತಡೆದು ಕಡಿವಾಣ ಹಾಕಿ ಕಾನೂನು ಕ್ರಮ ಕೈಕೊಳ್ಳುವಂತೆ ಸ್ಥಳೀಯ ಗ್ರಾಮಸ್ಥರು ಹಾಗೂ ಭಾರತ ಕಮಿನಿಸ್ಟ್ ಪಕ್ಷದ (ಮಾಕ್ಸ್ ವಾದಿ ಹಾಗೂ ಲೆನಿನ್ ರಾಮ ವಾದಿ) ಬುಧವಾರ ಪೊಲೀಸ್ ಠಾಣೆಯ ಪಿಐ ಗೀತಾಂಜಲಿ ಶಿಂಧೆ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಪತ್ರ ಸ್ವೀಕರಿಸಿದ ನಂತರ ಗೀತಾಂಜಲಿ ಶಿಂಧೆ ಅವರು ಮಾತನಾಡಿ ಅಕ್ರಮ ಮಾರಾಟ ಕಂಡು ಬಂದಲ್ಲಿ ಸೂಕ್ತ ಕ್ರಮ ಜರಗಿಸುವಾಗ ಅಕ್ರಮ ಮಧ್ಯ ಸಾಗಾಣಿಕೆ ಮರುಕಳಿಸದಂತೆ ಎಲ್ಲ ಮಾರಾಟಗಾರರಿಗೆ ಖಡಕ್ ಎಚ್ಚರಿಕೆ ನೀಡಿದರು  ಈ ಸಂದರ್ಭದಲ್ಲಿ ಸಿ.ಪಿ.ಐ.ಎಂ.ಎಲ್. ಪಕ್ಷದ ತಾಲೂಕು ಕಾರ್ಯದರ್ಶಿ ಬಿ.ಬಾಲ ಗಂಗಾಧರ್, ಹಾಗೂ ಜಿಲ್ಲಾ ಮುಖಂಡ. ಗುಳೇದಟ್ಟಿ ಸಂತೋಷ್, ಗೋಣಿ ಬಸಮ್ಮ, ವನಜಮ್ಮ, ಪಕೀರಮ್ಮ, ದುರುಗಮ್ಮ ಅಜ್ಜಪ್ಪ, ಊ ಪರಸಪ್ಪ, ದೊಡ್ಡಬಸಪ್ಪ, ಸಿದ್ದಪ್ಪ, ರೈತ ಸಂಘದ ಮುಖಂಡ ಬರಮಪ್ಪ, ನಾಗರಾಜ ಮುಂತಾದವರು ಭಾಗವಹಿಸಿದ್ದರು.

*ವಿಜ್ರಂಭಣೆಯಿಂದ ಸೊನ್ನೆ ಮರಡಿ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ*

ಇಮೇಜ್
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹುಲಿಕೆರೆ ಹೊರವಲಯದ ಹೊನ್ನಮರಡಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಶ್ರೀ ವೀರಭದ್ರೇಶ್ವರ ಸ್ವಾಮಿಯ ಉತ್ಸವಮೂರ್ತಿಯನ್ನು ದೇವಸ್ಥಾನದಿಂದ ಸಕಲ ವಾದ್ಯಗಳೊಂದಿಗೆ ರಥದ ಬಳಿಗೆ ತಂದು ಮೂರು ಸುತ್ತು ಪ್ರದಕ್ಷಿಣೆ ಹಾಕಿ ರಥೋತ್ಸವದಲ್ಲಿ ಪ್ರತಿಷ್ಠಾಪಿಸಲಾಯಿತು. ಸ್ವಾಮಿಯ ರಥದ ಮುಂದೆ ಸಾಗುತ್ತಿದ್ದಂತೆ ನೆರೆದಿದ್ದ ಭಕ್ತರು ಜಯಘೋಷ ಹಾಕಿ ಬಾಳೆಹಣ್ಣು. ಉತ್ತುತ್ತಿ .ಮಂಡಕ್ಕಿ .ಎಸೆದು ಭಕ್ತಿ ಸಮರ್ಪಿಸಿದರು. ಶ್ರೀ ಸ್ವಾಮಿಯ ಪಟ್ಟವನ್ನು ಹುಲಿಕೆರೆ ಗ್ರಾಮದ ದಾಸಪ್ಪರ ತಿಪ್ಪೇಸ್ವಾಮಿ ಇವರಿಗೆ ರೂಪಾಯಿ 65.000.ಕ್ಕೆ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಹುಲಿಕೆರೆ ಹಿರೇಕುಂಬಳಗುಂಟೆ ದಾಸರು ಬನಹಳ್ಳಿ ಹೊಸಹಳ್ಳಿ ಜಗಳೂರು ಮೊಳಕಲ್ಮುರು ಸೇರಿ ಇತರೆ ಜಿಲ್ಲೆಗಳ ಸುತ್ತಮುತ್ತಲಿನ ಗ್ರಾಮದ ರಥೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದರು

*ಹಿರೇ ಕುಂಬಳಕುಂಟೆ ಹಾಲಸ್ವಾಮಿಯ ಮುಳ್ಳು ಗದ್ದುಗೆ ಉತ್ಸವ*

ಇಮೇಜ್
ಕೂಡ್ಲಿಗಿ: ತಾಲ್ಲೂಕಿನ ಹಿರೇ ಕುಂಬಳಕುಂಟೆ ಗ್ರಾಮದಲ್ಲಿ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ 19ನೇ ವರ್ಷದ ಮುಳ್ಳು ಗದ್ದುಗೆ ಉತ್ಸವ ಸೋಮವಾರ ರಾತ್ರಿ ಸಂಭ್ರಮದಿಂದ ಜರುಗಿತು. ಹಾಲಸ್ವಾಮಿ ಮಠದ ಧಾರ್ಮಿಕ ಪರಂಪರೆಯಂತೆ ಪೂಜಾ ಅನುಷ್ಠಾನ ಕೈಗೊಂಡಿದ್ದ ಶ್ರೀ ಸದ್ಗುರು ಶಿವಯೋಗಿ ಮೌನ ಋಷಿ ಸ್ವಾಮೀಜಿ ಹಾಗೂ ಶ್ರೀ ಸದ್ಗುರು ಶಿವಯೋಗಿ ಅಮೃತೇಶ್ವರ ಸ್ವಾಮೀಜಿ ಮತ್ತು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಹಾ ಸ್ವಾಮೀಜಿ ಗಳು ಅವರು ಸ್ವಾಮಿಯ ಗದ್ದುಗೆಗೆ ಪೂಜೆ ನೆರವೇರಿಸಿ ಮುಳ್ಳಿನ ಮಂಟಪ ಆರೋಹಣ ಮಾಡಿದರು. ಹಾಲಸ್ವಾಮಿ ದೊರೆಯೇ ನಿನಗಾರು ಸರಿಯೇ ಸರಿಸರಿ ಎಂದವರ ಹಲ್ಲು ಮುರಿಯೇ ಬಹುಪರಾಕ್ ಹರ ಹರ ಮಹಾದೇವ ಎಂಬ ಭಕ್ತರ ಜಯಘೋಷ, ಹರ್ಷೋದ್ಘಾರದ ನಡುವೆ ಉತ್ಸವ ಪ್ರಾರಂಭವಾಯಿತು. ಬಳಿಕ ರಾತ್ರಿ 10.30 ಗಂಟೆಗೆ ಆರಂಭವಾದ ಮುಳ್ಳು ಗದ್ದುಗೆ ಉತ್ಸವ, ಗ್ರಾಮದ ಮುಖ್ಯ ಬೀದಿಯ ಮೂಲಕ ಸಾಗಿ ಸಂಪನ್ನಗೊಂಡಿತು. ನಂದಿಕೋಲು, ಮಂಗಳವಾದ್ಯ, ಡೊಳ್ಳು ಕುಣಿತ ವಾದ್ಯ ವೈಭವ ಉತ್ಸವದ ಮೆರಗನ್ನು ಹೆಚ್ಚಿಸಿದ್ದವು. ಹಿರೇ ಕುಂಬಳಕುಂಟೆ ಸುತ್ತಮುತ್ತಲಿನ ಗ್ರಾಮಗಳ ಅಪಾರ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಗ್ರಾಮದಲ್ಲಿ ಮಂಗಳವಾರ ಸಂಜೆ ಹಾಲಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಅಪಾರ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ, ರಥಕ್ಕೆ ಬಾಳೆಹಣ್ಣು ಎಸೆದು ಭಕ್ತಿಯನ್ನು ಸಮರ್ಪಿಸಿದರು.