ಪೋಸ್ಟ್‌ಗಳು

ತಲೇಖಾನ್ : ವಸತಿ ಹಂಚಿಕೆ ಗೋಲ್ಮಾಲ್ ರಾಜೀವ್ ಗಾಂಧಿ ವಸತಿ ನಿಗಮ ವ್ಯವಸ್ಥಾಪಕ ನಿರ್ದೇಶಕರ ಭೇಟಿ

ಇಮೇಜ್
  ವರದಿ : ಗ್ಯಾನಪ್ಪ ದೊಡ್ಡಮನಿ  ಮಸ್ಕಿ : ತಾಲೂಕಿನ ತಲೇಖಾನ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ 200 ಮನೆಯ ಅಕ್ರಮ ಮಂಜೂರು ಮಾಡಿದ ಪಟ್ಟಿ ರದ್ದು ಪಡಿಸಬೇಕು ಎಂಬ ತನಿಖಾ ಸಭೆಯಲ್ಲಿ ಮಾತನಾಡಿದ ರಾಜೀವ್ ಗಾಂಧಿ ವಸತಿ ನಿಗಮ ಬೆಂಗಳೂರು ವ್ಯವಸ್ಥಾಪಕ ನಿರ್ದೇಶಕರು ಆದ ಉಸ್ಮಾನ್ ಪಾಷಾ ಇವರು ರಾಜ್ಯದಲ್ಲಿ ನೂತನ ವಸತಿ ನಿರ್ಮಾಣಕ್ಕೆ ನಿಗಮದಲ್ಲಿ 2 ಸಾವಿರ ಕೋಟಿ ಹಣವಿದ್ದು ಬರೀ 125 ಕೋಟಿ ಖರ್ಚು ಮಾಡಲಾಗಿದೆ ಸದ್ಭಳಕೆ ಮಾಡಿಕೊಳ್ಳಿ. ಸಭೆಯ ಸ್ಥಳದಲ್ಲಿಯೇ 412 ಮನೆ ಪಟ್ಟಿಯನ್ನು ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರುಗಳಿಗೆ ವಾರ್ಡ್ ವಾರು ಪಟ್ಟಿ ವಿತರಿಸಿದರು. ಮಸ್ಕಿ ತಾಲೂಕಿಗೆ 7241 ಮನೆ ಬಂದಿದ್ದು 2 ಸಾವಿರ ಮನೆ ಮಾತ್ರ ಮಂಜೂರು ಮಾಡಲಾಗಿದೆ ಎಂದು ತನಿಖಾ ವಿಷಯದ ಬಗ್ಗೆ ಸಭೆಯಲ್ಲಿಯೇ ಶಾಂತ ರೀತಿಯಲ್ಲಿ ತಿಳಿಸಿದರು. ನಂತರ ಮದ್ಯಾಹ್ನದ ಊಟ ಆದ ಮೇಲೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜ್ಯೋತಿ ಬಾಯಿ ಸಿಬ್ಬಂದಿ ಮತ್ತು ಮಸ್ಕಿ ಠಾಣೆಯ ರಂಗಯ್ಯ ಕೆ ಮತ್ತು ಸಿಬ್ಬಂದಿ ಹಾಗೂ ರಿಸರ್ವ್ ಪೊಲೀಸರ ತಂಡದ ಸಹಕಾರದೊಂದಿಗೆ ಯರದೊಡ್ಡಿ ಗ್ರಾಮಕ್ಕೆ ತೆರಳಿ 200 ಮನೆಯಲ್ಲಿನ ಫಲಾನುಭವಿ ಪರಿಶೀಲನೆ ನಡೆಸಲಾಯಿತು. ಪರಿಶೀಲನೆ ಸಂದರ್ಭದಲ್ಲಿ ಮೊದಲ ಮನೆ ಪರಿಶೀಲನೆ ಮಾಡಿದಾಗ ಮಂಜುರಿಗೆ ಮೊದಲೇ ಮನೆ ಕಟ್ಟಿದ್ದು ಈಗ ಪ್ರಸ್ತುತ ಮನೆ ಮಂಜೂರು ಪಟ್ಟಿಯಲ್ಲಿ ಮನೆ ಮಾಲಿಕೆಯ ಹೆಸರಿದೆ, 10 ರಿಂದ 20 ಸಾವಿರ ಹಣ ಕೊಟ್ಟವರಿಗೆ ಮನೆ,ಮನೆ ಇದ್ದವರ...

ಕೊಳವೆಬಾವಿ ಜಲಮರುಪೂರ್ಣಕ್ಕೆ ವಿಶೇಷ ಅನುದಾನ ಕಲ್ಪಿಸುವ ಭರವಸೆ :ಶಾಸಕ ನೇಮಿರಾಜ್ ನಾಯ್ಕ

ಇಮೇಜ್
"ರಾಜ್ಯದಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡುವುದಾಗಿ ಶಾಸಕ ನೇಮಿರಾಜ್ ನಾಯ್ಕ ಭರವಸೆ ನೀಡಿದರು." ಕೊಟ್ಟೂರು : ತಾಲೂಕಿನ ತಿಮ್ಮಲಾಪುರ ಗ್ರಾಮದಲ್ಲಿ ಬಣಕಾರ ಚಂದ್ರಪ್ಪ ಹೊಲದಲ್ಲಿ ಸೋಮವಾರ ಸಾವಯವ ರೈತರ ವಿಶೇಷ ಪ್ರಯೋಗ ಪರಿವಾರದ ಸಭೆ ಮತ್ತು ಇಕ್ರಾ ಸಂಸ್ಥೆ ಹಾಗೂ ಭೂಮಿ ಮಿತ್ರ ಸಾವಯವ ರೈತರ ಒಕ್ಕೂಟ ಸಂಯೋಗದಲ್ಲಿ ಹಮ್ಮಿಕೊಂಡಿದ್ದರು  ರೈತರು ಕೊಳವೆ ಬಾವಿಯಲ್ಲಿನ ಅಂತರ್ಜಲ ಖಾಲಿಯಾದ ಮೇಲೆ ಮತ್ತೊಂದು ಕೊಳವೆಬಾವಿ ಕೊರೆಸಲು ಸಿದ್ಧವಾಗುತ್ತಾರೆ. ಆದರೆ ಬತ್ತಿದ ಕೊಳವೆಬಾವಿಗೆ ಜಲ ಮರುಪೂರ್ಣಗೊಳಿಸಿದರೆ ಅಂತರ್ಜಲ ಹೆಚ್ಚಾಗಿ ಮೊದಲಿನಂತೆ ಕೃಷಿ ಮಾಡಬಹುದು.  ಈ ಜಲಮರುಪೂರ್ಣಕ್ಕೆ ವಿಶೇಷ ಅನುದಾನ ನೀಡುವಂತೆ  ಅಧಿವೇಶನದಲ್ಲಿ ರೈತರ ಪರವಾಗಿ ಮಾತನಾಡುತ್ತೇನೆ.ಎಂದು ಹೇಳಿದರು. ಶಾಸಕರ ರೈತರ ಧ್ವನಿ :ರೈತರ ಪರ. ರೈತನಿಲ್ಲದಿದ್ದರೆ ಯಾರು ಬದುಕಲು ಸಾಧ್ಯವಿಲ್ಲ, ಅವರ ಸುಖ, ಅಭಿವೃದ್ಧಿಗೆ ನನ್ನ ಮೊದಲ ಆಧ್ಯತೆ, ಈ ಕೊಳವೆ ಬಾವಿಗಳ ಜಲಮರುಪೂರ್ಣಕ್ಕೆ ಶಾಸಕತ್ವದ ಎರಡೂವರೆ ವರ್ಷವನ್ನು ಮೀಸಲಿಡವುದಾಗಿ ಘೋಷಿಸಿದರು. ಡಾ. ದೇವರಾಜ್ ರೆಡ್ಡಿ ಮಾತಾನಾಡಿ,ಪದೇ ಪದೇ ಕೊಳವೆಬಾವಿಗಳನ್ನು ಕೊರಸುವುದರಿಂದ ಭೂಮಿಯ ಒಡಲು ಬತ್ತಿ ಹೋಗಿ ಮುಂದಿನ ದಿನಗಳಲ್ಲಿ ಜಲ ಕ್ಷಾಮ ಬರುವುದನ್ನು ತಪ್ಪಿಸಲು ಮಳೆಯ ನೀರನ್ನು ಕೊಳವೆ ಬಾವಿಯ ಇಂಗು ಗುಂಡಿಗೆ ಹಿಂಗಿಸಿದರೆ ಬತ್ತಿಹೋದ ಕೊಳವೆಬಾವಿಯಲ್ಲಿ ಅಂತರ್ಜಲ,ಜಲ ಮರುಪೂರ್ಣ ವೃದ್ಧಿಯಾಗುತ್ತ...

ರಾಹುಲ್ ಗಾಂಧಿಗೆ ಸಿದ್ದು ಹೇಳಿದ್ದೇನು?

ಇಮೇಜ್
Rahul Gandhi - siddu Karnataka politics ಕಳೆದ ವಾರ ದಿಲ್ಲಿಯಿಂದ ಬಂದ ವರ್ತಮಾನ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಿಗರ ಆತ್ಮವಿಶ್ವಾಸ ಹೆಚ್ಚಿಸಿದೆ.ಅದರ ಪ್ರಕಾರ ರಾಹುಲ್ ಗಾಂಧಿಯವರಿಗೆ ಕೊಡಬೇಕಾದ ಮೆಸೇಜನ್ನು ಸಿದ್ದರಾಮಯ್ಯ ಅವರು ಕೊಟ್ಟಿದ್ದಾರೆ. ಯಾವಾಗ ರಾಹುಲ್ ಗಾಂಧಿ ಅವರಿಗೆ ಈ ಮೆಸೇಜನ್ನು ಸಿದ್ದರಾಮಯ್ಯ ತಲುಪಿಸಿದ್ದಾರೆ ಎಂಬ ವರ್ತಮಾನ ಸಿಕ್ಕಿತೋ?ಇದಾದ ನಂತರ ಸಿದ್ಧು ಆಪ್ತರ ಪಡೆ ಸಂಪುಟ ಪುನರ್ರಚನೆಯ ದಿನವನ್ನು ಎದುರು ನೋಡುತ್ತಿದೆ. ಮೂಲಗಳ ಪ್ರಕಾರ,ಇತ್ತೀಚೆಗೆ ರಾಹುಲ್ ಗಾಂಧಿ ಅವರ ಜತೆ ಮಾತನಾಡಿದ ಸಿದ್ದರಾಮಯ್ಯ ಅವರು:'ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡೂವರೆ ವರ್ಷಗಳಾಗುತ್ತಾ ಬಂದಿದೆ.ಈ ಹೊತ್ತಿನಲ್ಲಿ ರಾಜ್ಯ ಸಚಿವ ಸಂಪುಟವನ್ನು ಪುನರ್ರಚಿಸಲೇಕು'ಎಂದಿದ್ದಾರೆ. ವಾಸ್ತವವಾಗಿ ಸಚಿವ ಸಂಪುಟದಲ್ಲಿರುವ ಹಲವರ ವಿಷಯದಲ್ಲಿ ಸಿದ್ದರಾಮಯ್ಯ ಅವರು ಸಮಾಧಾನದಿಂದಿಲ್ಲ.ಕಾರಣ?ಈ ಮಂತ್ರಿಗಳು ಅಧಿಕಾರಷಾಹಿಯ ಕಪಿಮುಷ್ಟಿಗೆ ಸಿಲುಕಿ ಕೆಲಸ ಮಾಡುತ್ತಿದ್ದಾರೆಯೇ ವಿನ: ಅವರಿಗೆ ತಮ್ಮದೇ ದೃಷ್ಟಿಕೋನವಿಲ್ಲ. ಹೀಗಾಗಿ ತಮಗೆ ಕೊಟ್ಟ ಖಾತೆಯ ಜವಾಬ್ದಾರಿಯನ್ನು ಅಧಿಕಾರಿಗಳ ಹೆಗಲಿಗೆ ಹಾಕಿ,ಅವರು ಹೇಳಿದ ಜಾಗದಲ್ಲಿ ಸಹಿ ಮಾಡಿ ನಿರುಮ್ಮಳವಾಗಿದ್ದಾರೆ. ಇವತ್ತು ತನ್ನ ಮೇಲಿರುವ ಸಾಲ,ಗ್ಯಾರಂಟಿ ಯೋಜನೆಗಳಿಗೆ ಕೊಡಬೇಕಾದ ಹಣ,ನೌಕರರ ವೇತನ,ಪಿಂಚಣಿಗೆ ನೀಡಬೇಕಾದ ಹಣ ಸೇರಿದಂತೆ ವಿವಿಧ ಬಾಬ್ತುಗಳ ಹೊಡೆತಕ್ಕೆ ಸಿಲುಕಿರುವ ಸರ್ಕಾರ ಆರ್ಥಿಕ ಸಂಕಷ್...

ರಾಜ್ಯ ಸರ್ಕಾರದ ಇಂದಿರಾ ಕಿಟ್ ಮತ್ತೊಂದು ವರ

ಇಮೇಜ್
ಗ್ಯಾರಂಟಿ ಯೋಜನೆಗಳನ್ನು ನೀಡಿ, ಸೈ ಎನ್ನಿಸಿಕೊಂಡಿದ್ದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಇದೀಗ ಮತ್ತೊಂದು ಕಲ್ಯಾಣಕಾರಿ ಕೆಲಸಕ್ಕೆ ಕೈ ಹಾಕಿದೆ. ಬರೀ ಅಕ್ಕಿ ಕೊಟ್ಟರೆ ಸಾಲದು, ಬಡತನ ರೇಖೆಗಿಂತ ಕೆಳಗೆ ಇರುವ ಎಲ್ಲಾ ನಾಗರಿಕರು ನೆಮ್ಮದಿ ಜೀವನ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದ ಇದೀಗ ರಾಜ್ಯ ಸರ್ಕಾರ ಇಂದಿರಾ ಕಿಟ್ ನೀಡುವ ಯೋಜನೆ ಆರಂಭಿಸಿದೆ  ಎಂದು ಕೆಪಿಸಿಸಿ ವಕ್ತಾರ, ರಾಜ್ಯ ಪ್ರಚಾರ ಸಮಿತಿ ಸಂಯೋಜಕ ವೆಂಕಟೇಶ್ ಹೆಗಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ 10 ಕೆಜಿ ಅಕ್ಕಿ ನೀಡುವುದರಿಂದ ನೆಮ್ಮದಿಯ ಜೀವನ ಸಾಗಲು ಆಗದು ಎಂದು ಮನಗಂಡ ರಾಜ್ಯ ಸರ್ಕಾರ ಇದೀಗ 5 ಕೆಜಿ ಅಕ್ಕಿ ನೀಡಿ, ಇನ್ನೂ 5 ಕೆಜಿ ಅಕ್ಕಿ ಬದಲು 2 ಕೆಜಿ ತೊಗರಿ ಬೇಳೆ, ಒಂದು ಕೆಜಿ ಎಣ್ಣೆ, ಒಂದು ಕೆಜಿ ಉಪ್ಪು ನೀಡಲು ನಿರ್ಧಾರ ಮಾಡಿದೆ. ಇದರಿಂದ ಅಕ್ಕಿಯ ಕಾಳಸಂತೆ ದಂಧೆಗೆ ಲಗಾಮು ಬಿದ್ದಂತೆ ಆಗುತ್ತದೆ ಅಲ್ಲದೆ ಜನರಿಗೆ ಸಾಕಷ್ಟು ನೆರವಾಗಲಿದೆ. ಬಡ ಕುಟುಂಬಗಳು ನೆಮ್ಮದಿಯ ಜೀವನ ಕಟ್ಟಿಕೊಳ್ಳಬಹುದಾಗಿದೆ. ಕೇಂದ್ರ ಸರ್ಕಾರದ ಇಂದಿನ ಆರ್ಥಿಕ ನೀತಿ ಬಡವರ ವಿರೋಧಿ ಆಗಿದೆ. ದಿನದಿಂದ ದಿನಕ್ಕೆ ಬೆಲೆ ಏರಿಕೆಯಿಂದ ಬಡ, ಮಧ್ಯಮ ವರ್ಗದ ಜನರು ದಿನನಿತ್ಯ ಬದುಕು ಕಟ್ಟಿಕೊಳ್ಳಲು ಹೆಣಗಾಡುವಂತೆ ಆಗಿದೆ. ಇದನ್ನು ಕಂಡೇ ನಮ್ಮ ಸರ್ಕಾರ ಅನ್ನಭಾಗ್ಯ ಯೋಜನೆ ಆರಂಭಿಸಿತ್ತು. ಆದರೆ, ಇದೂ ಸಹ ಸಾಲದು ಎಂಬುದನ್ನು ಅರಿತು ಇದೀಗ ಅಕ್ಕಿ ಜೊತೆ ಎಣ್ಣೆ, ಬೇಳೆ, ಉಪ್ಪು ವಿತರಿಸುವ ಕಾರ್ಯ ಆರ...

ಸಿಜೆಐ ಮೇಲೆ ಶೂ ಎಸೆತ : ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಖಂಡನೆ

ಇಮೇಜ್
  ಕೊಟ್ಟೂರು : ಸುಪ್ರೀಂ ಕೊರ್ಟ್‌ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಶ್ರೀ ಬಿ.ಆರ್.ಗವಾಯಿ ಅವರ ಮೇಲಿನ ಹಲ್ಲೆ ಖಂಡಿಸಿ ಉಪತಹಶೀಲ್ದಾರರಾದ ಅನ್ನದಾನೇಶ್‌ರವರಿಗೆ ಗುರುವಾರ ಮನವಿ ಪತ್ರ ನೀಡಲಾಯಿತು  ಸೋಮವಾರ ಸುಪ್ರೀಂಕೋರ್ಟ್ ಕಲಾಪದ ವೇಳೆಯಲ್ಲಿ ವಕೀಲನೊಬ್ಬ ಮುಖ್ಯ ನ್ಯಾಯಮೂರ್ತಿಯವರನ್ನು ಗುರಿಯಾಗಿಸಿ. ಶೂ ಎಸೆದ ಘಟನೆ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಒಂದು ಅಕ್ಷಮ್ಯ ಅಪರಾಧವಾಗಿದೆ. ಶೂ ಎಸೆದ ವಕೀಲ ರಾಕೇಶ್ ಕಿಶೋರ್ ಈ ಘಟನೆ ನಡೆದ ಬಳಿಕ ಸನಾತನ ಧರ್ಮದ ಮೇಲಿನ ಅವಮಾನವನ್ನು ಹಿಂದೂಸ್ತಾನವು ಸಹಿಸುವುದಿಲ್ಲ ಎಂದು ಕೂಗಾಡಿದ್ದಾನೆ. ಅವನ ಈ ಕೂಗಾಟಕ್ಕೆ ಸನಾತನ ಧರ್ಮದ ಪ್ರತಿಪಾದಕರಾದ ಆರ್.ಎಸ್.ಎಸ್. ಮತ್ತು ಬಿಜೆಪಿ ಗಳ ಮಾನವ ವಿರೋಧಿ ಸಿದ್ದಾಂತದ ಪ್ರೇರಣೆಯೇ ಇದಕ್ಕೆಲ್ಲ ಕಾರಣವಾಗಿದೆ. ಭಾರತ ಸನಾತನ ಧರ್ಮದ ಮೂಲ ಸಾಮಾಜಿಕ ಸಂರಚನೆಯಾದ ಶೈಕ್ಷಣಿಕ ಸಮಾಜವನ್ನು ನಮ್ಮ ದೇಶದಲ್ಲಿ ಭದ್ರಪಡಿಸಲು ಹೊರಟಿದೆ. ಇದು ಭಾರತದ ಭವಿಷ್ಯಕ್ಕೆ ಅಪಾಯಕಾರಿ ನಡೆಯಾಗಿದೆ.  ನಮ್ಮ ದೇಶದ ಸಂವಿಧಾನವನ್ನು ನಾಶಗೊಳಿಸಿ ಮನುವಾದ ಪ್ರಣಿತ ಶೋಷಕ ಸಮಾಜ ನಿರ್ಮಾಣದ ಮುನ್ಸೂಚನೆಯಾಗಿದೆ. ದಲಿತರಿಗೆ ವಿದ್ಯೆ ನಿರಾಕರಿಸಿದ ಪುರೋಹಿತಶಾಹಿ ವ್ಯವಸ್ಥೆಯನ್ನು ಬದಲು ಮಾಡಿ ನಮ್ಮ ಸಂವಿಧಾನ ನೀಡಿರುವ ಶಿಕ್ಷಣದ ಹಕ್ಕಿನಿಂದ ತಮ್ಮ ಪರಿಶ್ರಮದಿಂದ ದೇಶದ ದಲಿತ ಸಮುದಾಯಕ್ಕೆ ಸೇರಿದ ಅವಕಾಶ ವಂಚಿತ ವ್ಯಕ್ತಿಯೊಬ್ಬರು ಇಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾಗಲ...

*🪔ನಿಧನ ವಾರ್ತೆ : ಗಿಡ್ಡ ಉಚ್ಚೆoಗೇಪ್ಪನವರ ದುರುಗೇಶ್ -ನಿಧನ 🪔*

ಇಮೇಜ್
ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ ನಗರ 14ನೇ ವಾರ್ಡಿನಲ್ಲಿ ಗಿಡ್ಡ ಉಚ್ಛೇ oಪ್ಪನವರ ದುರುಗೇಶ್ ಇವರು (50) (ಅಕ್ಟೊಬರ್ 05 ರಂದು) ಭಾನುವಾರ ಸಂಜೆ ಸಮಯದಲ್ಲಿ 4.15ಗಂಟೆಗೆ ಅನಾರೋಗ್ಯ ದಿಂದ ಹೊಂದಿರುವ ಇವರು ಕಳೆದ ಹದಿನೈದು ದಿನಗಳಿಂದ ಅನಾರೋಗ್ಯ ದಿಂದ ಬಳಲುತ್ತಿದ್ದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ, ಮೃತರು ಇವರ ಕುಟುಂಬದಲ್ಲಿ ಮೃತ ಗಿಡ್ಡ ಉಚ್ಚೆoಗೇಪ್ಪರ ದುರುಗೇಶ್ ಇವರ ನ್ನು (ದುರ್ಗಾ ಪ್ರಸಾದ್) ಎಂತಲೂ ಸ್ನೇಹಿತರು ಕರೆಯುತ್ತಿದ್ದರು *ಅಂತ್ಯಕ್ರಿಯೆ*-ಅಕ್ಟೊಬರ್, 06-10-2025 ರ ಮದ್ಯಾಹ್ನ 12 . ಗಂಟೆಗೆ ,ಸುಮಾರಿಗೆ ಪಟ್ಟಣದ 16 ನೇ ವಾರ್ಡಿನ ರಾಜೀವ್ ಗಾಂಧಿ ನಗರ ಪಕ್ಕದಲ್ಲಿ ಬರುವ ಶಾಂತಿವನದಲ್ಲಿ ಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಗುರುಹಿರಿಯರು ತಿಳಿಸಿದ್ದಾರೆ *ಸಂತಾಪ*- ಕುಟುಂಬದ ಅಣ್ಣಾ ತಮ್ಮಂದಿರು ಹಾಗೂ ತಂಗಿ ಮತ್ತು ಅಳಿಯ ಮಾವಂದಿರು ಅನೇಕ ಬಂಧುಗಳು ಹಾಗೂ ಅಪಾರ ಕುಟುಂಬ ಬಂಧು ಬಳಗದವರು ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ನಗರದ ಹಿರಿಯರು ಅಗಲಿಕೆಯಿಂದಾಗಿ , ಅವರ ಕುಟುಂಬದಲ್ಲಿ ದುಖಃ ಮಡುವುಗಟ್ಟಿದೆ ಸೂಚಕದ ಛಾಯೆ ಆವರಿಸಿದೆ. ಸಮಸ್ತ ಬಂಧುಗಳು , ದುಖಃತಪ್ತರಾಗಿದ್ದಾರೆ. ಮಾದಿಗ ಸಮುದಾಯದವರು ಸೇರಿದಂತೆ. ವಿವಿದ ಸಮುದಾಯದವರು. ಕೂಡ್ಲಿಗಿ ಅಂಬೇಡ್ಕರ ನಗರ ಸಮಸ್ತ ಗ್ರಾಮಸ್ಥರು. ಕ್ಷೇತ್ರದ ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು. ಕೂಡ್ಲ...

ಹಗಲು-ರಾತ್ರಿ ಎನ್ನದೇ ಸರ್ವೆ ಮಾಡಿ ಐದೇ ದಿನದಲ್ಲಿ ಸಮೀಕ್ಷೆ ಮುಗಿಸಿದ ಪಿ.ಎಂ.ಶ್ರೀ ಧನಗರವಾಡಿ ಶಾಲೆಯ ಅತಿಥಿ ಶಿಕ್ಷಕ ಸಿದ್ದಯ್ಯ ಹಿರೇಮಠ

ಇಮೇಜ್
  ಮಸ್ಕಿ : ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕಾರ್ಯ ಆರಂಭವಾಗಿದ್ದು, ನೆಟ್‌ವರ್ಕ್‌ ಸಮಸ್ಯೆ, ಸರ್ವರ್‌ ಸಮಸ್ಯೆ ಮಧ್ಯೆ ಶಿಕ್ಷಕರು ನಿಧಾನಕ್ಕೆ ಸರ್ವೆ ಮುಗಿಸುತ್ತಿದ್ದಾರೆ. ಸಿಟಿಗಳಲ್ಲೇ ಜನರು ಸರ್ವೆಗೆ ಸರಿಯಾಗಿ ಸ್ಪಂದನೆ ನೀಡದೇ ಇರುವುದು, ನಾಳೆ ಬನ್ನಿ ಎನ್ನುವುದು, ಒಟಿಪಿ ಹೇಳಲು ಹೆದರುತ್ತಿದ್ದಾರೆ. ಈ ಸಮಸ್ಯೆಗಳ ಮಧ್ಯೆ ಶಿಕ್ಷಕರಯೊಬ್ಬರು ಬರೀ ಐದೇ ದಿನಗಳಲ್ಲಿಯೇ ಸರ್ವೆ ಮುಗಿಸಿದ್ದಾರೆ. ಸಿಟಿಗಳಲ್ಲಿ ಶಿಕ್ಷಕರಿಗೆ 121 ಮನೆಗಳ ಟಾರ್ಗೆಟ್‌ ನೀಡಲಾಗಿದೆ. ಈ ಟಾರ್ಗೆಟ್‌ನ್ನು ಮಸ್ಕಿ ಪಟ್ಟಣದ ಗಾಂಧಿ ನಗರದಲ್ಲಿ ಅತಿಥಿ ಶಿಕ್ಷಕರಾದ ಸಿದ್ದಯ್ಯ ರವರು ಮುಗಿಸಿದ್ದಾರೆ. ಇಡೀ ಪಟ್ಟಣದಲ್ಲಿ ಸರ್ವೆ ಮುಗಿಸಿದ ಮೊದಲ ಶಿಕ್ಷಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಟ್ಟಣದ ಶಿಕ್ಷಕ ಸಿದ್ದಯ್ಯ ಅವರು ಮೊದಲ ದಿನ ಸರ್ವೆ ಮಾಡಲಾಗದೆ ಒದ್ದಾಡಿದ್ದಾರೆ. ಇಡೀ ದಿನಕ್ಕೆ ಕೇವಲ ಒಂದು ಸರ್ವೆ ಮಾತ್ರ ಪೂರ್ಣಗೊಂಡಿದೆ. ಆದರೆ ನಂತರ ಸರ್ವೆ ಸರಾಗವಾಗಿ ನಡೆದಿದೆ. ಜನ ಕೆಲಸಕ್ಕೆ ಹೋಗಿಬಿಡುತ್ತಾರೆ. ಇನ್ನು ಸಿಗುವುದು ರಾತ್ರಿಯೇ! ಹಾಗಾಗಿ ಅತಿಥಿ ಶಿಕ್ಷಕರಾದ  ಸಿದ್ದಯ್ಯ ರವರು ಜನ ಕೆಲಸಕ್ಕೆ ಹೊರಡುವ ಮುನ್ನ, ಕೆಲಸದಿಂದ ಬಂದ ನಂತರ, ಹೀಗೆ ಹಗಲು ರಾತ್ರಿ ಎನ್ನದೇ ಸರ್ವೆ ಮುಗಿಸಿದ್ದಾರೆ. ನಾನು ಪಿ.ಎಂ.ಶ್ರೀ ಸರ್ಕಾರಿ ಪ್ರಾಥಮಿಕ ಶಾಲೆ ಧನಗರವಾಡಿ ಶಾಲೆಯ ಯಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ಮಾಡ್ತಿದ್ದೇನೆ. ಹಗಲು ಹೊತ್ತು ಸರ್ವರ್ ಸ...